ನಾನ್‌ಸ್ಟಾಪ್‌ ಶಿವಭಜನೆ; 47 ವರ್ಷದಿಂದ ಕ್ಷಣವೂ ನಿಲ್ಲದ ಸ್ಮರಣೆ


Team Udayavani, May 20, 2017, 3:00 PM IST

16.jpg

ಅದೊಂದು ಕಬ್ಬಿಣದ ಸರಳುಗಳಿರುವ ಕೋಣೆ. ಅದರೊಳಗೆ ನಿಂತವರ ಕೈಯಲ್ಲಿ ತಂಬೂರಿ ಮಿಡಿಯುತ್ತಿದೆ. ಅವರ ಬಾಯಿಯಿಂದ “ಓಂ ನಮಃ ಶಿವಾಯಃ’ ಎಂಬ ಶಿವನಾಮ ಮೊಳಗುತ್ತಿದೆ! ಹೀಗೆ ತಂಬೂರಿ ಹಿಡಿದು ಹೇಳುವುದರಲ್ಲಿ ಏನು ವಿಶೇಷವೆಂದು ನೀವು ಕೇಳಬಹುದು. ಒಂದಲ್ಲ, ಎರಡಲ್ಲ ಕಳೆದ 47 ವರ್ಷಗಳಿಂದಲೂ ಕ್ಷಣವೂ ನಿಲ್ಲದೆ ಇಲ್ಲಿ ನಿರಂತರವಾಗಿ ಈ ಶಿವನಾಮ ಸ್ಮರಣೆ ಮೊಳಗುತ್ತಿದೆ! ಇಲ್ಲಿ ನಾಲ್ಕು ಗಂಟೆಗೊಮ್ಮೆ ಸ್ಮರಣೆ ಮಾಡುವವರು ಬದಲಾಗುತ್ತಾರೆ. ಆದರೆ, 47 ವರ್ಷಗಳಿಂದ ತಂಬೂರಿಯನ್ನು ಕೆಳಗಿಟ್ಟಿಲ್ಲ! ಶಿವನಾಮಸ್ಮರಣೆ ಕ್ಷಣವೂ ಇಲ್ಲಿ ನಿಂತಿಲ್ಲ!

ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ನಗರಿ ಬಾದಾಮಿಯಿಂದ 21 ಕಿ.ಮೀ. ದೂರದ ಸೋಮನಕೊಪ್ಪದಲ್ಲಿ ಈ ಭಜನೆ ಕೇಳಿಸುತ್ತದೆ. ಇಲ್ಲಿನ ಶಿವಾನಂದ ಮಠ ಈ ಭಜನೆಯಿಂದಲೇ ಗಮನ ಸೆಳೆದಿದೆ.

ಏನಿದರ ಹಿನ್ನೆಲೆ?

ಅದು 1970ರ ಆಗಸ್ಟ್‌ ತಿಂಗಳ ಕೊನೆಯ ವಾರದ ಮಾತು. ಗದುಗಿನ ಶಿವಾನಂದ ಮಠದ ಪೂರ್ಣಾನಂದ ಶ್ರೀಗಳು ಸೋಮನಕೊಪ್ಪ, ಜಾಲಿಕಟ್ಟಿ ಮುಂತಾದ ಈ ಭಾಗದ ಗ್ರಾಮಗಳಲ್ಲಿ ಸಂಚರಿಸುತ್ತಾ ಗ್ರಾಮಸ್ಥರ ಭಕ್ತಿಗೆ ಪಾತ್ರರಾಗಿದ್ದರು. ಅದೊಂದು ದಿನ ಸೋಮನಕೊಪ್ಪದಲ್ಲಿದ್ದ ಸ್ವಾಮಿಗಳ ಬಳಿ ಬಂದ ಜಾಲಿಕಟ್ಟಿಯ ಜನತೆ, ತಮ್ಮೂರಿಗೆ ಬಂದು ನೆಲೆ ನಿಲ್ಲಲು ಶ್ರೀಗಳನ್ನು ಕೋರುತ್ತಾರೆ. ಆಗ ಸೋಮನಕೊಪ್ಪದವರು ಮಹಾಸ್ವಾಮಿಗಳಿಗೆ ತಮ್ಮೂರಲ್ಲಿಯೇ ಇರುವಂತೆ ದುಂಬಾಲು ಬೀಳುತ್ತಾರೆ. ಎರಡೂ ಊರುಗಳಲ್ಲಿ ತಾವು ಎಲ್ಲಿ ನೆಲೆ ನಿಲ್ಲಬೇಕು ಎಂಬುದಕ್ಕೆ ಶ್ರೀಗಳು ಹಾಕಿದ ಷರತ್ತು ಹೀಗಿತ್ತು: “ಯಾವ ಊರಿನವರು ಇಂದಿನಿಂದ ನಿರಂತರವಾಗಿ 39 ವರುಷ ಶಿವನಾಮಸ್ಮರಣೆ ಮಾಡಲು ಒಪ್ಪುವರೋ ಆ ಊರಿನಲ್ಲಿ ನೆಲೆ ನಿಲ್ಲುತ್ತೇನೆ’ ಎಂದರು! 

ಶ್ರೀಗಳ ಷರತ್ತನ್ನು ಸೋಮನಕೊಪ್ಪದ ಜನತೆ ಒಪ್ಪಿಕೊಂಡರು. ಕೇವಲ ಬಾಯಿ ಮಾತಿಗೆ ಒಪ್ಪದ ಶ್ರೀಗಳು, ಹಾಗೊಂದು ಕರಾರು ಪತ್ರವನ್ನು ಗ್ರಾಮಸ್ಥರ ಕೈಯಲ್ಲಿ ಬರೆಸುತ್ತಾರೆ. ಅದಕ್ಕೆ ಸಮ್ಮತಿ ಸೂಚಿಸಿದ್ದಕ್ಕೆ ಹಿರಿಯರಿಂದ ಸಹಿಯನ್ನೂ ಹಾಕಿಸುತ್ತಾರೆ!

ಏನಿದೆ ಒಪ್ಪಿಗೆ ಪತ್ರದಲ್ಲಿ?

“..ಎಲ್ಲರೂ ಆತ್ಮ ಸಂತೋಷದಿಂದ ಸತ್ಯದಲ್ಲಿ ಹರಿಶ್ಚಂದ್ರನಂತೆ ಮತ್ತು ಭಕ್ತಿಯಲ್ಲಿ ಬಸವಣ್ಣನವರಂತೆ ಸದರಿ ಸಪ್ತಾಹವನ್ನು ನಡೆಸಲು ಒಪ್ಪಿಕೊಂಡಿರುತ್ತೇವೆ…’ ಎಂಬ ವಿವರಗಳಿರುವ ಒಪ್ಪಿಗೆ ಪತ್ರಕ್ಕೆ ಗ್ರಾಮದ ಹಿರಿಯರಾದ ಸೋಮನಿಂಗಪ್ಪ, ಸೋಮಪ್ಪ ಮುಷ್ಠಿಗೇರಿ, ಪಾಟೀಲ ವೈ.ಆರ್‌, ಪಕೀರಪ್ಪ, ಭೀಮಪ್ಪ ದಂಡಿನ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ. ಹೀಗೆ ಆಗಸ್ಟ್‌ 23, 1970ರಿಂದ ಅಖಂಡ ಭಜನೆ ಆರಂಭವಾಗುತ್ತದೆ. ಕೊಟ್ಟ ಮಾತಿನಂತೆ ಶ್ರದ್ಧಾಭಕ್ತಿಯಿಂದ ಸಾಗುತ್ತದೆ.

ನಿರಂತರ ಶಿವಸ್ಮರಣೆಯಿಂದ ಈ ಭಾಗ, ಪುಣ್ಯಭೂಮಿ ಆಗುತ್ತದೆ. ಎಲ್ಲರ ಬದುಕಿನಲ್ಲೂ ಸುಖ- ಸಂತೋಷ ನೆಲೆಯಾಗುತ್ತದೆ ಎಂದು ಅಂದು ಪೂರ್ಣಾನಂದರು ಹೇಳಿದ್ದರಂತೆ. “ಅಂದು ಶ್ರೀಗಳು ಹೇಳಿದ ಮಾತು, ಇಂದು ನಿಜವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಅಂದಾಜು 2 ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದ ಪ್ರತಿ ಮನೆಗೆ ಒಂದೂವರೆ ತಿಂಗಳಿಗೊಮ್ಮೆ ಭಜನೆಯ ಸರದಿ ಬರುತ್ತದೆ. ಸರದಿ ಬಂದಾಗ ಆ ಮನೆಯಲ್ಲಿನ ಮಕ್ಕಳು, ಮಹಿಳೆಯರು, ಹಿರಿಯರು ಯಾರಾದರೊಬ್ಬರು ಶಿವಾನಂದ ಮಠಕ್ಕೆ ಬಂದು ಸ್ಮರಣೆಯಲ್ಲಿ ತೊಡಗಬೇಕು. ಇಲ್ಲಿಯತನಕ ಒಮ್ಮೆಯೂ ಸ್ಮರಣೆ ನಿಂತಿಲ್ಲ. ಸರದಿ ಬಂದವರ ಮನೆಯಲ್ಲಿ ಅಡಚಣೆ ಇದ್ದರೆ ಬೇರೆಯವರನ್ನು ಇಲ್ಲಿಗೆ ಕಳುಹಿಸುತ್ತಾರೆ.

ಮುಂದುವರಿದ ಸ್ಮರಣೆ!
ಪೂರ್ಣಾನಂದ ಶ್ರೀಗಳು ಹೇಳಿದ ಪ್ರಕಾರವಾಗಿ 2009ಕ್ಕೆ ಸ್ಮರಣೆ ಮುಗಿಯಬೇಕಿತ್ತು. ಏಕೆಂದರೆ, ಹಾಕಿದ ಕರಾರಿನಂತೆ ಅಂದಿಗೆ 39 ವರುಷ ಮುಗಿಯುತ್ತದೆ. ಆದರೆ, ಮಠದ ಇಂದಿನ ಶ್ರೀ ಶ್ರದ್ಧಾನಂದ ಸ್ವಾಮೀಜಿ, “ಇನ್ನೂ ಛಲೋ ಆಗತದಾ, ಸ್ಮರಣೆ ನಿಲ್ಲಿಸಬೇಡಿ’ ಎಂದು ಊರವರಿಗೆ ಹೇಳಿದ್ದರಿಂದ ಅದನ್ನು ಮುಂದುವರಿಸಲಾಗಿದೆ.

ಪ್ರವೀಣರಾಜು ಸೊನ್ನದ 

ಟಾಪ್ ನ್ಯೂಸ್

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.