ಹುಣಸೂರಿನಲ್ಲಿ ಭೀಕರ ಅಪಘಾತ; ಬೆಂಗಳೂರಿನ ನಾಲ್ವರು ನಿವಾಸಿಗಳು ಬಲಿ
Team Udayavani, Mar 25, 2017, 7:16 PM IST
ಮೈಸೂರು:ಅತಿಯಾದ ವೇಗದಿಂದ ನಿಯಂತ್ರಣ ತಪ್ಪಿ ಫೋರ್ಡ್ ಕಾರು ಪಲ್ಟಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಣಸೂರು ಠಾಣಾ ವ್ಯಾಪ್ತಿಯ ನಲ್ಲೂರುಪಾಲಾ ಬಳಿ ಸಂಭವಿಸಿದೆ.
ಹುಣಸೂರು ತಾಲೂಕು ನಲ್ಲೂರು ಪಾಲಾ ಗ್ರಾಮದ ಬಳಿ ಈ ಭೀಕರ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದವರು ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿಗಳೆಂದು ಗುರುತಿಸಲಾಗಿದೆ.
ಫೋರ್ಡ್ ಕಾರಿನಲ್ಲಿದ್ದ ರಂಜನ್ ಸಾಲಂಕಿ, ಕಿಶೋರ್ ಯಾದವ್, ಕೌಶಿಕ್ ಯಾದವ್, ಘೋರ್ಪಡೆ ಮೃತರಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.