ಸಣ್ಣಪುಟ್ಟ ವಿಷಯಕ್ಕೂ ಪೊಲೀಸ್‌ ಠಾಣೆ ಮೆಟ್ಟಿಲೇರಬೇಡಿ


Team Udayavani, May 26, 2017, 12:40 PM IST

mys4.jpg

ಹುಣಸೂರು: ಸಣ್ಣಪುಟ್ಟ ವಿಷಯಕ್ಕೂ ಜನರು ಪೊಲೀಸ್‌ ಠಾಣೆ ಮೆಟ್ಟಿಲೇರುವ ಪ್ರವೃತ್ತಿ ತೊರೆದು ಗ್ರಾಮದಲ್ಲೇ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡಲ್ಲಿ ಸಾಮರಸ್ಯ ಉಳಿಯಲಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಹೇಳಿದರು.

ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಹನಗೋಡಿನಲ್ಲಿ ಆರಂಭಗೊಂಡ ಪೊಲೀಸ್‌ ಉಪಠಾಣೆ ಉದ್ಘಾಟಿಸಿ ಮಾತನಾಡಿ, ಈ ಭಾಗದ ಜನರ ಬಹುದಿನದ ಬೇಡಿಕೆಯಂತೆ  ಇಲ್ಲಿಗೆ ತಕ್ಷಣಕ್ಕೆ ಉಪ ಠಾಣೆ ಆರಂಭಿಸಿದ್ದು, ಶೀಘ್ರದಲ್ಲೇ ಸಂಪೂರ್ಣ ಪೊಲೀಸ್‌ ಠಾಣೆಯಾಗಿ ಮೇಲ್ದರ್ಜೆಗೇರಲಿದ್ದು, ಎಸ್‌.ಐ ದರ್ಜೆಯ ಅಧಿಕಾರಿ ನೇಮಕವಾಗಲಿದೆ ಎಂದರು.

ಹಳ್ಳಿಗೆ ಪೊಲೀಸ್‌ ಠಾಣೆಗಳು ಬೇಡವೆಂಬ ಮನೋಸ್ಥಿತಿ ತಮ್ಮದಾದರೂ, ಈ ಭಾಗದ್ದೇ ಹೆಚ್ಚು  ಪ್ರಕರಣಗಳು ದಾಖಲಾಗುತ್ತಿದ್ದು, ಜನರ ಅನುಕೂಲ ಕ್ಕೋಸ್ಕರ ಠಾಣೆ ಆರಂಭಿಸಲಾಗಿದೆ. ಜನರು ಇದೀಗ  ಸಣ್ಣ-ಪುಟ್ಟ ಘಟನೆ, ಗಲಾಟೆ ಹಾಗೂ ಕುಟುಂಬದ ಕಲಹಕ್ಕೂ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಾರೆ.

ಆದರೆ ಇಂತಹ ಪ್ರಕರಣಗಳನ್ನು ಪೊಲೀಸರು ಮಾನವೀಯತೆಯಿಂದ ನೋಡಬೇಕು, ಪ್ರಕರಣ ದಾಖಲಿಸದೆ ಅವರಿಗೆ ತಿಳಿಹೇಳುವ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿ, ನೆಮ್ಮದಿ ಮೂಡುವಂತೆ ಮಾಡಬೇಕು. ಹಳ್ಳಿಗಳಲ್ಲಿ  ನಡೆಯುವ ಗಲಾಟೆಗಳನ್ನು ಗ್ರಾಮಸ್ಥರೇ ಮುಂದೆ ನಿಂತು ಬಗೆಹರಿಸಿ ಕೊಳ್ಳುವುದು ಒಳಿತು ಎಂದು ತಿಳಿಸಿದರು.

ಸುಳ್ಳು ಪ್ರಕರಣ ದಾಖಲಿಸಬೇಡಿ: ಪೊಲೀಸರು ರೌಡಿಸಂ, ಬ್ಲಾಕ್‌ವೆುàಲ್‌, ಅನಾಚಾರ ಹಾಗೂ ಗ್ರಾಮದ ನೆಮ್ಮದಿ ಹಾಳು ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ಸದೆ ಬಡೆಯಬೇಕು. ಮಧ್ಯವರ್ತಿಗಳಿಗೆ ಅವಕಾಶ ಕೊಡಬೇಡಿ, ಬೇಲಿಯೇ ಎದ್ದು ಹೊಲ ಮೇಯ್ದಂತೆ, ಸುಳ್ಳು ಪ್ರಕರಣ ದಾಖಲಿಸಬೇಡಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರೆಂದು ಸಲಹೆ ನೀಡಿದರು.

ವರ್ಷìದಲ್ಲಿ 316 ಪ್ರಕರಣ: ಎ.ಎಸ್‌.ಪಿ ಹರೀಶ್‌ ಪಾಂಡೆ ಮಾತನಾಡಿ, ಹುಣಸೂರು ನಗರದಿಂದ ಬಹಳಷ್ಟು ದೂರವಿರುವ ಹನಗೋಡು  ಹೋಬಳಿ ನಾಗರಹೊಳೆ ಉದ್ಯಾನದಂಚಿನಲ್ಲಿದ್ದು, ಕಳೆದ ವರ್ಷ ಗ್ರಾಮಾಂತರದಲ್ಲಿ ದಾಖಲಾದ 600 ಪ್ರಕರಣದಲ್ಲಿ  ಈ ಭಾಗದಲ್ಲಿ 316 ಪ್ರಕರಣಗಳು ನಡೆದಿದ್ದು, ಈ ಭಾಗದಿಂದ ಬೆಳಗ್ಗೆ ಎದ್ದು ಹುಣಸೂರಿಗೆ ಬರಬೇಕಾದಲ್ಲಿ ತೀರ್ಥಯಾತ್ರೆ ನಡೆಸಿದಂತೆಯಾದ್ದರಿಂದ ಜನರ ಅನುಕೂಲ ದೃಷ್ಟಿಯಿಂದ ಇಲ್ಲಿ ಠಾಣೆ ತೆರೆಯ ಲಾಗಿದೆ.

ಎಲ್ಲ ಗ್ರಾಮಗಳಲ್ಲೂ ಬೀಟ್‌ ಪೊಲೀಸ್‌ನಿಂದ ಹಿಡಿದು ಎಸ್‌.ಪಿ ಅವರ ಮೊಬೈಲ್‌ ನಂಬರ್‌ಗಳ ಬೋರ್ಡ್‌ ಅಳವಡಿಸಲಾಗುವುದು, ನ್ಯಾಯ ಸಿಗದಿದ್ದಲ್ಲಿ  ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು, ಗುಪ್ತಮಾಹಿತಿ ನೀಡಬಹುದಾಗಿದ್ದು,  ಇನ್ನು ಮುಂದೆ ಎಲ್ಲ ಗ್ರಾಮಗಳಲ್ಲೂ ಹೊಸ ಬೀಟ್‌ ವ್ಯವಸ್ಥೆ ಕಲ್ಪಿ$ಸಲಾಗುವುದು ಎಂದರು.

ಜಿಪಂ ಸದಸ್ಯೆ ಡಾ.ಪುಷ್ಪಅಮರ್‌ನಾಥ್‌ ಹಾಗೂ  ತಾಪಂ ಸದಸ್ಯೆ ರೂಪಾನಂದೀಶ್‌, ದೇಶಕಾಯುವ ಸೈನಿಕರಂತೆ, ಸಾರ್ವಜನಿಕರ ಆಸ್ತಿ, ನೆಮ್ಮದಿಯ ಜೀವನ ನಡೆಸಲು ಪೊಲೀಸರು ರಕ್ಷಣೆಗಿರುತ್ತಾರೆ. ಠಾಣೆಯಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಬೇಕೆಂದು ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಮಧು ಮಾತನಾಡಿ, ಉಪಠಾಣೆಗಾಗಿ ತಾತ್ಕಾಲಿಕವಾಗಿ ಗ್ರಾಪಂ ಸ್ಥಳ ನೀಡಲಾಗಿದ್ದು, ಬಿ.ಆರ್‌ ಕಾವಲ್‌ ರಸ್ತೆಯ ಬದಿಯಲ್ಲೇ ಠಾಣೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಅರ್ಧ ಎಕರೆ ಭೂಮಿ ಗುರುತಿಸಲಾಗಿದೆ ಎಂದು ತಿಳಿಸಿದರು.

ಗ್ರಾಮಾಂತರ ಠಾಣಾ ಎಸ್‌.ಐ. ಪುಟ್ಟಸ್ವಾಮಿ ಈ ಠಾಣೆ ವ್ಯಾಪ್ತಿಗೆ 52 ಗ್ರಾಮಗಳು ಸೇರಿವೆ, ಎಎಸ್‌ಐ ಹಾಗೂ ಮೂರು ಮಂದಿ ಸಿಬ್ಬಂದಿ ಇರಲಿದ್ದಾರೆ, ಸಂಪೂರ್ಣ ಠಾಣೆಯನ್ನಾಗಿಸಲು ಶಾಸಕರ ಹಾಗೂ ಎಸ್‌ಪಿ ಸೂಚನೆಯಂತೆ ಈಗಾಗಲೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ವೈದ್ಯ ಡಾ.ಜೋಗೇಂದ್ರನಾಥ್‌, ತಾಪಂ ಸದಸ್ಯರಾದ ಶ್ರೀನಿವಾಸ್‌, ಮಂಜುಳ, ಪುಷ್ಪಕಲಾ, ಪ್ರೇಮಾ, ಗ್ರಾಪಂ ಅಧ್ಯಕ್ಷರಾದ ಮಹದೇವಿ, ಚೆಲುವರಾಜು ಹಾಗೂ ಎಸ್‌.ಐ ಷಣ್ಮುಗಂ ಹಾಗೂ ಠಾಣಾ ಸಿಬ್ಬಂದಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.