ಗಿಡಮರ ಉಳಿಸಿ ಬೆಳೆಸಲು ಸೀಡ್‌ಬಾಲ್‌ ಸಹಕಾರಿ


Team Udayavani, May 29, 2017, 1:12 PM IST

mys4.jpg

ಹುಣಸೂರು: ರಾಜ್ಯ ಸರ್ಕಾರದ ಮಹತ್ವಾಂಕಾಂಕ್ಷೆಯ ಯೋಜನೆಗಳಲ್ಲೊಂದಾದ ಸೀಡ್‌ಬಾಲ್‌ ನಿಂದ ಸಸಿ ತಯಾರಿಕೆಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಎರಡನೇ ಬಾರಿಗೆ ಅರಣ್ಯ ಇಲಾಖೆಯ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ ಹಸಿರು ಕ್ರಾಂತಿಯ ಸೀಡ್‌ ಬಾಲ್‌(ಮಣ್ಣುನುಂಡೆ) ತಯಾರಿಸುವ ಕಾರ್ಯಾಗಾರ ನಡೆಯಿತು.

ನಗರದ ಪ್ರಾದೇಶಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಕಾರಿಗಳ ಕಚೇರಿ ಆವರಣದಲ್ಲಿ ಬನ್ನಿಕುಪ್ಪೆ ಜಿಪಂ ವ್ಯಾಪ್ತಿಯ ಗ್ರಾಪಂಗಳು, ಸ್ನೇಹ ಜೀವಿಸಂಸ್ಥೆ, ಗೋಗ್ರೀನ್‌ಕ್ಲಬ್‌, ಅರಣ್ಯಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೀಡ್‌ಬಾಲ್‌ ಹಸಿರು ಕ್ರಾಂತಿಯಲ್ಲಿ ನೆರೆದಿದ್ದ ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಸುಮಾರು 7 ಸಾವಿರಕ್ಕೂ ಹೆಚ್ಚು ಸೀಡ್‌ಬಾಲ್‌ ತಯಾರಿಸಿದರು.

ಜಿಪಂ ಸದಸ್ಯೆ ಡಾ.ಪುಷ್ಪ ಅಮರ್‌ನಾಥ್‌ ಮಾತನಾಡಿ, ಕಳೆದ ಭೂಮಿ ದಿನಾಚರಣೆಯ ಅಂಗವಾಗಿ ಲಕ್ಷಕ್ಕೂ ಹೆಚ್ಚು ಮಣ್ಣಿನುಂಡೆಗಳನ್ನು ತಯಾರಿಸಿ ತಾಲೂಕಿನ ವಿವಿಧ ಕೆರೆ ಅಂಗಳದಲ್ಲಿ ಹಾಕಲಾಗಿದೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಕೆಲವು ಮೊಳಕೆಯೊಡೆದಿರುವುದನ್ನು ಮನಗಂಡು ಇದೀಗ ಮತ್ತೆ ಸೀಡ್‌ಬಾಲ್‌ ತಯಾರಿಸಿ ಅವಶ್ಯವಿರುವೆಡೆ ಹಾಕಲಾಗುವುದು.

ಇದರಿಂದ ಕಡಿಮೆ ಖರ್ಚಿನಲ್ಲಿ ಗಿಡಮರ ಉಳಿಸಿ ಪರಿಸರಕ್ಕೆ ಕೊಡಬಹುದಾದ ದೊಡ್ಡ ಕಾಣಿಕೆ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್‌ ಮಾತನಾಡಿ, ಕಡಿಮೆ ಖರ್ಚಿನಲ್ಲಿ ನಮ್ಮ ಪ್ರಾಚೀನರು ಬಳಸುತ್ತಿದ್ದ ಮಣ್ಣಿನುಂಡೆ ಮೂಲಕ ಸಸಿ ಬೆಳೆಸುವ ಪ್ರವೃತ್ತಿ ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು, ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ  ಈ ಯೋಜನೆ ಸಾಕಾರಗೊಳಿಸಿ,

ರೈತರು, ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ನಾಗರಿಕರು ಇಂತಹ ಪರಿಸರ ಪೂರಕ ಕಾ  ರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಇಂದಿನ ಸೀಡ್‌ಬಾಲ್‌ನಲ್ಲಿ ಜೆವಿಕ ಇಂಧನಕ್ಕೆ ಪೂರಕವಾದ ಹೊಂಗೆ ಸೇರಿದಂತೆ ಹುಣಸೇ, ನೆಲ್ಲಿ, ಬಸರಿ, ನೇರಳೆ ಹೀಗೆ ಅನೇಕ ಬೀಜಗಳನ್ನು ಮಣ್ಣಿನುಂಡೆಯಲ್ಲಿ ಹಾಕಿದರು.

ಮಣ್ಣಿನುಂಡೆ: ರೈತರು ಮಳೆಗಾಲಕ್ಕೂ ಮುನ್ನ ಸಸಿ ತಯಾರಿಸುವ ಸಲುವಾಗಿ ಕೆಮ್ಮಣ್ಣನ್ನು ಸಗಣಿ, ಗೋ ಮೂತ್ರದೊಂದಿಗೆ ಮಿಶ್ರಮಾಡಿ  ಮೂರ್‍ನಾಲ್ಕು ದಿನಗಳ ಕಾಲ ಒಂದೆಡೆ ರಾಶಿಹಾಕಿದ ನಂತರ ಉಂಡೆ ಮಾಡಿಕೊಂಡು ಮಧ್ಯದಲ್ಲಿ ತಮ್ಮ ಜಮೀನಿಗೆ ಬೇಕಾದ ಸಸಿಗಳ ಬೀಜವನ್ನು ಉಂಡೆಯೊಳಗೆ ಹಾಕಿ ನಂತರ ಉಂಡೆಗಳನ್ನು ಒಂದೆಡೆ ಶೇಖರಿಸಿ, ಸಸಿ ಮೊಳಕೆಯೊಡೆದ ನಂತರ ಅಗತ್ಯವಿರುವ ಕಡೆಗಳಲ್ಲಿ ಹಾಕಿ ಪೋಷಿಸುವುದೇ ಸೀಡ್‌ಬಾಲ್‌.

ಅಧಿಕಾರಿಗಳು, ಸ್ವಯಂ ಸೇವಕರೂ ಭಾಗಿ: ಈ ಕಾರ್ಯಕ್ರಮದಲ್ಲಿ ಗೋಗ್ರೀನ್‌ ಸಂಸ್ಥೆ, ಸ್ನೇಹಜೀವಿ ಸಂಸ್ಥೆ, ಅರಣ್ಯ ಸಿಬ್ಬಂದಿ, ಮಹಿಳಾ ಸಂಘಗಳವರ ಜೊತೆಗೆ ಪಿಡಿಒಗಳಾದ ನರಹರಿ, ಶ್ರೀಶೈಲ, ಸೋಮಣ್ಣ, ಭವ್ಯ ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಕೆಲ ಸ್ವಯಂಸೇವಕರು ಸಹ ಮಣ್ಣಿನುಂಡೆ ಮಾಡಿ ಬೀಜ ನೆಟ್ಟು, ಪರಿಸರ ಪ್ರೀತಿ ಮೆರೆದರು.

ಮೊಳಕೆ ಕಂಡು ಹರ್ಷ: ವಿಶ್ವ ಭೂಮಿ ದಿನಾಚರಣೆಯಂದು ವಿವಿಧ ತಳಿಗಳ ಬೀಜಹಾಕಿ, ತಯಾರಿಸಿದ್ದ ಮಣ್ಣಿನುಂಡೆಯನ್ನು ಪ್ರಾಯೋಗಿಕವಾಗಿ ಅರಣ್ಯ ಇಲಾಖೆ ಆವರಣದಲ್ಲಿ ಹಾಕಲಾಗಿತ್ತು. ಮಳೆ ಬೀಳುತ್ತಿದ್ದಂತೆ ಅಲ್ಲಲ್ಲಿ ನೂರಾರು ಸೀಡ್‌ ಬಾಲ್‌ ಗಳಿಂದ ಸಸಿಯ ಮೊಳಕೆಯಾಗಿದ್ದನ್ನು ಅರಣ್ಯ ಇಲಾಖೆಯ ಸಸಿ ಮಡಿ ನಿರ್ವಹಣೆಯ ನೌಕರ ರಮೇಶ ತೋರಿಸಿದ್ದನ್ನು ಕಣ್ತುಂಬಿಕೊಂಡ ಜಿಪಂ ಸದಸ್ಯೆ ಡಾ.ಪುಷ್ಪ, ಇಒ ಕಷ್ಣಕುಮಾರ್‌ ಸೇರಿದಂತೆ ಅನೇಕರು ಪುಳಕಿತಗೊಂಡು ಸೀಡ್‌ಬಾಲ್‌ ತಯಾರಿಕೆಯ ಸಾರ್ಥಕತೆಯಲ್ಲಿ ಮಿಂದೆದ್ದರು.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.