ಮರದ ಅಂಬಾರಿ ಹೊತ್ತು ಅರ್ಜುನ ತಾಲೀಮು
Team Udayavani, Sep 19, 2017, 12:45 PM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನರ ಗೌಜು-ಗದ್ದಲದ ನಡುವೆ ಗಜಗಾಂಭೀರ್ಯದಿಂದ ಸಾಗುವ ಅರ್ಜುನನಿಗೆ ಸೋಮವಾರ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಯಿತು.
ಆ.17 ಮತ್ತು 31ರಂದು 2 ತಂಡಗಳಲ್ಲಿ ಅರಮನೆ ಆವರಣ ಪ್ರವೇಶಿಸಿರುವ ಈ ಬಾರಿಯ ದಸರಾ ಗಜಪಡೆಯ 15 ಆನೆಗಳನ್ನು ಮೊದಲ 20 ದಿನಗಳ ಕಾಲ ಯಾವುದೇ ಭಾರ ಹೇರದೆ ಬೆಳಗ್ಗೆ ಮತ್ತು ಸಂಜೆ ವೇಳೆ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತಿತ್ತು. ನಂತರ 350 ಕೆ.ಜಿ ತೂಕದಿಂದ ಆರಂಭಿಸಿ ಹಂತ ಹಂತವಾಗಿ 50 ಕೆಜಿ ತೂಕ ಹೆಚ್ಚಿಸುತ್ತಾ 750 ಕೆಜಿವರೆಗೆ ಮರಳು ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು.
ಇನ್ನು ಜಂಬೂ ಸವಾರಿಗೆ 12 ದಿನ ಮಾತ್ರ ಬಾಕಿ ಇರುವುದರಿಂದ ಸೋಮವಾರ 350 ಕೆ.ಜಿ ತೂಕದ ಮರದ ಅಂಬಾರಿ ಹಾಗೂ 400 ಕೆಜಿ ತೂಕದ ಮರಳು ಮೂಟೆ ಹೊರಿಸಿ ಅಂಬಾರಿ ಹೊರುವ ತಾಲೀಮು ನಡೆಸಲಾಯಿತು. ಅರಮನೆ ಆವರಣದಲ್ಲಿ ಅರ್ಜುನನ ಬೆನ್ನಮೇಲೆ ಮರದ ಅಂಬಾರಿ ಕಟ್ಟಿದ ನಂತರ ಜಂಬೂಸವಾರಿ ದಿನ ಮುಖ್ಯಮಂತ್ರಿಯವರು ಪುಷ್ಪಾರ್ಚನೆ ಮಾಡುವ ಜಾಗಕ್ಕೆ ಆನೆಯನ್ನು ಕರೆತಂದು ನಿಲ್ಲಿಸಿ, ಅಲ್ಲಿಂದ ಬಲರಾಮ ದ್ವಾರದ ಮೂಲಕ ಹೊರಬಂದು ಬನ್ನಿಮಂಟಪದವರೆಗೆ ಅರ್ಜುನ ಮರದ ಅಂಬಾರಿ ಹೊರುವ ತಾಲೀಮನ್ನು ಯಶಸ್ವಿಯಾಗಿ ಪೂರೈಸಿದ.
ಕುಮ್ಕಿ ಆನೆಗಳಾದ ವರಲಕ್ಷಿ ಮತ್ತು ವಿಜಯ ಆನೆಗಳು ಅರ್ಜುನನ ಅಕ್ಕ-ಪಕ್ಕದಲ್ಲಿ ಸಾಗಿದರೆ, ಇನ್ನುಳಿದ 12 ಆನೆಗಳು ಅರ್ಜುನನ್ನು ಹಿಂಬಾಲಿಸಿದವು. ಅರ್ಜುನ 750 ಕೆ.ಜಿ ಹೊರುವ ಜತೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ಯಶಸ್ವಿಯಾಗಿ ಪೂರೈಸಿದ್ದಾನೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ