ಯುವಕರಲ್ಲಿ ಕ್ರೀಡೋತ್ಸಾಹ ಮೂಡಿಸಿದ ದಸರಾ ಹಾಫ್ ಮ್ಯಾರಥಾನ್‌


Team Udayavani, Sep 25, 2017, 1:13 PM IST

mys4.jpg

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಗೋವಿಂದಸಿಂಗ್‌ ಹಾಗೂ ಮಹಿಳಾ ವಿಭಾಗದಲ್ಲಿ ಎ.ಅಕ್ಷತಾ ಪ್ರಥಮಸ್ಥಾನ ಪಡೆದರು. ನಗರದ ಮೈಸೂರು ವಿವಿ ಓವಲ್‌ ಮೈದಾನದಲ್ಲಿ ಭಾನುವಾರ ನಡೆದ 13ನೇ ಮೈಸೂರು ದಸರಾ ಹಾಪ್‌ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಊಟಿಯ ಗೋವಿಂದಸಿಂಗ್‌ ಗುರಿಮುಟ್ಟುವ ಮೂಲಕ ಅಗ್ರಸ್ಥಾನ ಪಡೆದರು.

ಇವರೊಂದಿಗೆ ಬೆಂಗಳೂರಿನ ಪರ್ವಿಶ್‌ ದ್ವಿತೀಯ ಹಾಗೂ ವಿಜಯಪುರದ ನಾಗೇಶ್‌ ಪವಾರ್‌ ತೃತೀಯ ಸ್ಥಾನ ಪಡೆದರು. ಉಳಿದಂತೆ ಬೆಂಗಳೂರಿನ ಪ್ರವೀಣ್‌ ಕಾಂಬ್ಳೆ, ಊಟಿಯ ಕುಲಪುದಿಯಾರಿ, ಬೆಳಗಾವಿಯ ಎಂ.ಸಾಯಿದಪ್ಪ, ಬೆಂಗಳೂರಿನ ನಂಜುಂಡಪ್ಪ, ಬಾಗಲಕೋಟೆಯ ಐರಪ್ಪ, ಬೆಳಗಾವಿಯ ರಾಜ ಹಾಗೂ ಮಂಗಳೂರಿನ ಸಂತೋಷ್‌ಕುಮಾರ್‌ ನಂತರದ ಹತ್ತು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ಮಹಿಳಾ ವಿಭಾಗ: ಮಹಿಳೆಯರ ಮ್ಯಾರಥಾನ್‌ನಲ್ಲಿ ದಾವಣರೆಗೆಯ ಎ.ಅಕ್ಷತಾ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಇವರಿಗೆ ತೀವ್ರ ಪೈಪೋಟಿ ನೀಡಿದ ಬೆಂಗಳೂರಿನ ಕುಮಾರಿ ಮಮತಾ ದ್ವಿತೀಯ ಹಾಗೂ ಮೈಸೂರಿನ ಕವನಾ ತೃತೀಯ ಸ್ಥಾನಪಡೆದರು. ಇವರೊಂದಿಗೆ ಮೈಸೂರಿನ ಅಶ್ವಿ‌ನಿ, ಗದಗ್‌ನ ಮೇಘನಾ, ಚಳ್ಳಕೆರೆಯ ರಂಜಿತಾ, ಬೆಂಗಳೂರಿನ ಅರ್ಪಿತ, ಮೈಸೂರಿನ ಕೆ.ಎಸ್‌.ಮೇಘಾ, ಬಳ್ಳಾರಿಯ ಉಷಾ ರೋಹಿಣಿ ಮತ್ತು ಬೆಂಗಳೂರಿನ ದೇವಿಕ ಶ್ರೀಕಾಂತ್‌ ಮೊದಲ ಹತ್ತು ಸ್ಥಾನಗಳಲ್ಲಿ ಗುರುತಿಸಿಕೊಂಡರು.

ಓಟ: ದಸರೆಯ ಅಂಗವಾಗಿ ನಡೆದ ಪುರುಷರ 10 ಕಿ.ಮೀ ಓಟ ಸ್ಪರ್ಧೆಯಲ್ಲಿ ಬಾದಾಮಿಯ ಮಹಾಕುಟ್ಟೇಶ್ವರ, ಮೈಸೂರಿನ ಚೇತನ್‌ ಹಾಗೂ ಬೆಳಗಾವಿಯ ಮಲ್ಲೇಶ್‌ ಪಾಟೀಲ್‌ಮೊದಲ ಮೂರು ಸ್ಥಾನಪಡೆದರು. ಮಹಿಳೆಯರ ವಿಬಾಗದ 6ಕಿ.ಮೀ ಓಟದಲ್ಲಿ ಬೆಂಗಳೂರಿನ ಸ್ಪಪ್ನ ಪಾಟೀಲ್‌, ಪ್ರಥಮ, ಮಂಗಳೂರಿನ ಚೈತ್ರ ದೇವಾಂಗ್‌ ದ್ವಿತೀಯ ಹಾಗೂ ಮೈಸೂರಿನ ತಿಪ್ಪವ್ವ ಸಣ್ಣಕ್ಕಿ ತೃತೀಯ ಸ್ಥಾನವನ್ನು ಪಡೆದರು.

ನಗರದ ಮೈಸೂರು ವಿವಿ ಓವಲ್‌ ಮೈದಾನದಿಂದ ಆರಂಭಗೊಂಡ ಹಾಫ್ ಮ್ಯಾರಥಾನ್‌ಗೆ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಆಟಗಾರ್ತಿ ನವನೀತ ಹಾಗೂ ಅಂತಾರಾಷ್ಟ್ರೀಯ ಅಥ್ಲೀಟ್‌ ರೀನಾ ಹಸಿರು ನಿಶಾನೆ ತೋರಿದರು. ವಿವಿಧ ವಯೋಮಾನದ ಸಾವಿರಾರು ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಹೆಜ್ಜೆಹಾಕಿದ ಜಿಲ್ಲಾಧಿಕಾರಿ: ದಸರೆಯ ಅಂಗವಾಗಿ ನಡೆದ ಓಟ ಸ್ಪರ್ಧೆಯಲ್ಲಿ ಬಾಗವಹಿಸಿದ್ದ ಸ್ಪರ್ಧಿಗಳ ಜತೆಗೆ ಜಿಲ್ಲಾಧಿಕಾರಿ ರಂದೀಪ್‌ ಡಿ. ಸಹ ಓಟದಲ್ಲಿ ಹೆಜ್ಜೆಹಾಕಿದರು. ಜಿಲ್ಲಾಧಿಕಾರಿ ಸಾಮಾನ್ಯ ಸ್ಪರ್ಧಿಗಳೊಂದಿಗೆ ಓಟದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಅಲ್ಲದೆ ಓವಲ್‌ ಮೈದಾನದಿಂದ ಆರಂಭವಾದ ಓಟಕ್ಕಾಗಿ ನಿಗದಿಗೊಳಿಸಿದ್ದ ಮಾರ್ಗದಲ್ಲೇ ಸಾಗಿದ ಡೀಸಿ ನಿಗದಿತ 10ಕೆ ಗುರಿ ತಲುಪಿ ಯಶಸ್ವಿಯಾದರು.

ಟಾಪ್ ನ್ಯೂಸ್

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.