ಬೇನಾಮಿ ವಹಿವಾಟು,ಕಾಳ ಚಿನ್ನದ ವಿರುದ್ಧ ಕಠಿನ ಕ್ರಮ: ವೆಂಕಯ್ಯ ನಾಯ್ಡು
Team Udayavani, Jan 18, 2017, 7:40 PM IST
ಕೋಟ್ಟಯಂ : ಬೇನಾಮಿ ವ್ಯವಹಾರಗಳನ್ನು ತಡೆಯಲು ಹಾಗೂ ಚಿನ್ನದ ರೂಪದಲ್ಲಿ ಸಂಗ್ರಹಿಸಿಡಲಾಗಿರುವ ಕಾಳ ಸಂಪತ್ತನ್ನು ಬಯಲಿಗೆಳೆಯಲು ಸರಕಾರ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಇಂದಿಲ್ಲಿ ಹೇಳಿದರು.
ನೋಟು ಅಪನಗದೀಕರಣದ ಬಳಿಕ ಭ್ರಷ್ಟಾಚಾರ ಮತ್ತು ಕಪ್ಪು ಹಣ ವಿರುದ್ಧದ ಸಮರವನ್ನು ಸರಕಾರ ಮುಂದುವರಿಸಲಿದ್ದು ಶೀಘ್ರವೇ ಸರಕಾರ ಬೇನಾಮಿ ಆಸ್ತಿ ವಹಿವಾಟನ್ನು ತಡೆಯಲು ಕಠಿನ ಕಾನೂನನ್ನು ಅನುಷ್ಠಾನಿಸಲಿದೆ ಎಂದು ವೆಂಕಯ್ಯ ನಾಯ್ಡು ಎಚ್ಚರಿಸಿದರು.
ಈ ಸಂಬಂಧವಾಗಿ ಸರಕಾರವು 1988ರ ಬೇನಾಮಿ ವ್ಯವಹಾರಗಳ (ನಿಷೇಧ) ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲಿದೆ ಎಂದು ಸಚಿವ ನಾಯ್ಡು ಅವರು ಪಕ್ಷದ ರಾಜ್ಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಈ ಕಾನೂನನ್ನು ಅನುಷ್ಠಾನಿಸಿರಲಿಲ್ಲ ಎಂದು ನಾಯ್ಡು ಹೇಳಿದರು. ಕಪ್ಪು ಹಣದ ವಿರುದ್ಧ ಸರಕಾರ ಕೈಗೊಂಡ ನೋಟು ಅಪನಗದೀಕರಣ ಕ್ರಮವು ವಿಫಲವಾಗಿದೆ ಎಂಬ ವಾದವನ್ನು ಅವರು ತಿರಸ್ಕರಿಸಿದರು.
ನೋಟು ಅಪನಗದೀಕರಣದ ಬಳಿಕ ಬ್ಯಾಂಕಿಗೆ ಮರಳಿರುವ ನಿಷೇಧಿತ ಹಣವು ಸಾಚಾ ಆಗಿದೆ ಎಂಬ ವಾದಕ್ಕೆ ಉತ್ತರಿಸಿದ ಸಚಿವ ನಾಯ್ಡು, ಕೂಲಂಕಷ ಪರಿಶೀಲನೆಯ ಬಳಿಕವೇ ಅದು ಶ್ರುತಪಡಲಿದೆ ಎಂದು ಹೇಳಿದರು. ನೋಟು ಅಪನಗದೀಕರಣ ಕ್ರಮದಿಂದ ದೇಶದ ಜನರಿಗೆ ಹಾಗೂ ಆರ್ಥಿಕತೆಗೆ ದೀರ್ಘ ಕಾಲದಲ್ಲಿ ಲಾಭವಾಗಲಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ