ಏರಿಂಡಿಯಾ ಖಾಸಗೀಕರಣ ಪ್ರಸ್ತಾಪ ತಿರಸ್ಕರಿಸಿದ್ದ ಪ್ರಣಬ್
Team Udayavani, Feb 20, 2017, 3:45 AM IST
ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ಬಗ್ಗೆ ಯುಪಿಎ ಸರ್ಕಾರ ಯೋಜಿಸಿತ್ತು. ಆದರೆ ಉನ್ನತಾಧಿಕಾರದ ಸಚಿವರ ಸಭೆಯಲ್ಲಿ ಈ ಪ್ರಸ್ತಾಪ ಚರ್ಚೆಗೆ ಬಂದಾಗ ಸಮಿತಿ ಸದಸ್ಯರಾಗಿದ್ದ ಹೆಚ್ಚಿನ ಸಚಿವರು ಖಾಸಗಿಯವರಿಗೆ ವಹಿಸಲು ಒಲವು ವ್ಯಕ್ತಪಡಿಸಿದ್ದರು.
ಆದರೆ ಆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್ ಅದನ್ನು ವಿರೋಧಿಸಿದ್ದರು. ಹಿರಿಯ ಅಧಿಕಾರಿಗಳು ಸೂಚಿಸಿದ್ದ ಶಿಫಾರಸುಗಳನ್ನು ಸಮಿತಿ ಒಪ್ಪಿಕೊಳ್ಳಲು ಮುಂದಾಗಿತ್ತು. ಮುಖರ್ಜಿ ಅವರು ಖಾಸಗೀಕರಣ ಬಿಟ್ಟು ಉಳಿದೆಲ್ಲ ಶಿಫಾರಸುಗಳ ಜಾರಿಗೆ ಒಪ್ಪಿದ್ದರು. ಸಂಸ್ಥೆಯನ್ನು ಖಾಸಗೀಕರಣ ಮಾಡುವುದು ಹಾಗೂ ಮುಚ್ಚುವುದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದ್ದರು.
ಈ ಕುರಿತು ಮಾಹಿತಿ ಹಕ್ಕಿನಡಿ ವಿವರ ಸಂಗ್ರಹಿಸಿರುವುದಾಗಿ “ದಿ ಹಿಂದೂ’ ಹೇಳಿಕೊಂಡಿದೆ. ಹೀಗಾಗಿ ಅದನ್ನು ಕೈಬಿಡಲಾಯಿತು. ಸಚಿವರಾಗಿದ್ದ ಜೈಪಾಲ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದರೆ, ಸಚಿವರಾಗಿದ್ದ ಅಜಿತ್ ಸಿಂಗ್, ಚಿದಂಬರಂ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್