ಜೂ.1ರಿಂದ ಆಧಾರ್ ವಹಿವಾಟು ಸುರಕ್ಷಿತ
Team Udayavani, Mar 20, 2017, 9:58 AM IST
ಹೊಸದಿಲ್ಲಿ: ಬಯೋಮೆಟ್ರಿಕ್ ಆಧರಿತ ವಹಿವಾಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಧಾರ್ ಮೂಲಕ ನಡೆಯುವ ಎಲ್ಲ ಹಣಕಾಸಿನ ವ್ಯವಹಾರಗಳನ್ನು ಸುರಕ್ಷಿತವಾಗಿಸಲು ಮುಂದಾಗಿರುವ ವಿಶಿಷ್ಟ ಗುರುತು ಪ್ರಾಧಿಕಾರ ಹೊಸ ನೀತಿಯೊಂದನ್ನು ರೂಪಿಸಿದೆ. ಅದರಂತೆ ಆಧಾರ್ ದೃಢೀಕರಣವನ್ನು ಬಳಸುವ ಎಲ್ಲ ಸಾಧನಗಳು ಜೂನ್ 1ರ ಒಳಗಾಗಿ ತನ್ನ ಹೊಸ ಗೂಢಲಿಪಿ ಮಾನದಂಡಗಳನ್ನು ಅನುಸರಿಸುವಂತೆ ಸೂಚಿಸಿದೆ. ಇದೇ ವೇಳೆ ಯುಐಡಿಎಐ ಹೆಸರಿನಲ್ಲಿ ಸಾಕಷ್ಟು ನಕಲಿ, ಅನಧಿಕೃತ ಆ್ಯಪ್ಗ್ಳು ಹಾಗೂ ವೆಬ್ಸೈಟ್ಗಳು ಹುಟ್ಟಿಕೊಂಡಿದ್ದು ಜನರ ದಾರಿ ತಪ್ಪಿಸುತ್ತಿವೆ.