ನಾಸ್ಟ್ರಡ್ಯಾಮಸ್ ಭವಿಷ್ಯವಾಣಿಯ ಭಾರತೀಯ ನಾಯಕನೇ ಮೋದಿ: ಕಿರಿಟ್
Team Udayavani, Mar 20, 2017, 4:46 PM IST
ಹೊಸದಿಲ್ಲಿ : ಹದಿನಾರನೇ ಶತಮಾನದ ವಿಶ್ವ ವಿಖ್ಯಾತ ಫ್ರೆಂಚ್ ಭವಿಷ್ಯಕಾರ ಸಂತ ನಾಸ್ಟ್ರಡ್ಯಾಮಸ್ ನುಡಿದಿದ್ದ ಭವಿಷ್ಯದಂತೆ ಭಾರತವನ್ನು ಹೊಸ ಎತ್ತರಕ್ಕೆ ಒಯ್ಯುವ ನಾಯಕ ಪ್ರಧಾನಿ ನರೇಂದ್ರ ಮೋದಿಯೇ ಆಗಿದ್ದಾರೆ ಎಂದು ಬಿಜೆಪಿಯ ಲೋಕಸಭಾ ಸಂಸದ ಕಿರಿಟ್ ಸೋಮಯ್ಯ ಹೇಳಿದ್ದಾರೆ.
“ಇಪ್ಪತ್ತೂಂದನೇ ಶತಮಾನದಲ್ಲಿ ಪೂರ್ವ ದಿಕ್ಕಿನಲ್ಲಿ ಒಬ್ಬ ನಾಯಕನು ಉದಯಿಸುತ್ತಾನೆ; ಆತನು ಭಾರತವನ್ನು ಹೊಸ ಎತ್ತರಕ್ಕೆ ಒಯ್ಯುತ್ತಾನೆ’ ಎಂದು ಫ್ರೆಂಚ್ ಭವಿಷ್ಯಕಾರ ನಾಸ್ಟ್ರಡ್ಯಾಮಸ್ ಭವಿಷ್ಯ ನುಡಿದಿದ್ದ. ವಿಶ್ವ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ನಾಸ್ಟ್ರಡ್ಯಾಮಸ್ ನುಡಿದಿದ್ದ ಹಲವಾರು ಭವಿಷ್ಯ ವಾಣಿ ನಿಜವಾಗಿವೆ. ಈ ಪೈಕಿ ಸರ್ವಾಧಿಕಾರಿ ಹಿಟ್ಲರ್ನ ಉದಯ, 2001ರಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಪತನವೂ ಸೇರಿವೆ.
ನಾಸ್ಟ್ರಡ್ಯಾಮಸ್ ಭಾರತದ ಕುರಿತಾಗಿ ನುಡಿದಿದ್ದ ಭವಿಷ್ಯದಂತೆ ಪ್ರಧಾನಿ ನರೇಂದ್ರ ಮೋದಿಯೇ ಭಾರತವನ್ನು ಉತ್ತುಂಗ ಶಿಖರಕ್ಕೆ ಒಯ್ಯುವ ನಾಯಕ ಎಂಬುದನ್ನು ಈ ಹಿಂದೆ ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ಬಿಜೆಪಿ ನಾಯಕರು ಹೇಳಿದ್ದರು.
ರಿಜಿಜು ಅವರು ಭಾರತ ಕುರಿತ ನಾಸ್ಟ್ರಡ್ಯಾಮಸ್ ಭವಿಷ್ಯವಾಣಿಯನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ