ಮುದುಡಿದ ಎಲೆ, ಪಾಲಾದಳು ಅಮ್ಮ !
Team Udayavani, Mar 24, 2017, 8:51 AM IST
ಹೊಸದಿಲ್ಲಿ: ಹಸಿರಾಗಿದ್ದ ‘ಎರಡು ಎಲೆ’ ಬಂಡಾಯದ ಬಿಸಿಗೆ ಮುರುಟಿದೆ ! ಮಕ್ಕಳ ಗಲಾಟೆಯಲ್ಲಿ ‘ಅಮ್ಮ’ ಎರಡು ಪಾಲಾಗಿದ್ದಾಳೆ ! ಜಯಲಲಿತಾ ನಿಧನ ಹೊಂದಿದ ಮೂರೇ ತಿಂಗಳಲ್ಲಿ ಎಐಎಡಿಎಂಕೆಯ ದುಃಸ್ಥಿತಿ ಇದು. ‘ಎರಡು ಎಲೆ’ ಚಿಹ್ನೆಗಾಗಿ ಎಐಎಡಿಎಂಕೆ ಬಣಗಳ ನಡುವೆ ಏರ್ಪಟ್ಟಿದ್ದ ಗುದ್ದಾಟಕ್ಕೆ ಚುನಾ ವಣಾ ಆಯೋಗ ತೆರೆ ಎಳೆದಿದ್ದು, ಇಬ್ಬರಿಗೂ ಬೇರೆ ಬೇರೆ ಚಿಹ್ನೆ, ಹೆಸರುಗಳನ್ನು ದಯಪಾಲಿಸಿದೆ. ಶಶಿಕಲಾ ಬಣ ಇನ್ನು ‘ಎಐಎ ಡಿಎಂಕೆ (ಅಮ್ಮ)’ ಎಂಬ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸಲಿದೆ. ಇದಕ್ಕೆ ಪಕ್ಷದ ಚಿಹ್ನೆ ‘ಟೋಪಿ’. ಹಾಗೆಯೇ ಒ. ಪನ್ನೀರ್ ಸೆಲ್ವಂ ಬಣ ‘ಎಐಎಡಿಎಂಕೆ (ಪುರುಚ್ಚಿ ತಲೈವಿ ಅಮ್ಮ)’ ಹೆಸರಿನಲ್ಲಿ ‘ವಿದ್ಯುತ್ ಕಂಬ’ ಚಿಹ್ನೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಲಿದೆ.
ಆರ್.ಕೆ. ನಗರ ಉಪಚುನಾವಣೆ ಸಂಬಂಧ ಎಐಎಡಿಎಂಕೆ ಬಣಗಳು ‘ಎರಡು ಎಲೆ’ ಚಿಹ್ನೆಯನ್ನು ತಮಗೇಬೇಕೆಂದು ಚುನಾವಣಾ ಆಯೋಗದ ಮುಂದೆ ಹೋಗಿದ್ದವು. ಬಣಗಳ ಅಭಿಪ್ರಾಯ ಆಲಿಸಿದ ಅನಂತರ ಆಯೋಗ, ‘ಎರಡು ಎಲೆ’ ಇಬ್ಬರಿಗೂ ನೀಡಲಾಗುವುದಿಲ್ಲ ಎಂದು ಸ್ತಂಭನ ಆದೇಶ ಹೊರಡಿಸಿ, ಹೊಸ ಚಿಹ್ನೆ ನೀಡುವುದಾಗಿ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ