ಸೇನೆ ಸಂಸದ ಗಾಯಕ್ವಾಡ್ ಏರ್ಟಿಕೆಟ್ ಮತ್ತೆ ರದ್ದು
Team Udayavani, Mar 29, 2017, 3:45 AM IST
ನವದೆಹಲಿ: ಡ್ನೂಟಿ ಮ್ಯಾನೇಜರ್ಗೆ ಹೊಡೆದು ಗದ್ದಲ ಎಬ್ಬಿಸಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧದ ನಿಲುವನ್ನು ಏರ್ ಇಂಡಿಯಾ ಮತ್ತಷ್ಟು ಕಠಿಣ ಗೊಳಿಸಿದೆ. ಬುಧವಾರ ಮುಂಬೈನಿಂದ ದೆಹಲಿಗೆ ಗಾಯ ಕ್ವಾಡ್ ಬುಕ್ ಮಾಡಿದ್ದ 2 ಟಿಕೆಟ್ಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆ ರದ್ದು ಮಾಡಿದೆ. ಮತ್ತೂಂದು ಟಿಕೆಟ್ನಲ್ಲಿ ಅವರು ಹೈದರಾಬಾದ್ನಿಂದ ದೆಹಲಿಗೆ ಹೋಗಬೇಕಾಗಿತ್ತು. ಎರಡೂ ಟಿಕೆಟ್ಗಳು ಗಾಯಕ್ವಾಡ್ಗೆ ಹಾರಾಟ ನಿಷೇಧಕ್ಕೂ ಮುನ್ನ ನೀಡಿದ “ಓಪನ್ ಟಿಕೆಟ್’ ಆಗಿತ್ತು. ಅದನ್ನು ಗಾಯಕ್ವಾಡ್ ಕಚೇರಿ ಸಿಬ್ಬಂದಿ ಮಂಗಳವಾರ ಕಾದಿರಿಸಿದ್ದರು.
ಈ ನಡುವೆ ಆಂಗ್ಲ ಸುದ್ದಿವಾಹಿನಿಯೊಂದು ಮುಂಬೈ- ನವದೆಹಲಿ ಪ್ರಯಾಣಕ್ಕಾಗಿ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಬಗ್ಗೆ ಮಾಹಿತಿ ನೀಡಿತ್ತು. ಕೋಚ್ ಎ ನಲ್ಲಿ ಅವರು ಕಾಯ್ದಿರಿಸಿದ್ದ ರಿಸರ್ವೇಷನ್ ಚಾರ್ಟ್ ಅನ್ನು ಪ್ರದರ್ಶಿಸಿತ್ತು. ಆದರೆ ಶಿವಸೇನೆ ಸಂಸದ ರೈಲಲ್ಲಿ ಪ್ರಯಾಣಿ ಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಮಾರ್ಗ ಮಧ್ಯ ಅವರು ರೈಲು ಹತ್ತಬಹುದೆಂದ ಸಂಶಯ ಉಂಟಾಗಿದೆ. ಗಾಯಕ್ವಾಡ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ