ಸಂತರಿಗೆ ಭಿಕ್ಷೆ ಕೊಡದ ಕಾಲದಲ್ಲಿ ಮೋದಿ ನನಗೆ ಯುಪಿಯನ್ನೇ ಕೊಟ್ಟರು
Team Udayavani, Mar 30, 2017, 8:57 AM IST
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣಗಾನ ಮಾಡಿದ್ದಾರೆ.
ಬುಧವಾರ ಮಾತನಾಡಿದ ಮುಖ್ಯಮಂತ್ರಿ ಯೋಗಿ ‘ಈಗಿನ ದಿನಗಳಲ್ಲಿ ಜನ ಸಂತರಿಗೆ ಭಿಕ್ಷೆ ಕೊಡಲು ಯೋಚನೆ ಮಾಡುತ್ತಾರೆ. ಅಂತಹುದರಲ್ಲಿ ನನಗೆ ಪ್ರಧಾನಿ ಮೋದಿ ಜೀ ಉತ್ತರಪ್ರದೇಶವನ್ನೇ ನೀಡಿದರು’ ಎಂದರು.
‘ಪ್ರಧಾನಿ ಮೋದಿ ಅವರು ಒಬ್ಬ ಆಶಾವಾದಿಯಾಗಿದ್ದು, ನಾನು ಅವರಿಂದ ಸಕಾತ್ಮಕವಾಗಿ ಹೇಗೆ ದೊಡ್ಡ ಕೆಲಸಗಳನ್ನು ಮಾಡಬೇಕೆಂದು ಕಲಿಯುತ್ತಿದ್ದೇನೆ’ ಎಂದರು.
‘ಅಮಿತ್ ಶಾ ಅವರು ನೀವು ಮುಖ್ಯಮಂತ್ರಿಯಾಗಬೇಕು ಎಂದಾಗ ನನ್ನ ಬಳಿ ಕೆಲವೇ ಜೊತೆ ಬಟ್ಟೆಗಳಿದ್ದವು’ ಎಂದು ತನ್ನ ಸನ್ಯಾಸಿ ಜೀವನದ ಚಿತ್ರಣವನ್ನೂ ನೀಡಿದರು.
‘ನನಗೆ ಉತ್ತರ ಪ್ರದೇಶದ ಕಾಯಿಲೆಗಳು ಯಾವುದೆಂದು ಗೊತ್ತಿವೆ.ಅವುಗಳನ್ನು ನಿರ್ಮೂಲನೆ ಮಾಡಲು ಕೆಲಸ ಮಾಡುತ್ತೇನೆ. ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ನಾನು ಹಿಂಜರಿಯುವುದಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ