ಸುಡುತಿದೆ ಭೂಮಿ; ಮಾರ್ಚ್ ಅಂತ್ಯಕ್ಕೆ 46.5 ಡಿಗ್ರಿ! ಮುಂದಿದೆ ಅಪಾಯ
Team Udayavani, Mar 30, 2017, 10:24 AM IST
ಹೊಸದಿಲ್ಲಿ: ಮಾರ್ಚ್ ಅಂತ್ಯಕ್ಕೆ ದೇಶದ ಎಲ್ಲೆಡೆ ಬಿಸಿಲಿನ ಝಳ ಜೋರಾಗಿದ್ದು ,ದೇಶದಾದ್ಯಂತ ದಾಖಲೆಯ ತಾಪಮಾನ ದಾಖಲಾಗಿ ಅಪಾಯದ ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರದ ಭಿರಾದಲ್ಲಿ ಹಿಂದೆಂದೂ ದಾಖಲಾಗದ ದಾಖಲೆಯ 46.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಮಂಗಳವಾರ ದಾಖಲಾಗಿರುವ ಬಗ್ಗೆ ಹವಮಾನ ಇಲಾಖೆ ತಿಳಿಸಿದೆ.
ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಧ್ಯ ಮಹಾರಾಷ್ಟ್ರ, ಉತ್ತರ ಪ್ರದೇಶದ ದಕ್ಷಿಣ ಪ್ರಾಂತ್ಯ, ದಕ್ಷಿಣ ಹರಿಯಾಣ, ಚಂದೀಘಡ ಮತ್ತು ಒಡಿಶಾದಲ್ಲಿ ಬಿಸಿ ಗಾಳಿ ಬೀಸುವ ಎಚ್ಚರಿಕೆಗಳನ್ನು ನೀಡಲಾಗಿದೆ.
ಜಾಗತಿಕ ತಾಪಮಾನ ಏರಿಕೆಯ ಸೂಚನೆಯಾಗಿ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಳೆದ ತಿಂಗಳಿಗಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ ಎಂದು ಹವಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಒಂದೆಡೆ ಬರ ಇನ್ನೊಂದೆಡೆ ಸುಡುತ್ತಿರುವ ಬಿಸಿಲಿನ ತಾಪ ಜನರನ್ನು ಈಗಾಗಲೇ ಹೈರಾಣಾಗಿಸುತ್ತಿದ್ದು, ಎಪ್ರಿಲ್ ಮತ್ತು ಮೇ ತಿಂಗಳನ್ನು ಹೇಗೆ ಕಳೆಯುವುದು ಎನ್ನುವ ಚಿಂತೆ ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA