ಎಐಎಡಿಎಂಕೆಯಲ್ಲಿ ಮತ್ತೆ ಭಿನ್ನಮತ: ಮಾತುಕತೆ ವಿಳಂಬ
Team Udayavani, Apr 25, 2017, 3:45 AM IST
ಚೆನ್ನೈ: ವಿಲೀನ ಮಾತುಕತೆಗೆ ಸಮಿತಿಗಳನ್ನು ರಚಿಸಿದ ಬೆನ್ನಲ್ಲೇ ಎಐಎಡಿಎಂಕೆ ಪಕ್ಷದ ಎರಡೂ ಬಣಗಳ ನಡುವೆ ಮತ್ತೂಮ್ಮೆ ಭಿನ್ನಾಭಿಪ್ರಾಯ ತಲೆದೋರಿದ್ದು, ಬಣಗಳ ಮುಖಂಡರ ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ.
ಈ ಹಿನ್ನೆಲೆಯಲ್ಲಿ ಬಣಗಳ ವಿಲೀನ ಕುರಿತ ಮಾತುಕತೆ ವಿಳಂಬವಾಗುತ್ತಿದೆ.ಮಾತುಕತೆಗೆ ಕೂರುವ ಮುನ್ನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಮತ್ತು ವಿ.ಕೆ. ಶಶಿಕಲಾ ಹಾಗೂ ಟಿ.ಟಿ.ವಿ. ದಿನಕರನ್ರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ, ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣ ಪಟ್ಟು ಹಿಡಿದಿದೆ.
“ನಮ್ಮ ಈ ಬೇಡಿಕೆಗಳು ಈಡೇರಿದರೆ ಬೇರಾವ ಷರತ್ತುಗಳನ್ನೂ ವಿಧಿಸದೆ ಮಾತುಕತೆಗೆ ಮುಂದಾಗುತ್ತೇವೆ,’ ಎಂದು ಸೆಲ್ವಂ ಅವರ ಆಪ್ತ ಕೆ.ಪಿ.ಮುನಿಸ್ವಾಮಿ ಹೇಳಿದ್ದಾರೆ.ಎಐಎಡಿಎಂಕೆ ಮುಖವಾಣಿ “ಡಾ. ನಮತು ಎಂಜಿಆರ್’ನಲ್ಲಿ ಪ್ರಕಟವಾಗಿರುವ ಲೇಖನವೊಂದರಲ್ಲಿ, ಪಕ್ಷವು ಶಶಿಕಲಾ ಹಾಗೂ ದಿನಕರನ್ ಜತೆಗಿದೆ ಎಂದು ಪ್ರಕಟವಾಗಿದೆ. ಇದನ್ನು ಖಂಡಿಸಿರುವ ಮುನಿಸ್ವಾಮಿ, ಅಮ್ಮಾ ಬಣ ಇನ್ನೂ ಗೊಂದಲದಲ್ಲಿದೆ ಎಂದಿದ್ದಾರೆ.
ಬಂಗಲೆ ಭದ್ರತಾ ಸಿಬ್ಬಂದಿ ಕೊಲೆ: ತಮಿಳುನಾಡಿನ ಮಾಜಿ ಸಿಎಂ ಜೆ. ಜಯ ಲಲಿತಾ ಅವರು ಆಗಾಗ ಸಂದರ್ಶಿಸುತ್ತಿದ್ದ ಕೊಡನಾಡಿನ ಬಂಗಲೆಯ ಭದ್ರತಾ ಸಿಬ್ಬಂದಿ ಸೋಮವಾರ ಕೊಲೆಯಾಗಿದ್ದು, ಅಲಿದ್ದ ಮತ್ತೂಬ್ಬ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ಗುಂಪೊಂದು ಈ ಕೃತ್ಯ ನಡೆಸಿದೆ.
ಬಂಗಲೆಯೊಳಗಿದ್ದ ಬೆಲೆಬಾಳುವ ವಸ್ತುಗಳು, ದಾಖಲೆಗಳನ್ನು ಕದಿಯಲು ಗಂಪು ಪ್ರಯತ್ನಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್