5 ವರ್ಷದಿಂದ ಅತ್ಯಾಚಾರ: ಸ್ವಾಮಿಯ ಶಿಶ್ನ ಛೇದನಗೈದ ಕೇರಳ ಹುಡುಗಿ
Team Udayavani, May 20, 2017, 12:32 PM IST
ತಿರುವನಂತಪುರ : ಕಳೆದ ಐದು ವರ್ಷಗಳಿಂದಲೂ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದ 54ರ ಹರೆಯದ ಸ್ವಾಮಿಯೊಬ್ಬನ ಕೃತ್ಯಕ್ಕೆ ತೀವ್ರ ಆಕ್ರೋಶಿತಳಾದ 23ರ ಹರೆಯದ ತರುಣಿಯೊಬ್ಬಳು, ಆತನ ಶಿಶ್ನವನ್ನೇ ಕತ್ತರಿಸಿ ಹಾಕಿದ ಘಟನೆ ನಡೆದಿರುವುದು ವರದಿಯಾಗಿದೆ.
ರೇಪ್ ಸಂತ್ರಸ್ತ ತರುಣಿಯಿಂದ ಶಿಶ್ನ ಛೇದನಕ್ಕೆ ಗುರಿಯಾದ, ಹರಿ ಸ್ವಾಮಿ ಎಂದೂ ಖ್ಯಾತನಾಗಿರುವ, ಸ್ವಾಮಿ ಗಣೇಶಾನಂದ ಎಂಬ ಕಾಮುಕನು ಕೊಲ್ಲಂನ ಪನ್ಮಮ ಆಶ್ರಮದ ಒಬ್ಬ ಸದಸ್ಯನಾಗಿದ್ದಾನೆ ಎಂದು ಗೊತ್ತಾಗಿದೆ.
ಶೇ. 90ರಷ್ಟು ಶಿಶ್ನ ಛೇದನಕ್ಕೆ ಗುರಿಯಾದ ಅತ್ಯಾಚಾರಿ ಹರಿ ಸ್ವಾಮಿಯನ್ನು ಶುಕ್ರವಾರ ಮಧ್ಯರಾತ್ರಿ ಕಳೆದು 40 ನಿಮಿಷವಾದ ವೇಳೆಯಲ್ಲಿ ತಿರುವನಂತಪುರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ತರಲಾಯಿತು ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.
ಆಸ್ಪತ್ರೆಯ ಪರಿಣತ ವೈದ್ಯರು ಹರಿ ಸ್ವಾಮಿಗೆ ಛೇದಿತ ಶಿಶ್ನಕ್ಕೆ ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದು ಆತನೀಗ ಅಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ರೇಪ್ ಸಂತ್ರಸ್ತೆಯಾಗಿರುವ ಕಾನೂನು ವಿದ್ಯಾರ್ಥಿನಿಯು ತನ್ನ ಮೇಲಿನ ಅತ್ಯಾಚಾರ ಹಾಗೂ ತನ್ನಿಂದ ನಡೆದ ಶಿಶ್ನ ಛೇದನ ಕೃತ್ಯವನ್ನು ಈ ರೀತಿಯಾಗಿ ವಿವರಿಸಿದ್ದಾಳೆ :
“ಹರಿ ಸ್ವಾಮಿಯು ನಮ್ಮ ಮನೆಗೆ ಧಾರ್ಮಿಕ ಕಾರ್ಯಕ್ರಮಗಳಿಗೆಂದು ಪದೇ ಪದೇ ಬರುತ್ತಿದ್ದ. ಇಂತಹ ಭೇಟಿಗಳಲ್ಲಿ ಅವಕಾಶ ಸಿಕ್ಕಾಗೆಲ್ಲ ಆತ ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಆತನ ಈ ಅಸಹ್ಯಕರ ಅತ್ಯಾಚಾರ ಕೃತ್ಯಗಳಿಂದ ಬೇಸತ್ತ ನಾನು ನಿನ್ನೆ ಶುಕ್ರವಾರ ದಿನ ಆತ ನಮ್ಮ ಮನೆಗೆ ಬಂದಾಗ ಹರಿತವಾದ ಚೂರಿಯಿಂದ ಆತನ ಶಿಶ°ವನ್ನು ಕತ್ತರಿಸಿ ಹಾಕಿದೆ’.
ಕೇರಳ ಪೊಲೀಸರು ಅತ್ಯಾಚಾರಿ ಆರೋಪಿ ಹರಿ ಸ್ವಾಮಿಯ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೇರಳ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪ್ರಮೀಳಾ ದೇವಿ ಅವರು “ಅತ್ಯಾಚಾರಿ ಸ್ವಾಮಿಯನ್ನು ಸರಿಯಾಗಿ ಶಿಕ್ಷಿಸಿದ ಹುಡುಗಿಯ ಬಗ್ಗೆ ತನಗೆ ಹೆಮ್ಮೆ ಇದೆ; ತನ್ನಂತಹ ಇತರ ಶೋಷಿತ ವನಿತೆಯರಿಗೆ ಆಕೆ ರೋಲ್ ಮಾಡೆಲ್ ಆಗಿದ್ದಾರೆ’ ಎಂದು ಹೇಳಿದ್ದಾರೆ.
ಅಂದ ಹಾಗೆ ಅತ್ಯಾಚಾರಿಯ ಶಿಶ್ನ ಛೇದನ ಗೈದಿರುವ ಹುಡುಗಿಯ ವಿರುದ್ಧ ಯಾವ ರೀತಿಯ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂಬ ಬಗ್ಗೆ ಪೊಲೀಸರಿಗೆ ಈಗ ಗೊಂದಲ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ
Election: ಕೇರಳದಲ್ಲಿ “ರಾಹುಲ್ ಗಾಂಧಿ ಡಿಎನ್ಎ ಪರೀಕ್ಷೆ’ ವಿವಾದ
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು