55 ಖಾತೆಗಳ ವಸೂಲಿ ಆಗದ ಸಾಲ ಪ್ರಕರಣ ಪರಿಹರಿಸಿ
Team Udayavani, Jun 23, 2017, 3:45 AM IST
ನವದೆಹಲಿ: ದೇಶದ ಬ್ಯಾಂಕುಗಳಲ್ಲಿನ 55 ಅತಿ ದೊಡ್ಡ ವಸೂಲಾಗದ ಸಾಲ ಪ್ರಕರಣಗಳನ್ನು 6 ತಿಂಗಳ ಒಳಗೆ ಪರಿಹ ರಿಸುವಂತೆ ಬ್ಯಾಂಕುಗಳಿಗೆ ಆರ್ಬಿಐ ತಾಕೀತು ಮಾಡಿದೆ.
ಇಲ್ಲದೇ ಹೋದರೆ, ಅಂತಹ ಪ್ರಕರಣಗಳನ್ನು ದಿವಾಳಿ ಕಾಯ್ದೆ (ಐಬಿಸಿ) ಅಡಿ ಪರಿಗಣಿಸಲು ಶಿಫಾರಸು ಮಾಡುವುದಾಗಿ ಹೇಳಿದೆ. ಆದಷ್ಟು ಬೇಗ ಬ್ಯಾಂಕುಗಳು ಅನುತ್ಪಾದಕ ಆಸ್ತಿಗಳ ಕುರಿತ ನಿರ್ಣಯ ಪ್ರಕ್ರಿಯೆ ಚುರುಕುಗೊಳಿಸಬೇಕು. ಒಂದು ವೇಳೆ ಈ ಬಗ್ಗೆ ತೀರ್ಮಾನಕ್ಕೆ ಬರಲಾಗದಿದ್ದಲ್ಲಿ, ಸಾಲಗಾರರನ್ನು ದಿವಾಳಿ ಎಂದು ಘೋಷಿಸಲು ಮುಂದಾಗಬೇಕು ಎಂದು ಸೂಚಿಸಿದೆ.
ದೇಶದಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಇದೀಗ 8 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಇದರಲ್ಲಿ 6 ಲಕ್ಷ ಕೋಟಿ ರೂ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳದ್ದಾಗಿದೆ. ಸದ್ಯ ಪತ್ತೆ ಆಗಿರುವ 12 ಪ್ರಕರಣಗಳು 2 ಲಕ್ಷ ಕೋಟಿ ರೂ. ಮೊತ್ತ ದ್ದಾಗಿದ್ದು, ಒಟ್ಟು ಮೊತ್ತದ ಶೇ.25ರಷ್ಟಿವೆೆ. 12 ಅನು ತ್ಪಾದಕ ಆಸ್ತಿ ಪ್ರಕರಣಗಳ ಕುರಿತಂತೆ, ಅವುಗಳನ್ನು ದಿವಾಳಿ ಕಾಯ್ದೆ ಅಡಿ ಶಿಫಾರಸು ಮಾಡಬೇಕೆ ಎಂಬ ಬಗ್ಗೆ ತೀರ್ಮಾ ನಿಸಲು ಆಂತರಿಕ ಸಲಹಾ ಸಮಿತಿಯನ್ನು ಆರ್ಬಿಐ ರಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ