ಕಾಶ್ಮೀರಿ ಸಹೋದರರ ನೆತ್ತರಿಗೆ ಪ್ರತೀಕಾರ: ಭಾರತಕ್ಕೆ ಕಾಯಿದಾ ಎಚ್ಚರಿಕೆ
Team Udayavani, Jun 27, 2017, 11:47 AM IST
ಹೊಸದಿಲ್ಲಿ : ಭಾರತೀಯ ಉಪಖಂಡಕ್ಕೆ ತನ್ನ ಕಾರಸ್ಥಾನವನ್ನು ಬದಲಾಯಿಸಿ ಭಾರತವನ್ನು ಗುರಿಯಾಗಿಸಿರುವ ಉದ್ದೇಶ ಹೊಂದಿರುವ ಅಲ್ ಕಾಯಿದಾ ಉಗ್ರ ಸಂಘಟನೆ ಭಾರತಕ್ಕೆ ಉಗ್ರ ದಾಳಿಗಳ ಎಚ್ಚರಿಕೆ ನೀಡಿದೆ.
“ಕಾಶ್ಮೀರದಲ್ಲಿ ನೀವು ಹರಿಸುತ್ತಿರುವ ನಮ್ಮ ಸಹೋದರರ ರಕ್ತಕ್ಕೆ ಪ್ರತೀಕಾರವಾಗಿ ನಾವು ಭಾರತೀಯ ಭದ್ರತಾ ರಚನೆಗಳನ್ನು ಹಾಗೂ ಹಿಂದೂ “ಪ್ರತ್ಯೇಕತಾ’ ಸಂಘಟನೆಗಳ ನಾಯಕರನ್ನು ಗುರಿ ಇರಿಸಿ ದಾಳಿ ನಡೆಸಲಿದ್ದೇವೆ’ ಎಂಬ ಎಚ್ಚರಿಕೆಯನ್ನು ಅಲ್ ಕಾಯಿದಾ ಭಾರತಕ್ಕೆ ನೀಡಿದೆ.
ಈ ಸಂಬಂಧ ಅಲ್ ಕಾಯಿದಾ ಉಗ್ರ ಸಂಘಟನೆ ವಿಸ್ತೃತ ದಾಖಲೆಯೊಂದನ್ನು ಹೊರಡಿಸಿದೆ. ಅದರಲ್ಲಿ ಭಾರತೀಯ ಉಪಖಂಡದಲ್ಲಿನ ಮುಜಾಹಿದೀನ್ಗಳು ಅನುಸರಿಸಬೇಕಾದ ನೀತಿ ಸಂಹಿತೆಯನ್ನು ವಿವರಿಸಿದೆ ಮಾತ್ರವಲ್ಲ ಭಾರತದಲ್ಲಿನ ತನ್ನ ಉಗ್ರ ಅಭಿಯಾನ ಮತ್ತು ಭವಿಷ್ಯದ ಗುರಿಗಳನ್ನು ಅದು ವಿವರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಇಂದು ಮಂಗಳವಾರ ತನ್ನ ವರದಿಯಲ್ಲಿ ತಿಳಿಸಿದೆ.
ಅಲ್ ಕಾಯಿದಾ ಹೊರಡಿಸಿರುವ ದಾಖಲೆ ಪತ್ರದಲ್ಲಿ ಅದರ ಗುರಿಗಳು, ತನ್ನ ಸದಸ್ಯರು ಹಾಗೂ ತನ್ನೊಂದಿಗೆ ಸಂಯೋಜಿತರಾದವರು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳನ್ನು ಸ್ಪಷ್ಟಪಡಿಸಿದೆ ಎಂದು ವರದಿ ತಿಳಿಸಿದೆ.
ತನ್ನ ದಾಖಲೆ ಪತ್ರದಲ್ಲಿ ಅನೇಕ ಬಾರಿ ಕಾಶ್ಮೀರವನ್ನು ಉಲ್ಲೇಖೀಸಿರುವ ಅಲ್ ಕಾಯಿದಾ ಉತ್ತರ ಪ್ರದೇಶದ ಸಂಭಾಲ್ ನಲ್ಲಿನ ಮೌಲಾನಾ ಆಸೀಮ್ ಉಮರ್ ನನ್ನು ಭಾರತೀಯ ಉಪಖಂಡದ ಅಲ್ ಕಾಯಿದಾ ಮುಖ್ಯಸ್ಥ “ಅಮೀರ್’ ಎಂದು ಘೋಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?