ಶಾಲೆಗಳ ಮೇಲೆ ದಾಳಿ ಸೇನೆ ಘನತೆಗೆ ತಕ್ಕುದಲ್ಲ
Team Udayavani, Jul 21, 2017, 5:20 AM IST
ಹೊಸದಿಲ್ಲಿ/ವಾಷಿಂಗ್ಟನ್: ಗಡಿಯಲ್ಲಿ ಶಾಲೆಗಳ ಮೇಲೆ ಪಾಕಿಸ್ಥಾನ ಸೇನೆ ಉದ್ದೇಶಪೂರ್ವಕ ದಾಳಿ ನಡೆಸುತ್ತಿರುವ ಬಗ್ಗೆ ಭಾರತೀಯ ಸೇನೆ ಕೆಂಡಾಮಂಡಲವಾಗಿದ್ದು, ಪಾಕ್ಗೆ ಎಚ್ಚರಿಕೆ ನೀಡಿದೆ.
ಸೇನಾ ಕಾರ್ಯಾಚರಣೆ ಕುರಿತ ಲೆ| ಜ| ಎ.ಕೆ. ಭಟ್ ಅವರು ಪಾಕ್ ಸಹವರ್ತಿಗೆ ಹಾಟ್ಲೆçನ್ ಮೂಲಕ ಕರೆ ಮಾಡಿದ್ದು, ಇಂತಹ ದಾಳಿ ಸೇನೆ ಘನತೆ, ಅರ್ಹತೆಗೆ ತಕ್ಕುದಲ್ಲ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಪೂರಕವಾಗಿ ಉತ್ತರಿಸಿದ ಪಾಕ್ನ ಮೆ| ಜ| ಶಾಹಿರ್ ಶಮ ಶಾದ್ ಮಿರ್ಜಾ ಈ ಬಗ್ಗೆ ತಮ್ಮ ಸೇನಾ ಪಡೆಗೆ ನಿಯಂತ್ರಣ ವಿಧಿಸುವುದಾಗಿ ಹೇಳಿದ್ದಾಗಿ ಸೇನಾ ವಕ್ತಾರರು ತಿಳಿಸಿದ್ದಾರೆ. ಇತ್ತೀಚೆಗೆ ನೌಶೆರಾ ಮತ್ತು ರಜೌರಿ ಜಿಲ್ಲೆಗಳಲ್ಲಿ ಶಾಲೆಗಳ ಮೇಲೆ, ವಿದ್ಯಾರ್ಥಿಗಳನ್ನು ಗುರಿ ಯಾಗಿಸಿ ಪಾಕ್ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸೇನೆ ಪಾಕ್ಗೆ ಎಚ್ಚರಿಕೆ ನೀಡಿದೆ. ಅಲ್ಲದೇ ತಾನು ಆದಷ್ಟೂ ನಾಗರಿಕ ನೆಲೆಗಳನ್ನು ಗುರಿಯಾಗಿಸದೆ ನಿಯಂತ್ರಣ ಹೊಂದಿರುವುದಾಗಿ, ಇದನ್ನು ಪಾಕ್ ಕಡೆಯಿಂದಲೂ ಬಯಸುವುದಾಗಿ ಹೇಳಿದೆ.
ಪಾಕ್ಗೆ ಅಮೆರಿಕ ನೆರವು ಇನ್ನಷ್ಟು ಕಠಿನ: ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಹಣಕಾಸು ನೆರವಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಕಾರಣ ನೆರವಿನ ನಿಯಮಗಳನ್ನು ಕಠಿನಗೊಳಿಸಲು ಅಮೆರಿಕದ ಸಂಸತ್ನ ಅನುದಾನ ಸಮಿತಿ ನೂತನ ನೀತಿ ಹೊರತಂದಿದೆ. ಇದರಲ್ಲಿ ಕೆಲ ಷರತ್ತುಗಳನ್ನು ಹಾಕಲಾಗಿದ್ದು, ಉಗ್ರ ಸಂಘಟನೆಗಳ ವಿರುದ್ಧ ಕ್ರಮಕ್ಕೆ ವಿಫಲವಾಗಿದ್ದಲ್ಲಿ ನೆರವು ನೀಡಲ್ಲ ಎಂದು ಹೇಳಲಾಗಿದೆ.
ಎಟಿಎಂನಂತೆ ಬಳಸಿದ ಪಾಕ್: ಪಾಕ್ ಅಮೆರಿಕವನ್ನು ಬೇಕಾಬಿಟ್ಟಿ ಎಟಿಎಂನಂತೆ ಬಳಸಿದ್ದು, ಕೋಟ್ಯಂತರ ನೆರವು ಪಡೆದು ಕೊಂಡಿದೆ. ಇದು ಪಾಕ್ ಸೇನೆ ಕಿಸೆಗೇ ಸೇರುತ್ತಿದ್ದು, ಜನರ ಪಾಲಿಗೆ ಏನೂ ಇರಲಿಲ್ಲ ಎಂದು ಅಮೆರಿಕದ ರಕ್ಷಣಾ ಗುತ್ತಿಗೆದಾರ ರೇಮಂಡ್ ಡೇವಿಸ್ “ದಿ ಕಾಂಟ್ರಾಕ್ಟರ್’ ಪುಸ್ತಕದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ