ಸ್ವ-ಸಜೀವ ದಹನಕ್ಕೆ ಯತ್ನ : ಒಂದೇ ಕುಟುಂಬದ 8 ಮಂದಿ ಜೈಲು ಪಾಲು
Team Udayavani, Jul 24, 2017, 5:02 PM IST
ಕೊಯಮುತ್ತೂರು : ಸ್ವಂತ ಮನೆ ನಿರ್ಮಾಣದ ಜಾಗಕ್ಕೆ ಪಟ್ಟಾ ನೀಡಲು ವರ್ಷ ಮೀರಿ ವಿಳಂಬಿಸುತ್ತಿರುವುದನ್ನು ಪ್ರತಿಭಟಿಸಲು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ, ಕೂಲಿ ಕೆಲಸದ ಒಂದೇ ಕುಟುಂಬದ ಎಂಟು ಮಂದಿ ಸ್ವ-ಸಜೀವ ದಹನಕ್ಕೆ ಯತ್ನಿಸಿ ಅಂತಿಮವಾಗಿ ಜೈಲು ಪಾಲಾದ ಘಟನೆ ವರದಿಯಾಗಿದೆ.
ನಗರದ ಹೊರವಲಯದ ಸೂಳೂರು ಎಂಬಲ್ಲಿನ ನಿವಾಸಿಯಾಗಿರುವ ಕೂಲಿ ಕಾರ್ಮಿಕ ಶರವಣನ್ ಎಂಬಾತ ವರ್ಷದ ಹಿಂದೆ ತಾನು ಮನೆ ಕಟ್ಟಿಕೊಳ್ಳುವ ಜಾಗಕ್ಕೆ ಪಟ್ಟಾ ನೀಡಬೇಕೆಂದು ಒತ್ತಾಯಿಸಿ ಸ್ವ-ಸಜೀವ ದಹನಕ್ಕೆ ಯತ್ನಿಸಿದ್ದ. ಆಗ ಪೊಲೀಸರು ಮತ್ತು ಜಿಲ್ಲಾ ಆಡಳಿತಾಧಿಕಾರಿಗಳು ಆತನನ್ನು ತಡೆದು ಜಿಲ್ಲಾಧಿಕಾರಿಗೆ ಆತನ ದೂರಿನ ಪೂರ್ತಿ ವಿವರ ನೀಡಿ ಆತನಿಗೆ ಪಟ್ಟಾ ದೊರಕಿಸಿಕೊಡುವ ಭರವಸೆ ನೀಡಿದ್ದರು.
ಅದಾಗಿ ವರ್ಷವೊಂದು ಸಂದರೂ ಶರವಣನ್ಗೆ ಪಟ್ಟಾ ಸಿಗಲಿಲ್ಲ. ಇಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಅಹವಾಲು ದಿನವಾಗಿತ್ತು. ಹಾಗಾಗಿ ಶರವಣನ್ ಜತೆಗೆ ಪತ್ನಿ ಸಹಿತ ಆತನ ಮನೆಯ 11 ಸದಸ್ಯರು ಬಂದಿದ್ದರು. ಆದರೂ ಪಟ್ಟಾ ಸಿಗುವ ಸಾಧ್ಯತೆ ಕಂಡು ಬಾರದಿದ್ದಾಗ ಶರವಣನ್ ಸಹಿತ ಒಟ್ಟು ಎಂಟು ಮಂದಿ ಸ್ವ-ಸಜೀವ ದಹನಕ್ಕೆ ಮುಂದಾದರು.
ಪೊಲೀಸರು ಕೂಡಲೇ ಅವರ ಮೇಲೆರಗಿ ದುರಂತವನ್ನು ತಪ್ಪಿಸಿ ಬಳಿಕ ಅವರನ್ನು ಜೈಲಿಗೆ ಕರೆದೊಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು