ಭ್ರಷ್ಟ ಕೇಜ್ರಿವಾಲ್; ಬಂಡಾಯ ಶಾಸಕನಿಂದ ಬೃಹತ್ ಬ್ಯಾನರ್ ಅಭಿಯಾನ!
Team Udayavani, Aug 16, 2017, 4:52 PM IST
ನವದೆಹಲಿ: ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕ ಕಪಿಲ್ ಮಿಶ್ರಾ ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧದ ಸಮರವನ್ನು ಮುಂದುವರಿಸಿದ್ದು ದೆಹಲಿಯಾದ್ಯಂತ ಬುಧವಾರ ಕೇಜ್ರಿ ವಿರುದ್ಧ ಬೃಹತ್ ಬ್ಯಾನರ್ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.
ದೆಹಲಿಯ ಭ್ರಷ್ಟ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಂಬ ಬೃಹತ್ ಬ್ಯಾನರ್ ಅನ್ನು ದೆಹಲಿಯ ಪ್ರಮುಖ ಮೇಲ್ಸೆತುವೆ ಪ್ರದೇಶಗಳಾದ ಐಟಿಓ, ಐಎಸ್ ಬಿಟಿ, ವಜಿರಾಬಾದ್, ಆಜಾದ್ ಪುರ್ ಕಾಲೆ ಖಾನ್ ಸೇರಿದಂತೆ ಮುಖ್ಯ ಸ್ಥಳಗಳಲ್ಲಿ ನೇತು ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಅಣ್ಣಾ ಹಜಾರೆ ಅವರು ಆರಂಭಿಸಿದ್ದ ಭ್ರಷ್ಟಾಚಾರದ ವಿರುದ್ಧದ ಬೃಹತ್ ಹೋರಾಟದಲ್ಲಿ ಅರವಿಂದ್ ಕೇಜ್ರಿವಾಲ್ ಪಾಲ್ಗೊಂಡಿದ್ದರು. ಅಲ್ಲದೇ ಹೋರಾಟದ ಯಶಸ್ಸಿನ ಬಳಿಕ ಕೇಜ್ರಿವಾಲ್ ರಾಜಕೀಯ ಪ್ರವೇಶಿಸಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯ ಪ್ರವೇಶಿಸಿದ ನಂತರ ಭ್ರಷ್ಟರಾಗಿದ್ದಾರೆ ಎಂಬುದು ಕಪಿಲ್ ಮಿಶ್ರಾ ಆರೋಪ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ವಿರುದ್ಧ ಮಿಶ್ರಾ ಸಮರ ಸಾರಿದ್ದಾರೆ.