ಲಡಾಕ್ ಪರಿಣಾಮ: ಲೇಹ್ನಲ್ಲಿ ಭಾರತ-ಚೀನ ಸೇನಾಧಿಕಾರಿಗಳ ಸಭೆ
Team Udayavani, Aug 16, 2017, 7:11 PM IST
ಹೊಸದಿಲ್ಲಿ : ಲಡಾಕ್ನ ಪಾಂಗೋಂಗ್ ಸರೋವರದ ದಂಡೆಯನ್ನು ಅತಿಕ್ರಮಿಸಿ ಭಾರತೀಯ ಪ್ರದೇಶವನ್ನು ಅತಿಕ್ರಮಿಸಿ ಬಂದ ಚೀನೀ ಸೇನೆಯನ್ನು ಭಾರತೀಯ ಸೈನಿಕರು “ಸಣ್ಣ ಜಟಾಪಟಿ’ಯ ಬಳಿಕ ತಡೆದು ಹಿಮ್ಮೆಟ್ಟಿಸಿದ ಬಳಿಕ ಇಂದು ಬುಧವಾರ ಲೇಹ್ನ ಚೂಶಾಲ್ನಲ್ಲಿ ಉಭಯ ದೇಶಗಳ ಸೇನಾಧಿಕಾರಿಗಳು ಸಭೆಯೊಂದನ್ನು ನಡೆಸುತ್ತಿದ್ದಾರೆ.
ಲಡಾಕ್ನಲ್ಲಿನ ಭಾರತ – ಚೀನ ಗಡಿಯಲ್ಲಿ ಉಭಯ ದೇಶಗಳ ಸೇನೆ ಶಾಂತಿ, ನೆಮ್ಮದಿಯನ್ನು ಕಾಯ್ದುಕೊಳ್ಳಲು ಪರಸ್ಪರ ಸಹಕರಿಸಬೇಕು ಎಂಬ ನಿರೀಕ್ಷೆಯೊಂದಿಗೆ ಸೇನಾಧಿಕಾರಿಗಳು ಈ ಸಭೆಯನ್ನು ನಡೆಸುತ್ತಿದ್ದಾರೆ.
ನಿನ್ನೆ ಭಾನುವಾರ ಬೆಳಗ್ಗೆ 6ರಿಂದ 9 ಗಂಟೆಯ ನಡುವೆ ಎರಡು ಬಾರಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿಯ ಯೋಧರು, ಫಿಂಗರ್ 4 ಮತ್ತು ಫಿಂಗರ್ 5 ತಾಣದಲ್ಲಿ ಭಾರತೀಯ ಗಡಿ ಪ್ರದೇಶದೊಳಗೆ ಅತಿಕ್ರಮಣ ನಡೆಸುವ ಯತ್ನ ಮಾಡಿದ್ದರು. ಕಟ್ಟೆಚ್ಚರ ವಹಿಸಿದ್ದ ಭಾರತೀಯ ಸೈನಿಕರು ಚೀನೀ ಸೈನಿಕರ ಈ ಅತಿಕ್ರಮಣ ಯತ್ನವನ್ನು ಪರಿಣಾಮಕಾರಿಯಾಗಿ ತಡೆದರು.
ಲಡಾಕ್ನ ಪಾಂಗೋಂಗ್ ಸರೋವರದ ಮೂರನೇ ಎರಡು ಭಾಗ ಚೀನದ ನಿಯಂತ್ರಣದಲ್ಲಿದೆಯಾದರೆ ಉಳಿದ ಮೂರನೇ ಒಂದು ಭಾಗ ಭಾರತದ ನಿಯಂತ್ರಣದಲ್ಲಿದೆ. ಆದರೆ ಈ ಇಡಿಯ ಪ್ರದೇಶ ತನಗೆ ಸೇರಿದ್ದೆಂದು ಚೀನ ಹೇಳಿಕೊಳ್ಳುತ್ತಿದೆ.
ಡೋಕ್ಲಾಂ ಮತ್ತು ಲಡಾಕ್ ನಲ್ಲಿನ ಮುಖಾಮುಖೀಯ ಹೊರತಾಗಿಯೂ ಗಡಿಯಲ್ಲಿನ ವಿವಿಧ ತಾಣಗಳಲ್ಲಿ ಕಾವಲು ನಿರತ ಚೀನೀ ಸೈನಿಕರಿಗೆ ಭಾರತೀಯ ಸೈನಿಕರು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಪ್ರದಾಯದಂತೆ ಸಿಹಿ ಹಂಚಿ ಸೌಹಾರ್ದ ಮೆರೆದಿರುವುದು ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ