ಕನಿಷ್ಠ ಬ್ಯಾಲೆನ್ಸ್ನಿಂದ ಎಸ್ಬಿಐಗೆ 235 ಕೋ.ರೂ. ಲಾಭ!
Team Udayavani, Aug 19, 2017, 1:43 AM IST
ಇಂದೋರ್: ಉಳಿತಾಯ ಠೇವಣಿ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಡಲೇಬೇಕು ಎಂಬ ನಿಯಮ ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ, ಇದರಿಂದಲೇ ಬರೋಬ್ಬರಿ 235 ಕೋಟಿ ರೂ. ಲಾಭ ಬಂದಿದೆ. ಮೊದಲ ತ್ತೈಮಾಸಿಕದಲ್ಲಿ ದಂಡದ ರೂಪದಲ್ಲೇ ಎಸ್ಬಿಐ ಈ ಪ್ರಮಾಣದ ಹಣ ಸಂಗ್ರಹಿಸಿದೆ ಎಂದು ಆರ್ಟಿಐ ಅರ್ಜಿಗೆ ಉತ್ತರ ನೀಡಲಾಗಿದೆ.
ಒಟ್ಟು 388.74 ಲಕ್ಷ ಅಕೌಂಟ್ಗಳಿಂದ ಈ ಹಣ ಸಂಗ್ರಹಿಸಲಾಗಿದೆ. ಈ ಅಕೌಂಟ್ ಮಾಲೀಕರು ಬ್ಯಾಂಕಿನ ನಿಯಮದಂತೆ ಪ್ರತಿ ತಿಂಗಳು ಕಡ್ಡಾಯವಾಗಿ ಇಂತಿಷ್ಟು ಕನಿಷ್ಠ ಠೇವಣಿ ರೂಪದಲ್ಲಿ ಹಣ ಇಟ್ಟಿರಲೇಬೇಕು ಎಂಬ ನಿಯಮವನ್ನು ಪಾಲಿಸಿಲ್ಲ. ಹೀಗಾಗಿ ಇವರೆಲ್ಲರ ಅಕೌಂಟ್ಗಳಿಂದ ದಂಡದ ರೂಪದಲ್ಲಿ ಹಣಕ್ಕೆ ಕತ್ತರಿ ಹಾಕಲಾಗಿದೆ.
ಅಂದರೆ, ಮಹಾನಗರಗಳಲ್ಲಿ ಕನಿಷ್ಠವೆಂದರೂ 5,000 ರೂ. ಅನ್ನು ಕನಿಷ್ಠ ಠೇವಣಿ ರೂಪದಲ್ಲಿ ಅಕೌಂಟ್ನಲ್ಲಿ ಇಟ್ಟಿರಲೇಬೇಕು. ಇದರಲ್ಲಿ ನೀವು 10 ರೂ. ತೆಗೆದರೂ ದಂಡ ಕಟ್ಟಬೇಕಾಗುತ್ತದೆ. ಒಂದು ವೇಳೆ ಒಂದು ರೂ. ಅನ್ನೂ ಇಡದೇ ಇದ್ದರೆ 100 ರೂ. ದಂಡ ಗ್ಯಾರಂಟಿ. ಹಾಗೆಯೇ ನಗರ ಪ್ರದೇಶಗಳಲ್ಲಿ ಕನಿಷ್ಠವೆಂದರೂ 3,000 ರೂ. ಇರಿಸಿರಲೇಬೇಕು. ಪೂರ್ಣವಾಗಿ ತೆಗೆದರೆ 80 ರೂ. ದಂಡ ಪಾವತಿಸಬೇಕು. ಪಟ್ಟಣ ಅಥವಾ ಸಣ್ಣ ನಗರಗಳ ವಿಚಾರದಲ್ಲಿ 2,000 ರೂ. ಕನಿಷ್ಠ ಠೇವಣಿ ಇದ್ದರೆ ದಂಡ 75 ರೂ. ಇದೆ. ಗ್ರಾಮೀಣ ಭಾಗದಲ್ಲಿ ಕನಿಷ್ಠ ಠೇವಣಿ ರೂಪದಲ್ಲಿ 1,000 ರೂ. ಇಟ್ಟಿರಬೇಕು. ಅಕೌಂಟ್ ಖಾಲಿ ಮಾಡಿದರೆ 50 ರೂ. ದಂಡ ಕಟ್ಟಬೇಕು. ಈ ಎಲ್ಲಾ ದಂಡ ತಿಂಗಳಿಗೆ ಒಮ್ಮೆ ಹಾಕಲಾಗುತ್ತದೆ.
ಮಿನಿಮಮ್ ಬ್ಯಾಲೆನ್ಸ್ಗೆ ಕಠಿಣ ನಿಯಮ: ಸೇವಿಂಗ್ಸ್ ಅಕೌಂಟ್ಸ್ ಹೊಂದಿರುವವರು ತಮ್ಮ ಖಾತೆಯಲ್ಲಿ ಇಂತಿಷ್ಟು ಹಣ ಇಡಲೇಬೇಕು ಎಂದು ಎಸ್ಬಿಐ ನಿಯಮ ಮಾಡಿದೆ. ಮೆಟ್ರೋ, ಅರ್ಬನ್, ಸೆಮಿ ಅರ್ಬನ್ ಮತ್ತು ರೂರಲ್ ಎಂಬ ಹಂತಗಳನ್ನು ಮಾಡಿ, ಪ್ರತಿಯೊಂದು ಹಂತದಲ್ಲೂ ಗ್ರಾಹಕರು ಇಂತಿಷ್ಟು ಹಣ ಇಟ್ಟಿರಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು