ಅ.4ರವರೆಗೆ ಬಹುಮತ ಪರೀಕ್ಷೆ ಇಲ್ಲ
Team Udayavani, Sep 21, 2017, 9:11 AM IST
ಚೆನ್ನೈ: ಹಲವಾರು ತಿರುವುಗಳನ್ನು ಪಡೆಯುತ್ತಿರುವ ತಮಿಳುನಾಡು ರಾಜಕೀಯ ಬೆಳವಣಿಗೆಗಳಿಗೆ ಸದ್ಯ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಟಿಟಿವಿ ದಿನಕರನ್ ಗುಂಪಿಗೆ ಸೇರಿರುವ 18 ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಇದರ ಬೆನ್ನಲ್ಲೇ ಅ.4ರ ವರೆಗೆ ವಿಶ್ವಾಸಮತ ಯಾಚನೆ ಮಾಡದಂತೆ ತಾಕೀತು ಮಾಡಿದೆ.
ಒಂದು ರೀತಿಯಲ್ಲಿ ಇದು ಮುಖ್ಯಮಂತ್ರಿ ಪಳನಿಸ್ವಾಮಿ ಸರಕಾರಕ್ಕೆ ಗೆಲುವು ಮತ್ತು ಸೋಲು. 18 ಶಾಸಕರ ಅನರ್ಹತೆ ನಿರ್ಧಾರಕ್ಕೆ ತಡೆ ನೀಡದೇ ಇರುವುದು ಪಳನಿಸ್ವಾಮಿ-ಪನ್ನೀರ್ಸೆಲ್ವಂ ಬಣಕ್ಕೆ ಸದ್ಯದ ಮಟ್ಟಿನ ಗೆಲುವು. ಆದರೆ, ಅ.4ರ ವರೆಗೆ ವಿಶ್ವಾಸಮತ ಸಾಬೀತು ಪಡಿಸದಂತೆ ಸೂಚಿಸಿರುವುದು ಸೋಲೇ. ಏಕೆಂದರೆ, ಶಾಸಕರ ಅನರ್ಹತೆ ನಿರ್ಧಾ ರಕ್ಕೆ ತಡೆ ನೀಡದೇ ಇದ್ದುದರಿಂದ ಮುಂದಿನ ದಿನಗಳಲ್ಲಿ ಪಳನಿಸ್ವಾಮಿ ಸರಕಾರ ಅಧಿವೇಶನ ಕರೆದು ವಿಶ್ವಾಸ ಮತ ಸಾಬೀತು ಮಾಡಬಹುದಾಗಿತ್ತು. ಆದರೆ, ಅ.4ರ ವರೆಗೆ ವಿಶ್ವಾಸಮತಕ್ಕಾಗಿ ಅಧಿವೇಶನ ಕರೆಯದಂತೆ ಸೂಚಿಸಿರು ವುದರಿಂದ ಮುಂದಿನ ಆದೇಶದ ವರೆಗೆ ಪಳನಿಸ್ವಾಮಿ ಸರಕಾರ ಕಾಯಲೇಬೇಕು.
ಅನರ್ಹಗೊಂಡ 18 ಶಾಸಕರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್ ಮತ್ತು ದುಷ್ಯಂತ್ ದವೆ ವಾದ ಮಂಡಿಸಿದರು. ಈ ವೇಳೆ ಕಪಿಲ್ ಸಿಬಲ್ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ನಡೆದ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿ, ಆಗ ಸುಪ್ರೀಂ ಕೋರ್ಟ್ ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡಿದ್ದನ್ನು ಉಲ್ಲೇಖೀಸಿದರು. ಆಗ ಪಳನಿಸ್ವಾಮಿ ಸರಕಾರದ ಪರ ವಕೀಲರು ಆ ಪ್ರಕರಣವೇ ಬೇರೆ, ಇದೇ ಬೇರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ