ರಜನಿಕಾಂತ್ಗೆ “ಕಮಲ’ ಸೂಕ್ತ; ವರ್ಷಾಂತ್ಯಕ್ಕೆ ಕಮಲ್ ಪಕ್ಷ
Team Udayavani, Sep 26, 2017, 6:50 AM IST
ಚೆನ್ನೈ: ಹೊಸ ವರ್ಷದ ಆರಂಭದಲ್ಲಿ ತಮ್ಮ ನೇತೃತ್ವದ ಪಕ್ಷ ಆರಂಭವಾಗಲಿದೆ ಎಂದು ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ. ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಬಗ್ಗೆ ಮಾತನಾಡಿದ ಅವರು ಧಾರ್ಮಿಕ ಹಿನ್ನೆಲೆ ಹೊಂದಿರುವ ರಜನಿಗೆ ಬಿಜೆಪಿಯೇ ಸೂಕ್ತ ಎಂದಿದ್ದಾರೆ.
ತಾವು ವಿಚಾರವಾದಿ ಎಂದು ಹೇಳಿಕೊಂಡ ಕಮಲ್ಹಾಸನ್ ಜಾತಿ ಮತ್ತು ಭ್ರಷ್ಟಾಚಾರದ ವಿರೋಧಿ ಎಂದರು. ತಮಿಳುನಾಡಿಗೆ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ ಎಂದು ಹೇಳಿದ ಅವರು, ಉಳಿದ ರಾಜ್ಯಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಪ್ರತಿಪಾದಿಸಿದರು. “ನ್ಯೂಸ್18′ ಮತ್ತು “ಎನ್ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.
“ಡಿಎಂಕೆ ಮತ್ತು ಎಐಎಡಿಎಂಕೆ ನಡೆಸಿದ ಭ್ರಷ್ಟಾಚಾರಗಳನ್ನು ತಮಿಳುನಾಡಿನ ಜನರು ನೋಡಿದ್ದಾರೆ. ನನ್ನ ನೇತೃತ್ವದ ಹೊಸ ಪಕ್ಷದ 2018ರ ಆರಂಭದಲ್ಲಿಯೇ ಶುರುವಾಗಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜತೆಗಿನ ಭೇಟಿಯಲ್ಲಿ ಯಾವುದೇ ಮಹತ್ವ ಇಲ್ಲ. ಎಲ್ಲ ರೀತಿಯ ಮುಖಂಡರು, ನಾಯಕರ ಜತೆಗೆ ನಾನು ಭೇಟಿಯಾಗುತ್ತೇನೆ. ಹೀಗಾಗಿ ಅದಕ್ಕೆ ಏನೂ ಮಹತ್ವ ಇಲ್ಲ’ ಎಂದು ಹೇಳಿಕೊಂಡಿದ್ದಾರೆ. ಅವರಾಗಿಯೇ ತಮ್ಮ ಬಳಿಗೆ ಬಂದಿದ್ದರು ಎಂದು ಹೇಳಿದ್ದಾರೆ ಕಮಲ್.
ನಿಗದಿತ ಸಮಯ ಸಾಧ್ಯವಿಲ್ಲ: ಹೊಸ ಪಕ್ಷ ಯಾವಾಗ ಆರಂಭವಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ, ಮುಂದಿನ ವರ್ಷದ ಆರಂಭದಲ್ಲಿ ಅದು ಕಾರ್ಯರೂಪಕ್ಕೆ ಬರಬಹುದು ಎಂದು ಹೇಳಿದ್ದಾರೆ. ಅದಕ್ಕಾಗಿ ಬಹಳಷ್ಟು ತಯಾರಿ ಮಾಡಬೇಕಾಗಿದೆ ಎಂದು ಬಹು ಭಾಷಾ ನಟ ಪ್ರತಿಪಾದಿಸಿದ್ದಾರೆ.
ಹೋಲಿಕೆ ಸಲ್ಲದು
ಜಾತಿಪದ್ಧತಿ ಮತ್ತು ಭ್ರಷ್ಟಾಚಾರದ ವಿರೋಧಿ ಎಂದು ಹೇಳಿಕೊಂಡ ಕಮಲ್ಹಾಸನ್, ಸೂಪರ್ಸ್ಟಾರ್ ರಜನಿಕಾಂತ್ ಧಾರ್ಮಿಕ ಸ್ವಭಾವ ಇರುವ ವ್ಯಕ್ತಿ. ಹೀಗಾಗಿ ಅವರು ಬಿಜೆಪಿಗೆ ಸೂಕ್ತವಾದವರು ಎಂದರು. “ಅವರ ಮತ್ತು ನನ್ನ ದಾರಿ ಒಂದೇ ಆಗಿ ರಲು ಸಾಧ್ಯವಿಲ್ಲ. ಕಮಲ್ ಮತ್ತು ರಜನಿ ಎಂದು ಹೋಲಿಕೆ ಮಾಡುವುದೇ ಕೆಟ್ಟದ್ದು. ರಾಜಕೀಯ ಪ್ರವೇಶ ಮಾಡುತ್ತೇನೆ ಎಂದು ನಾನು ಘೋಷಣೆ ಮಾಡಿದ್ದೇನೆ’ ಎಂದು ಕಮಲ್ ಹೇಳಿದ್ದಾರೆ.
ರಾಜಕೀಯವೆಂದರೆ 100 ದಿನಗಳ ಕಾಲ ಓಡುವ ಸಿನಿಮಾ ಎಂದುಕೊಂಡಿದ್ದಾರೆ ಕಮಲ್ ಹಾಸನ್. ಮುಖ್ಯಮಂತ್ರಿಯ ಹುದ್ದೆ ಎಂದರೆ ಅಂಗಡಿಯಿಂದ ಕೊಳ್ಳುವ ಆಟಿಕೆಯೇ? ಅದಕ್ಕೆ ಜನರು ಒಪ್ಪಿಕೊಂಡು ಸ್ವೀಕರಿಸಬೇಕು.
– ಡಿ.ಜಯಕುಮಾರ್, ತಮಿಳುನಾಡು ಹಣಕಾಸು ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
MUST WATCH
ಹೊಸ ಸೇರ್ಪಡೆ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ