ಪ್ರೇಮ ಪ್ರಕರಣದಲ್ಲಿ ವ್ಯಕ್ತಿಯ ಇರಿದು ಕೊಲೆ
Team Udayavani, Oct 23, 2017, 3:15 PM IST
ಮುಜಫರನಗರ : ಶಾಮ್ಲಿ ಜಿಲ್ಲೆಯ ಹಸನ್ಪುರ ಗ್ರಾಮದಲ್ಲಿ ಯಾರೋ ಕೆಲವು ದುಷ್ಕರ್ಮಿಗಳು 26ರ ಹರೆಯದ ವ್ಯಕ್ತಿಯೋರ್ವರನ್ನು ಇರಿದು ಕೊಂದಿದ್ದು ಪ್ರೇಮ ಪ್ರಕರಣವೇ ಈ ಕೊಲೆಗೆ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ದಿಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಮೋಹಿತ್ ಕುಮಾರ್ ಎಂಬಾತ ದೀಪಾವಳಿ ಪ್ರಯುಕ್ತ ಊರಿಗೆ ಬಂದಿದ್ದ. ನಿನ್ನೆ ಭಾನುವಾರ ಆತನನ್ನು ದುಷ್ಕರ್ಮಿಗಳು ಇರಿದು ಕೊಂದರು.
ಈ ಕೊಲೆ ಸಂಬಂಧ ಐವರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಥಾಣಾ ಭವನ್ ಪೊಲೀಸ್ ಎಸ್ಎಚ್ಓ ಎಂ ಎಸ್ ಗಿಲ್ ಹೇಳಿದ್ದಾರೆ.