ಕೇರಳದಲ್ಲಿ ವೇದಕ್ಕೂ ಕಾಲೇಜು
Team Udayavani, Oct 24, 2017, 7:20 AM IST
ತಿರುವನಂತಪುರಂ: ಕೇರಳ ಸರಕಾರದ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಬಿಡಿ) ವೇದಗಳನ್ನು ಕಲಿಸುವ ಹೊಸ ಕಾಲೇಜು ಹಾಗೂ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ಭಾರತದ ಪುರಾತನ ವಿದ್ಯೆಗಳಾದ ವೇದ, ವೇದಾಂತ ಹಾಗೂ ತಂತ್ರಗಳನ್ನು ಬೋಧಿಸುವ ಅಧ್ಯಯನ ಕೇಂದ್ರವನ್ನು “ಶಂಗುಮುಘಮ್’ನಲ್ಲಿ ಹಾಗೂ ವೇದ-ವೇದಾಂತ ಕಾಲೇಜನ್ನು “ಸಸ್ಥಾಂಕೊಟ್ಟಾ’ದಲ್ಲಿ ಸ್ಥಾಪಿಸಲು ನಿರ್ಧರಿಸಲಾ ಗಿದೆ. ಈ ಯೋಜನೆಯಿನ್ನೂ ಪ್ರಾಥಮಿಕ ಹಂತದಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.
ಈ ಬಗ್ಗೆ ವಿವರಣೆ ನೀಡಿರುವ ಟಿಬಿಡಿ ಅಧ್ಯಕ್ಷ ಪ್ರಯಾರ್ ಗೋಪಾಲ ಕೃಷ್ಣನ್, “”ಭಾರತೀಯ ವಿದ್ಯಾ ಸಂಪತ್ತನ್ನು ಜಗತ್ತಿಗೆ ಹಂಚಿದ “ನಳಂದಾ’ ಹಾಗೂ “ತಕ್ಷಶಿಲಾ’ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವೇದ- ವೇದಾಂತ-ತಂತ್ರ ಅಧ್ಯಯನ ಕೇಂದ್ರ, ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಶತ ಮಾನಗಳ ಹಿಂದೆ ಚಾಲ್ತಿಯಲ್ಲಿದ್ದ ಗುರುಕುಲ ಪದ್ಧತಿಯಂತೆ ಇಲ್ಲಿ ಶಿಕ್ಷಣ ನೀಡಲಾಗುವುದು. ಭಾರತದ ಪರಂಪರೆ ಹಾಗೂ ಅಧ್ಯಾತ್ಮಿಕತೆ ಯನ್ನು ಬೋಧಿಸುವಲ್ಲಿ ಈ ಎರಡೂ ಶೈಕ್ಷಣಿಕ ಕೇಂದ್ರಗಳು ಮಹತ್ವದ ಪಾತ್ರ ವಹಿಸಲಿವೆ” ಎಂದು ತಿಳಿಸಿದರು.
ವೇದ-ವೇದಾಂತ-ತಂತ್ರ ಅಧ್ಯಯನ ಕೇಂದ್ರ, ಕಾಲೇಜುಗಳು ಕೋಲ್ಕತಾದಲ್ಲಿರುವ ವಿವೇಕಾನಂದ ವಿವಿಯಿಂದ ಮಾನ್ಯತೆ ಪಡೆದ ಕೇಂದ್ರಗಳಾಗಿರಲಿದ್ದು, ಇವು ಆ ವಿವಿಯ ಅಧೀನದ ಕ್ಯಾಂಪಸ್ಗಳು ಅಥವಾ ಉಪ- ಅಧ್ಯಯನ ಕೇಂದ್ರಗಳ ಮಾದರಿಯಲ್ಲಿ ರಚನೆ ಗೊಳ್ಳಲಿವೆ ಎಂದು ಗೋಪಾಲ ಕೃಷ್ಣನ್ ತಿಳಿಸಿ ದರು. ದೇವಸ್ವಂ ಮಂಡಳಿಯು ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲ ಸೇರಿ 1,248 ದೇವಾಲಯಗಳನ್ನು ನಿರ್ವಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ