ಡೊಂಬಿವಲಿ ಶ್ರೀ ಶಕ್ತಿ ಮಹಿಳಾ ಕನ್ನಡ ಸಂಘದಿಂದ ಅರಸಿನ ಕುಂಕುಮ
Team Udayavani, Feb 16, 2017, 4:41 PM IST
ಡೊಂಬಿವಲಿ: ಡೊಂಬಿವಲಿ ಪಶ್ಚಿಮದ ಶ್ರೀ ಶಕ್ತಿ ಮಹಿಳಾ ಕನ್ನಡ ಸಂಘದ ವತಿಯಿಂದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ಡೊಂಬಿವಲಿ ಪಶ್ಚಿಮದ ಕಾಂಚಿ ಕೋ. ಆಪರೇಟಿವ್ ಹೌಸಿಂಗ್ ಸೊಸೈಟಿಯ ಸಭಾಂಗಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಸಂಘದ ಗೌರವ ಕಾರ್ಯಾಧ್ಯಕ್ಷ ವಿಠಲ್ ಎಂ. ನಾಯ್ಕ, ರತ್ನಾ ಆರ್. ದೇವಾಡಿಗ, ಕಾರ್ಯಾಧ್ಯಕ್ಷೆ ರೋಹಿಣಿ ಅಮೀನ್, ಉಪ ಕಾರ್ಯಾಧ್ಯಕ್ಷೆ ಶಕುಂತಳಾ ವಿ. ನಾಯ್ಕ, ಕಾರ್ಯದರ್ಶಿ ಕಮಲಾ ಎನ್. ನಾಯ್ಕ, ಜತೆ ಕಾರ್ಯದರ್ಶಿ ಶೈಲಜಾ ಜೆ. ಶೆಟ್ಟಿ, ಕೋಶಾಧಿಕಾರಿ ಪ್ರೇಮಾ ಜೆ. ಮೆಂಡನ್, ಜತೆ ಕೋಶಾಧಿಕಾರಿ ಶಾಂತಿ ಎಸ್. ದೇವಾಡಿಗ ಹಾಗೂ ಸಮಿತಿಯಸದಸ್ಯರು ಉಪಸ್ಥಿತರಿದ್ದು ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದರು.
ಪ್ರಾರಂಭದಲ್ಲಿ ಮಹಿಳಾ ವಿಭಾಗದಿಂದ ಭಜನೆ, ವಿಠಲ್ ಎಂ. ನಾಯ್ಕ ಅವರಿಂದ ಗುರುವಂದನೆ, ಪ್ರಾರ್ಥನೆ, ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಸ್ಥಳೀಯ ತುಳು-ಕನ್ನಡಿಗ, ಅನ್ಯಭಾಷಿಯ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ