ಅಂಧೇರಿ ಶ್ರೀ ಭ್ರಮರಾಂಬಿಕೆ ದೇವಸ್ಥಾನದ 37ನೇ ವಾರ್ಷಿಕ ಮಹಾಪೂಜೆ
Team Udayavani, Feb 23, 2017, 5:28 PM IST
ಮುಂಬಯಿ: ಅಂಧೇರಿ ಪೂರ್ವದ ಸಾಕಿನಾಕಾ-ಖೇರಾಣಿರೋಡ್ನ ಗಣೇಶ್ ಚಾಳ್ನಲ್ಲಿರುವ ಶ್ರೀ ಭ್ರಮರಾಂಬಿಕೆ ದೇವಸ್ಥಾನದ 37ನೇ ವಾರ್ಷಿಕ ಮಹಾಪೂಜೆಯು ಫೆ. 17ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಪೂಜಾ ಕೈಂಕರ್ಯಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆಯು ದೇವಸ್ಥಾನದ ಟ್ರಸ್ಟಿ ಕೆರ್ಗಲ್ಲು ಉದಯ ಶೆಟ್ಟಿ ದಂಯ ಯಜಮಾನಿಕೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸಾಯಿ ಸಂತೋಷ್ ಭಟ್ ಪೌರೋಹಿತ್ಯದಲ್ಲಿ ನಡೆಯಿತು. ಬಳಿಕ ಮಹಾ ಪೂಜೆ, ಮಹಾಮಂಗಳಾರತಿ, ಅನ್ನದಾನವನ್ನು ಆಯೋಜಿಸಲಾಗಿತ್ತು.
ಮಧ್ಯಾಹ್ನ ದೇವಿ ದರ್ಶನ, ಸಂಜೆ ಶೋಭಾಯಾತ್ರೆ ನೆರವೇರಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಕೃಷ್ಣ ಬಿ. ಶೆಟ್ಟಿ ದಂಪತಿ, ಕಾರ್ಯದರ್ಶಿ ದಿನೇಶ್ ಆರ್. ಕೆ., ಕೋಶಾಧಿಕಾರಿ ಗಣೇಶ್ ಬಲ್ಯಾಯ, ಉಪಾಧ್ಯಕ್ಷ ನೀಲೇಶ್ ಶೆಟ್ಟಿಗಾರ್, ಜತೆ ಕಾರ್ಯದರ್ಶಿ ಜಗಜೀವನ್ ಪೂಜಾರಿ, ಜತೆ ಕೋಶಾಧಿಕಾರಿ ಆಶಿಶ್ಶೆಟ್ಟಿ, ಟ್ರಸ್ಟಿಗಳಾದ ಮಾಧವ ಶೆಟ್ಟಿ, ಶ್ರೀನಿವಾಸ ಸಾಲ್ಯಾನ್, ರಾಜೇಂದ್ರ ಭಟ್, ವಿಶ್ವನಾಥ್ ಶೇರಿಗಾರ್, ಪರ್ವಿಂದರ್ ಸಿಂಗ್, ಸಂಧ್ಯಾಕಲಾ ಅಮೀನ್, ಪೂಜಾ ಸಮಿತಿಯ ಸತೀಶ್ ಕರ್ಕೇರ, ಭಾಸ್ಕರ ಸುವರ್ಣ ಸಸಿಹಿತ್ಲು, ನಾಗರಾಜ ಪೂಜಾರಿ, ಅಶೋಕ್ ಶೆಟ್ಟಿ ತೋಡಾರ್, ಅಂಧೇರಿ ಕರ್ನಾಟಕ ಸಂಘದ ಅಧ್ಯಕ್ಷ ಹ್ಯಾರಿ ಸಿ. ಸಿಕ್ವೇರಾ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ