ರೆಂಜಾಳ ಗರಡಿಯ  ಜೀರ್ಣೋದ್ಧಾರದ ನೆರವಿಗಾಗಿ ಮನವಿ


Team Udayavani, Mar 26, 2017, 3:46 PM IST

25-Mum02a.jpg

ಮುಂಬಯಿ: ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಶ್ರೀ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯು ಜೀರ್ಣೋದ್ಧಾರಗೊಳ್ಳುತ್ತಿದ್ದು, ಈ ಪುಣ್ಯ ಕಾರ್ಯಕ್ಕೆ ಪರವೂರಿನ ಭಕ್ತಾದಿಗಳು ಸಹಕರಿಸುವಂತೆ ಮನವಿ ಮಾಡಲಾಗಿದೆ.

ರೆಂಜಾಳ ಗ್ರಾಮದಲ್ಲಿ  ಊರಿನ ಹಿರಿಯರು ಶತಮಾನಗಳಿಂದ ದೈವಿಶಕ್ತಿಗಳನ್ನು ನಂಬಿ, ನೆಲೆಗೊಳಿಸಿ, ಆರಾಧಿಸುತ್ತಾ ಬಂದಿರುವುದು ಊರಿನವರ ಭಾಗ್ಯವೇ ಸರಿ. ಪ್ರಸ್ತುತ ಊರಿನ ಮಧ್ಯ ಭಾಗದಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾ ಬಂದಿರುವ ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ ದೈವಗಳ ಸಾನ್ನಿಧ್ಯ ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಂಬಿ ನೆಲೆಗೊಳಿಸಿಕೊಂಡಿರುವ ಸಾನ್ನಿಧ್ಯಗಳು ಊರಿನ ಸರ್ವ ಧರ್ಮಿಯರಿಗೂ ಮುಖ್ಯ ಆರಾಧನಾ ಕೇಂದ್ರವೆನಿಸಿಕೊಂಡಿವೆ.

ನೂರಾರು ವರ್ಷಗಳ ಹಿಂದೆ ಊರನ್ನು ಪ್ರವೇಶಿಸಿದ ಈ ದೈವೀ ಶಕ್ತಿಗಳನ್ನು ಮೊದಲು ವಿವಿಧೆಡೆಗಳಲ್ಲಿ ಆರಾಧಿಸಿಕೊಂಡು ಬಂದಿದ್ದರೂ ಕೊನೆಗೆ ಸುಮಾರು 210 ವರ್ಷಗಳ ಹಿಂದೆ ಈಗಿರುವ ಹೈಪಿಲತ್ತ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಕಾರ್ಯ ಆರಂಭವಾಯಿತು. ಮೊದಲು ಹುಲ್ಲಿನ ಗುಡಿಸಲಿನಲ್ಲಿ ದೈವಸ್ಥಾನ, ಗರಡಿಗಳನ್ನು ನಿರ್ಮಿಸಿ ಸಾನ್ನಿಧ್ಯವನ್ನು ನಂಬಿದ್ದು, ಬಳಿಕ ಸುಮಾರು 100 ವರ್ಷಗಳ ಹಿಂದೆ ಸುಂದರವಾದ ಹಂಚಿನ ಮೇಲ್ಛಾವಣಿಯುಳ್ಳ ನೆಲೆಗಳನ್ನು ನಿರ್ಮಿಸಲಾಯಿತು. ಈ ಕ್ಷೇತ್ರದಲ್ಲಿ ವರ್ಷದಲ್ಲಿ 12 ಸಂಕ್ರಾಂತಿ, ಹೊಸ ಫಲ ಹಬ್ಬ, ನಾಲ್ಕು ವಿನಿಯೋಗಗಳು ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿವೆ. ಸೋಣದ ಕೋಲ, ಕಂಬಳ ಕೋರಿ, ದೊಂಪದ ಬಲಿ ಹಾಗೂ ವಾರ್ಷಿಕ ಆಯನೋತ್ಸವ ಸಾನ್ನಿಧ್ಯಗಳಿಗೆ ಸಲ್ಲುವ ಗೌರವವಾಗಿದೆ. ಈ ದೈವ ಸಾನ್ನಿಧ್ಯಕ್ಕೆ ಸಂಬಂಧಿಸಿದ ಸ್ಥಾನದ ಬಾಕ್ಯಾರು, ಶತಮಾನಗಳ ಹಿಂದೆ ಸ್ಥಾಪಿಸಲ್ಪಟ್ಟ ಪಕ್ಕದಲ್ಲಿರುವ ಶಾಲೆಯ ಮಕ್ಕಳಿಗೆ ಆಟವಾಡಲು ಅನುಕೂಲಕರ ಕೇಂದ್ರವೆನಿಸಿದೆ.

ಪ್ರಸ್ತುತ ಈ ದೈವಸ್ಥಾನ, ಗರಡಿಗಳು ಕಾಲದೋಷದಿಂದ ಶಿಥಿಲಗೊಂಡಿದ್ದು, ಅವುಗಳ ಜೀರ್ಣೋದ್ಧಾರ ಮಾಡಿ ದೈವ ಸಾನ್ನಿಧ್ಯವನ್ನು ಪುನರ್‌ ಪ್ರತಿಷ್ಠಾಪಿಸುವ ಸಂಕಲ್ಪ ಮಾಡಲಾಗಿದೆ. ಅದಕ್ಕಾಗಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದೆ. ದೈವಸ್ಥಾನ, ಗರಡಿಗಳ ಅದೇ ಮೂಲ ಪಂಚಾಂಗದ ಮೇಲೆ ಹೊಸ ಭದ್ರವಾದ ಗೋಡೆ ಹಾಗೂ ನೂತನ ಹಂಚಿನ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ. ಜೊತೆಗೆ ದೈವಸ್ಥಾನದ ಗೋಪುರ ನಿರ್ಮಾಣ, ಅಂಗಣಕ್ಕೆ ನೆಲೆಹಾಸು, ದೈವನರ್ತನ ಪ್ರದೇಶಕ್ಕೆ ಭದ್ರವಾದ ಸ್ಥಿರ ಮೇಲ್ಛಾವಣಿ , ದೈವಸ್ಥಾನದಲ್ಲಿ ನೂತನ ಮಂಚ ನಿರ್ಮಾಣ, ಸುಂದರವಾದ ಪಾಗಾರ ಗೋಡೆ ನಿರ್ಮಿಸುವ ಯೋಜನೆಯನ್ನು ಸಮಿತಿಯು  ಹಾಕಿಕೊಂಡು ಕಾರ್ಯಪ್ರವೃತ್ತವಾಗಿದೆ.

ಸಹೃದಯರ ಭಕ್ತರ ಪೂರ್ಣ ಬೆಂಬಲದ ಭರವಸೆ ದೊರಕಿದ್ದು, ಸುಮಾರು 45 ಲಕ್ಷ ರೂ. ವೆಚ್ಚದ ಈ ಕಾರ್ಯ ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವ ಸಂಕಲ್ಪದಿಂದ ಕಾರ್ಯೋನ್ಮುಖವಾಗಲಾಗಿದೆ. ಮಾರ್ಚ್‌ ಕೊನೆಯೊಳಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಿಸುವ ನಿರ್ಧಾರವನ್ನು ಮಾಡಲಾಗಿದೆ. ಇದಕ್ಕೆ ಭಕ್ತರ ಸಂಪೂರ್ಣ ಸಹಕಾರವನ್ನು ಆಪೇಕ್ಷಿಸಲಾಗುತ್ತಿದೆ. ಹೃದಯ ಶ್ರೀಮಂತಿಕೆಯುಳ್ಳ ಮುಂಬಯಿಯ ಭಕ್ತಾದಿಗಳು, ದಾನಿಗಳು, ಸಹೃದಯಿ ಗಳು ಈ ಹಿಂದೆ ರೆಂಜಾಳ ಗ್ರಾಮದ ಎಲ್ಲಾ ಸತ್ಕಾರ್ಯಗಳಲ್ಲಿ ಸಂತಸದಿಂದ ಕೈಜೋಡಿಸಿದ್ದೀರಿ. ಈ ಬಾರಿಯೂ ಅದೇ ರೀತಿಯ ಸಹಕಾರವನ್ನು ಆಪೇಕ್ಷಿಸಲಾಗುತ್ತಿದೆ.

ಒಂದು ಲಕ್ಷ ರೂ. ಗಳಿಗಿಂತ ಅಧಿಕ ದೇಣಿಗೆಯನ್ನು ನೀಡುವವರ ಹೆಸರನ್ನು ಶಿಲಾಫಲಕದಲ್ಲಿ ಬರೆದಿಡಲಾಗುವುದು ಅಲ್ಲದೆ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅವರನ್ನು ವಿಶೇಷವಾಗಿ ಗೌರವಿಸಲಾಗುವುದು. ಐವತ್ತು ಸಾವಿರ ರೂ.ಗಳಿಗಿಂತ ಅಧಿಕ ದೇಣಿಗೆ ನೀಡುವವರ ಹೆಸರನ್ನು ಶಿಲಾಫಲಕದಲ್ಲಿ ಹಾಕಲಾಗುವುದು, ಅಲ್ಲದೆ ಉತ್ಸವದ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಗುವುದು. 25 ಸಾವಿರ ರೂ. ಗಳಿಗಿಂತ ಅಧಿಕ ದೇಣಿಗೆಯನ್ನು ನೀಡುವವರ ಹೆಸರನ್ನು ನಾಮಫಲಕದಲ್ಲಿ ಬರೆದಿಡಲಾಗುವುದು. ದೇಣಿಗೆ ನೀಡಲು ಆಪೇಕ್ಷಿಸುವ ಧರ್ಮ ಬಂಧುಗಳು ನಗದು ರೂಪದಲ್ಲಿ ಅಥವಾ ಚೆಕ್‌/ಡಿಡಿ ರೂಪದಲ್ಲಿ ತಮ್ಮ ಕೊಡುಗೆಯನ್ನು “ಶ್ರೀ ದೈವಸ್ಥಾನ ರೆಂಜಾಳ’ ಎಂಬ ಹೆಸರಿನಲ್ಲಿ ಪಾವತಿ ಮಾಡಬಹುದು.

ಎನ್‌ಇಎಫ್‌ಟಿ/ಆರ್‌ಟಿಜಿಎಸ್‌ ರೂಪದಲ್ಲಿ ಪಾವತಿಸುವವರು ಚಾಲ್ತಿ ಖಾತೆ 0005376000030 ಕ್ಕೆ, ಐಎಫ್‌ಎಸ್‌ಸಿ ಕೋಡ್‌ ಐಬಿಕೆಎಲ್‌078ಎಸ್‌ಸಿಡಿಸಿ “ಬಾಹುಬಲಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಲಿ ಕಾರ್ಕಳ’ ಎಂಬ ಹೆಸರಿನಲ್ಲಿ ಕಳುಹಿಸಿಕೊಡಬಹುದು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಪಾರ್ಶ್ವನಾಥ ಹೆಗ್ಡೆ ಬ್ರಾಣಬೆಟ್ಟು ರೆಂಜಾಳ, ಕಾರ್ಯಾಧ್ಯಕ್ಷರಾಗಿ ಬಿ. ಮಹಾವೀರ ಹೆಗ್ಡೆ ಬ್ರಾಣಬೆಟ್ಟು, ಉಪಾಧ್ಯಕ್ಷರಾಗಿ ಜಿನರಾಜ ಹಲ್ಮ ಕಲ್ಕದಬೆಟ್ಟು, ಅನಂತ್ರಾಜ ಪಾಂಡಿ ಪಾಡ್ಯಾರು, ಭವ್ಯರಾಜ ಹೆಗ್ಡೆ ಸೊಂಬೆಟ್ಟು, ಕಾರ್ಯದರ್ಶಿಯಾಗಿ ಅಜಿತ್‌ ಕುಮಾರ್‌ ಅವರು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಗಲಿರುಳು ಸಹಕರಿಸುತ್ತಿದ್ದಾರೆ.

ಮುಂಬಯಿ, ಪುಣೆ, ನಾಸಿಕ್‌, ಸೂರತ್‌ ಭಕ್ತಾಭಿಮಾನಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು ರಾಮಚಂದ್ರ ವಿ. ಶೆಟ್ಟಿ ಸೂರತ್‌ (9825115150), ನವೀನ್‌ ಶೆಟ್ಟಿ ನವಿ ಮುಂಬಯಿ (9930303041), ಸಕೀತ್‌ ಕುಮಾರ್‌ ಜೈನ್‌ ನವಿಮುಂಬಯಿ (9323830750), ಜಯ ಆರ್‌. ಶೆಟ್ಟಿ ಪುಣೆ (9860184320) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.