ಮೀರಾರೋಡ್ ಕರ್ನಾಟಕ ಸಂಘದ 29ನೇ ವಾರ್ಷಿಕ ಮಹಾಸಭೆ
Team Udayavani, Mar 28, 2017, 5:21 PM IST
ಮುಂಬಯಿ: ಸಾಮಾಜಿಕ ಸಂಘಟನೆಯಲ್ಲಿ ಪಾರದರ್ಶಕತೆ ಅನಿವಾರ್ಯ ವಾಗಿದೆ. ಸದಸ್ಯರ ಅವ್ಯವಹಾರ ಕಂಡುಬಂದಲ್ಲಿ ಅದನ್ನು ಅಲ್ಲೇ ಬುದ್ಧಿವಾದದ ಮೂಲಕ ತಿದ್ದಬೇಕು. ಸಲಹೆ -ಸೂಚನೆಗಳ ಮೂಲಕ ಸರಿಪಡಿಸಬೇಕು. ಇದರಿಂದ ಅಮೂಲ್ಯ ಸಮಯವನ್ನು ಪ್ರಗತಿಪರ ಚಿಂತನೆಯತ್ತ ಹರಿಸಲು ಸಾಧ್ಯವಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವ ಮನೋಭಾವ ನಮ್ಮದಾಗಬೇಕು. ಮಹಾಸಭೆಯು ಅರೋಪ ಪ್ರತ್ಯಾರೋಪ
ಗಳ ವೇದಿಕೆಯಾಗದೆ, ಕೂಡು ಕುಟುಂಬದ ಹಬ್ಬದ ಚಾವಡಿಯಾಗಬೇಕು ಎಂದು ಮೀರಾರೋಡ್ ಕರ್ನಾಟಕ ಸಂಘದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್ ಅವರು ನುಡಿದರು.
ಮಾ. 26ರಂದು ಮೀರಾರೋಡ್ ಪೂರ್ವದ ಸೆಕ್ಟರ್ 11 ರ, ಬಿ-1 ರಲ್ಲಿರುವ ಮೀರಾರೋಡ್ ಕರ್ನಾಟಕ ಸಂಘದ ಕಚೇರಿಯಲ್ಲಿ ಸಂಘದ 29ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಗ್ರಾಮವಾಗಿದ್ದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದ, ಬೆರಳೆಣಿಕೆಯ ಸದಸ್ಯರಿದ್ದ ಸಂದರ್ಭ ಮೀರಾರೋಡ್ ಕರ್ನಾಟಕ ಸಂಘ ಹುಟ್ಟಿಕೊಂಡಿದೆ. ನಮ್ಮ ಅನೇಕ ಯೋಜನೆಗಳು ಸಂಘದ ಮುಖಾಂತರ ಕಾರ್ಯಗತಗೊಂಡಿದೆ. ಮೀರಾ-
ಭಾಯಂದರ್ನಲ್ಲಿ ಸುಮಾರು 55 ಸಂಘ-ಸಂಸ್ಥೆಗಳಿದ್ದರೂ ಅವುಗಳಿಗೆಲ್ಲ ಮಾತೃ ಸಂಸ್ಥೆಯ ಸ್ಥಾನದಲ್ಲಿ ಮೀರಾರೋಡ್ ಕರ್ನಾಟಕ ಸಂಘ ಇದೆ ಎಂದು ಹೇಳಲು ಅಭಿಮಾನವಾಗುತ್ತಿದೆ ಎಂದರು.
ಆಯವ್ಯಯ ಪಟ್ಟಿಯನ್ನು ಕೋಶಾಧಿಕಾರಿ ಗೋಪಾಲಕೃಷ್ಣ ಗಾಣಿಗ ವಾಚಿಸಿದರು. ಸಲಹೆಗಾರ ಭಾಸ್ಕರ ಶೆಟ್ಟಿ ಅವರು ಗತ ಸಭೆಯ ವರದಿ ಮಂಡಿಸಿದರು. ಸುಮತಿ ಆರ್. ಶೆಟ್ಟಿ ಪ್ರಾರ್ಥನೆಗೈದರು. ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಶೀಲ ಬಿಜೂರು ವಂದಿಸಿದರು. ಕಾರ್ಯದರ್ಶಿ ದಾಮೋದರ ಎನ್. ಶೆಟ್ಟಿ ಸ್ವಾಗತಿಸಿದರು.
ಜತೆ ಕೋಶಾಧಿಕಾರಿ ಶಾಲಿನಿ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಹರೀಶ್ ಎಂ. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಶಾಲಿನಿ ಎಸ್. ಶೆಟ್ಟಿ, ಮಾಜಿ ಅಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ, ದಿವಾಕರ ಶೆಟ್ಟಿ, ಕೃಷ್ಣ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
RCB: ಈ ಸಲ ಕಪ್ ನಮ್ಮದು…