ಮುಂಬಯಿ:ಸೆ.17ರಿಂದ ಸೀತಾನದಿ ಕನ್ನಡ ಚಲನಚಿತ್ರ ಪ್ರದರ್ಶನ


Team Udayavani, Sep 15, 2017, 3:52 PM IST

14.jpg

ಮುಂಬಯಿ: ಮಲೆನಾಡ ಪ್ರಕೃತಿಯ ಮಡಿಲಿಗೆ ತಾಗಿರುವ ಪುಟ್ಟ ಊರಲ್ಲೊಂದು ಪುಟ್ಟ ಮನೆ. ಹೆಣ್ಣು ಮಕ್ಕಳೇ ಇರುವ ಆ ಮನೆಯಲ್ಲಿ ಮುದ್ದು ಮನಸ್ಸಿನ ಹದಿನಾರರ ಕುಸುಮ ಬಾಲೆಗೆ ನೀರೆಂದರೆ ಪಂಚ ಪ್ರಾಣ. ತನ್ನ ಮನೆಯ ಪಕ್ಕದಲ್ಲಿಯೇ ಹರಿವ ನದಿಯಲ್ಲಿ ಆಟಆಡುತ್ತಾ ಪಾಠಕಲಿಯುವ ಹೊತ್ತಿನಲ್ಲಿ ಅವಳಿಗೆ ಪರಿಚಯವಾಗುವ ಪರವೂರಿನಿಂದ ಬಂದ ಒಬ್ಬ ಹುಡುಗ ಮತ್ತು ಅವರಸುತ್ತ ನಡೆಯುವ ಘಟನೆಗಳು ಹೇಗೆ ಇಡೀ ಊರನ್ನೆ ಜಾಗೃತಗೊಳಿಸಿ ನಾಡಿಗೆ ಮಾದರಿಯಾಗುತ್ತದೆ ಎಂಬುವುದನ್ನು ಸಾರುವ ಸೀತಾನದಿ ಎಂಬ ಕನ್ನಡ ಚಲನಚಿತ್ರವು ಸೆ. 17 ರಿಂದ ಮುಂಬಯಿಯಾದ್ಯಂತ ಪ್ರದರ್ಶನಗೊಳ್ಳಲಿದೆ. 

ಕಳೆದ ವರ್ಷ ಕರ್ನಾಟಕಾದ್ಯಂತ ಬಿಡುಗಡೆಗೊಂಡು ಜನಮನಗೆದ್ದ ಉತ್ತಮ ಕೌಟುಂಬಿಕ ಚಲನಚಿತ್ರ ಈಗ ಮಹಾನಗರಿ ಮುಂಬಯಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ. 

ನಮ್ಮ ತುಳುನಾಡಿನ ಪ್ರಕೃತಿ ರಮಣೀಯ ಸ್ಥಳಗಳಾದ ಆಗುಂಬೆ, ಸೀತಾನದಿ, ಹೆಬ್ರಿ ಮತ್ತು ಅದರ ಸುತ್ತಲಿನ ಮಲೆನಾಡು-ಕರಾವಳಿಯ ರಮ್ಯ ಮನೋಹರ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ಈ ಸಿನೆಮಾ ವೀಕ್ಷಕರ ಕಣ್ಮನ ತಣಿಸುವುದರಲ್ಲಿ ಎರಡು ಮಾತಿಲ್ಲ.ಸೀತಾನದಿಯಲ್ಲಿ  ನೋಡುವವರೆಲ್ಲರಿಗೂ ಇಷ್ಟವಾಗುವ ವಿಷಯಗಳೆಂದರೆ ಅದರ ಕಥೆಯ ಕೆಲವು ಸೂಕ್ಷ್ಮ ಅಂಶಗಳು. ಒಂದು ನೈಜಘಟನೆಯನ್ನು ಆದರಿಸಿ ತಯಾರಿಸಿದ ಗಟ್ಟಿಕಥೆಯನ್ನು ಸಿನೆಮಾಕ್ಕೆ ಬೇಕಾದ ರೀತಿಯಲ್ಲಿ ನಿರೂಪಿಸಿ, ಸಮಾಜಕ್ಕೊಂದು ಸಂದೇಶಕೊಡುವ ಮೂಲಕ ಜನರ ಹƒದಯತಲುಪುವುದು ಖಂಡಿತ.ಅತಿಯಾಗಿ ಯಾವುದನ್ನೂ ಹೇಳುವ ಮೂಲಕ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವ ಕೆಲಸಕ್ಕೆ ನಿರ್ದೇಶಕರು ಕೈ ಹಾಕಿಲ್ಲ. 

ಏನು ಹೇಳಬೇಕೋ ಅದನ್ನು ನೀಟಾಗಿ ಹೇಳು ವುದರೊಂದಿಗೆ ಸೀತಾನದಿಯನ್ನು ಕಟ್ಟಿಕೊಟ್ಟಿದ್ದಾರೆ. ಇಡೀ ಸಿನೆಮಾ ನಡಿಯುವುದು ಸೀತಾನದಿ ಪರಿಸರದಲ್ಲಿ. ಹಾಗಾಗಿ ನಗರದ ಸದ್ದು-ಗದ್ದಲಗಳಿಂದ ಮುಕ್ತ. ಹಚ್ಚ ಹಸಿರಿನ ಊರಿನ ನಡುವೆ ಇಡೀ ಸಿನಿಮಾ ಸಾಗುವುದರಿಂದ ನಿಮಗೆ ನಿಮ್ಮ ಊರು, ಬಾಲ್ಯದ ನೆನಪಾದರೂ ಆಗಬಹುದು. ನರೇಂದ್ರ ಕಬ್ಬಿನಾಲೆಯವರ ಕಥೆಯಲ್ಲಿ ಸಾಕಷ್ಟು ಸೂಕ್ಷ ಅಂಶಗಳಿವೆ. ಅವೆಲ್ಲವನ್ನು ಅಚ್ಚುಕಟ್ಟಾಗಿ ನಿರ್ದೇಶಕ ಕೆ. ಶರತ್‌ ಅವರು ನಿರೂಪಿಸಿದ್ದಾರೆ. ಊರಿನಲ್ಲಿರುವ ಒಗ್ಗಟ್ಟು, ನರೆಮನೆಯವರಿಗೆ ಏನಾದರೂ ತೊಂದರೆಯಾದಾಗ ತತ್‌ಕ್ಷಣ ಸ್ಪಂದಿಸುವ ಜನರ ಮನಸ್ಸನು ಮುಂತಾದ ಸೂಕ್ಷ್ಮ ವಿಚಾರಗಳನ್ನು ಮನೋಜ್ಞವಾಗಿ ತೋರಿಸುವ ಮೂಲಕ ತುಳುನಾಡಿನ ಹಳ್ಳಿಯ ಚಿತ್ರಣ ತುಂಬಿದೆ.  ತುಳುನಾಡಿನ ಜನರು ಮಾತಾಡುವ ಶುದ್ಧ ಕನ್ನಡದಲ್ಲಿಯೇ ಸಂಭಾಷಣೆಯನ್ನು ಬರೆದಿದ್ದಾರೆ ಡಿ.ಬಿ.ಸಿ ಶೇಖರ್‌. ಪ್ರಕೃತಿಯ ಸೊಬಗನ್ನು ಚೆಂದವಾಗಿ ಸೆರೆಹಿಡಿದಯುವ ಕ್ಯಾಮಾರಮ್ಯಾನ್‌ ಮಯೂರ್‌ಆರ್‌. ಶೆಟ್ಟಿಯವರು ಈಗಾಗಲೆ ಕೊಸ್ಟಲ್‌ವುಡ್‌ನ‌ಲ್ಲಿ ಎಕ್ಕಸಕ್ಕ ಮತ್ತು  ಮಿತ್ತಬೈಲ್‌ ಯಮುನಕ್ಕ ಚಿತ್ರಗಳಿಗೆ ಉತ್ತಮ ಸಾಹಿತ್ಯ ಬರೆದು ಮನೆಮಾತಾಗಿದ್ದಾರೆ. ಮುಂಬಯಿಯ ಪುರಂದರ್‌ ಶೆಟ್ಟಿಗಾರ್‌ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಇಂಪಾದ ನಾಲ್ಕು ಹಾಡಿಗೆ ಸಾಹಿತ್ಯವನ್ನು ಹಿರಿಯ ಸಾಹಿತಿಗಳಾದ ಅಂಬಾತನಯ ಮುದ್ರಾಡಿಯವರ ಸೋದರ ಸಂಬಂಧಿ ನರೇಂದ್ರ ಕಬ್ಬಿನಾಲೆಯವರು ಬರೆದಿದ್ದಾರೆ.

ವಿರತಿ ಸಿನಿ ಕ್ರೀಯೆಸನ್ಸ್‌ ಲಾಂಛನದಲ್ಲಿ ತಯಾರಿಸಲಾದ ಈ ಚಲನಚಿತ್ರಕ್ಕೆ ಮುಂಬಯಿ ಯುವ ಉದ್ಯಮಿ ಸುಧಾಕರ್‌ ಶೆಟ್ಟಿ ಮುನಿಯಾಲು ಅವರು ಬಂಡವಾಳ ಹೂಡಿದ್ದಾರೆ. ತಮ್ಮ ಊರಿನ ಸೌಂದರ್ಯವನ್ನುದೊಡ್ಡ ಸ್ಕಿÅàನ್‌ನಲ್ಲಿ ಎಲ್ಲರಿಗೂ ತೋರಿಸುವ ಬಯಕೆ, ಯುವ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಮಿಡಿತ ಮತ್ತು ಕಲೆ-ಕನ್ನಡ ಭಾಷೆಯ ಬಗ್ಗೆ ಇವರಿಗಿದ್ದ ಅಭಿಮಾನದ ಪ್ರತೀಕವೇ ಸೀತಾನದಿ ಎನ್ನುತ್ತಾರೆ ನಿರ್ಮಾಪಕರು. ಪಕ್ಕ ಕಮರ್ಷಿಯಲ್‌ಅಲ್ಲದ ಹಳ್ಳಿಯ ಜೀವನವನ್ನು ತೋರಿಸುವ ಈ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಮಂಗಳೂರಿನ ಪುಟ್ಟ ಚೆಲುವೆ ಕುಮಾರಿ ಶ್ರೇಯಾ ಮನೋಜ್ಞವಾಗಿ ನಟಿಸಿದ್ದಾಳೆ. ಕನ್ನಡದ ಖ್ಯಾತಧಾರಾವಾಹಿ ಗೃಹ ಲಕ್ಷ್ಮಿàಯಲ್ಲಿ ನಟಿಸಿರುವ ಮುದ್ದು ಮುದ್ದಾದ ಇವಳ ನಟನೆಯೇ ಸಿನಿಮಾಕ್ಕೆ ಜೀವ ತುಂಬಿದೆ. ಚಿತ್ರದ ನಾಯಕನಾಗಿ ವಿಷ್ಣವಲ್ಲಭ ಅಭಿನಯಿಸಿದ್ದಾರೆ. ತಾಯಿಯಾಗಿ ತನುಜಾ ಅವರ ನಟನೆ ಇಷ್ಟವಾಗುತ್ತದೆ.  ಊರಿನ ಶೇಂದಿ ಕಿಟ್ಟಪ್ಪನ ಪಾತ್ರದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣರವರ ಕಾಮಿಡಿ ನೋಡಲೇಬೇಕು. ಅವರ ಜೊತೆಗೆಕುಲ್‌ದೀಪ್‌, ಯಾದವ್‌ ಕಲ್ಲಾಪು ಇವರ ಕಾಂಬಿನೇಷನ್‌ ಜನರನ್ನು ನಗಿಸುವುದರಲ್ಲಿ ಸಂಶಯವಿಲ್ಲ.

ಈ ಚಲನಚಿತ್ರದಲ್ಲಿ ವಿಶೇಷವಾಗಿ ಕಾರ್ಕಳದ ಶಾಸಕ ವಿ. ಸುನಿಲ್‌ ಕುಮಾರ್‌ರವರು ಮೊದಲ ಬಾರಿಗೆ ಹಿರಿತೆರೆಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿರುವುದು ಸಿನಿಮಾಕ್ಕೆ ಹೆಚ್ಚಿನ ಲುಕ್‌ ಕೊಟ್ಟಿದೆ.  

ಹಿರಿಯ ಸಾಹಿತಿ, ಹರಿದಾಸ, ವಿಮರ್ಶಕ  ಅಂಬಾತನಯ ಮುದ್ರಾಡಿ ಅವರನ್ನು ಪ್ರಥಮ ಬಾರಿಗೆ ಬಣ್ಣ ಹಚ್ಚಿ, ಚಿತ್ರದಲ್ಲಿ ಹಿರಿಯ ಸಮಾಜ ಚಿಂತಕರ ಪಾತ್ರದಲ್ಲಿ ಕಾಣಿಸಿ ಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಡಬಹುದು. 

ಉತ್ತಮವಾದ ಕಥೆ, ಸಂಭಾಷಣೆ, ಸಂಗೀತ, ಛಾಯಗ್ರಹಣ, ನಿರ್ದೇಶನಗಳನ್ನು ಹೊಂದಿರುವ  ಸೀತಾನದಿ ಮುಂಬಯಿಗೆ ಹರಿಯ ಬಂದಿರುವುದು ಹೊರನಾಡು ಕನ್ನಡಿಗರಿಗೆ ಸಂತಸದ ವಿಚಾರ.

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.