ಮಲವಂತಿಗೆ ಪಂಚಾಯತ್ಗೆ ಎಸಿಬಿ ದಾಳಿ
Team Udayavani, Jan 14, 2017, 3:50 AM IST
ಬೆಳ್ತಂಗಡಿ: ಮಲವಂತಿಗೆ ಪಂಚಾಯತ್ನಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ಇಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದು ಪ್ರಸ್ತುತ ಚಿತ್ರದುರ್ಗಕ್ಕೆ ವರ್ಗಾವಣೆಯಾದ ಕುಮಾರ್, ಈಗಿನ ಉಪಾಧ್ಯಕ್ಷೆ ವನಿತಾ ಪೂಜಾರಿ ಹಾಗೂ ಬಿಲ್ ಕಲೆಕ್ಟರ್ ಆಪಾದಿತರು. ಇವರು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಮಾಡಿದ ಆಪಾದನೆಗೆ ಒಳಗಾಗಿದ್ದಾರೆ.
ಮಂಜುಳಾ ಅವರ ಬಾಬ್ತು ಕಾಮಗಾರಿ ಆಗಿದೆ ಎಂದುತೋರಿಸಿ 46 ಸಾವಿರ ರೂ. ಬಿಲ್ ಮಾಡಲಾಗಿತ್ತು. ಇದರಲ್ಲಿ ಮಂಜುಳಾ ಅವರಿಗೆ 4 ಸಾವಿರ ರೂ. ಮಾತ್ರ ನೀಡಲಾಗಿದ್ದು ಉಳಿದ ಹಣ ಭ್ರಷ್ಟಾಚಾರವಾಗಿದೆ. ತನಿಯಪ್ಪ ಪೂಜಾರಿ ಅವರ ಬಾಬ್ತು ಬಾವಿ ಕಾಮಗಾರಿ ನಡೆದಿದೆ ಎಂದು 38 ಸಾವಿರ ರೂ. ಬಿಲ್ ಮಾಡಲಾಗಿದ್ದು ಅವರಿಗೆ 19 ಸಾವಿರ ರೂ. ಪಾವತಿಸಿದ ದಾಖಲೆಯಿದೆ. ಉಳಿಕೆ ಹಣ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಲಾಗಿತ್ತು.
ಬಿಲ್ ಕಲೆಕ್ಟರ್ ತನ್ನ ತಂಗಿ, ತಮ್ಮನ ಹೆಸರಿನಲ್ಲಿ ಉದ್ಯೋಗ ಖಾತರಿಯ ಹಣ ಪಡೆಯುತ್ತಿದ್ದ. ಉಪಾಧ್ಯಕ್ಷೆ ತಾನು, ತಂದೆ, ತಾಯಿ ಕೂಲಿ ಮಾಡಿದ್ದಾಗಿ ಜಾಬ್ ಕಾರ್ಡ್ ಮಾಡಿಸಿ ಹಣ ಪಡೆಯುತ್ತಿದ್ದರು. ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಅನೇಕ ಕಡತಗಳು ತಿದ್ದಿದ್ದು ಗೋಚರವಾಗಿದೆ. ಒಂದಷ್ಟು ಕಡತಗಳು ಸಿಗಲೇ ಇಲ್ಲ.
ಈಗ ಪಿಡಿಒ ಆಗಿರುವ ಮಾರುತಿ ಅವರಿಗೆ ಈ ಅವ್ಯವಹಾರದ ಕುರಿತು ಪೂರ್ಣ ಮಾಹಿತಿ ಇಲ್ಲ ಎಂದು ತಿಳಿಸಿದರು. ತನಿಯಪ್ಪ ಪೂಜಾರಿ ಅವರು ತನಗೆ ಬರಬೇಕಾದ ಹಣ ಬಂದಿದೆ ಎಂದು ಬರೆದುಕೊಟ್ಟರು. ಮಂಜುಳಾ ಅವರು ಹಣ ಬಾಕಿ ಇರುವ ಹೇಳಿಕೆ ನೀಡಿದ್ದಾರೆ. ದಾಳಿ ವೇಳೆ ಬಿಲ್ ಕಲೆಕ್ಟರ್ ಇರಲಿಲ್ಲ. ಹಾಜರಾಗಲು ನೋಟಿಸ್ ನೀಡಲಾಗಿದೆ. ಮಾಹಿತಿ ಹಕ್ಕು ಹೋರಾಟಗಾರ ಸುರೇಂದ್ರ ಅವರು ದೂರು ನೀಡಿದ್ದು ಎಸಿಬಿ ಡಿವೈಎಸ್ಪಿ ಸುಧೀರ್ ಹೆಗ್ಡೆ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಯೋಗೇಶ್ ಕುಮಾರ್, ಶ್ರೀಕಾಂತ್, ರಾಧಾಕೃಷ್ಣ ದಾಳಿ ವೇಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ