ಅಗ್ನಿ ಆಕಸ್ಮಿಕ; ಮನೆಗೆ ಹಾನಿ
Team Udayavani, Feb 16, 2017, 3:35 AM IST
ಬೆಳ್ತಂಗಡಿ: ಅಳದಂಗಡಿ ಸನಿಹದ ಒಬ್ಬೆದೊಟ್ಟು ವಾರಿಜಾ ಆಚಾರಿ¤ (75) ಅವರ ಮನೆಗೆ ಮಂಗಳವಾರ ತಡ ರಾತ್ರಿ ಬೆಂಕಿ ತಗುಲಿ ಅರ್ಧ ಸುಟ್ಟು ಹೋಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಮನೆಯಲ್ಲಿ ವಾರಿಜಾ ಒಬ್ಬರೇ ವಾಸಿಸುತ್ತಿದ್ದು, ಮಂಗಳವಾರ ಬೆಳಗ್ಗೆ ಕಲ್ಲಡ್ಕದಲ್ಲಿರುವ ಮಗಳ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮಧ್ಯರಾತ್ರಿಯ ಬಳಿಕ ಬೆಂಕಿ ಮೊದಲಿಗೆ ಮನೆಯ ಹಿಂಬದಿಯಲ್ಲಿನ ಕಟ್ಟಿಗೆ ಸಂಗ್ರಹದ ಕೊಟ್ಟಿಗೆಗೆ ತಗುಲಿ ಕಟ್ಟಿಗಗಳುೆ ಸುಟ್ಟುಧಿಹೋಗಿವೆ. ಸನಿಹದಲ್ಲಿದ್ದ ಫೈಬರ್ ನೀರಿನ ತೊಟ್ಟಿ ಕರಗಿಹೋಗಿದೆ.
ಬಳಿಕ ಬೆಂಕಿ ಮನೆಗೂ ವ್ಯಾಪಿಸಿ ಹಂಚಿನ ಮನೆ ಅರ್ಧ ಸುಟ್ಟು ಬೂದಿಯಾಗಿದೆ. ಬೆಂಕಿ ಕಂಡು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು ಸಿಬಂದಿ ಮನೆಪೂರ್ತಿ ಸುಟ್ಟುಹೋಗುವುದನ್ನು ತಪ್ಪಿಸಿದರು. ಘಟನೆಗೆ ಕಾರಣ ತಿಳಿದು ಬಂದಿಲ್ಲ
ಬೆಳ್ತಂಗಡಿ ತಹಸೀಲ್ದಾರ್, ಅಳದಂಗಡಿ ಗ್ರಾ.ಪಂ.ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ