ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ಮಹಾರುದ್ರಯಾಗ
Team Udayavani, Feb 25, 2017, 3:22 PM IST
ಪುತ್ತೂರು : ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಮಹ ತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಹಿನ್ನೆಲೆ ಯಲ್ಲಿ ವಿಶೇಷವಾಗಿ ಈ ಬಾರಿ ಮಹಾರುದ್ರ ಯಾಗ ಹಾಗೂ ಪೂರ್ವಶಿಷ್ಟ ಸಂಪ್ರದಾಯದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ನಡೆದವು.
ವೇದ ಸಂವರ್ಧನ ಪ್ರತಿಷ್ಠಾನದ ವತಿ ಯಿಂದ ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮಹಾರುದ್ರಯಾಗ ಮಧ್ಯಾಹ್ನ ಪೂರ್ಣಾ ಹುತಿಯೊಂದಿಗೆ ಸಮಾಪನಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಹಾಗೂ ಜಯರಾಮ ಭಟ್ ನೇತೃತ್ವದಲ್ಲಿ ರುದ್ರಯಾಗ ನಡೆಯಿತು. 100ಕ್ಕೂ ಹೆಚ್ಚು ಮಂದಿಯಿಂದ ರುದ್ರ ಪಾರಾಯಣ ನಡೆಯಿತು.
ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ್ ಶೆಟ್ಟಿ, ನಾಗರಾಜ್ ನಡುವಡ್ಕ, ಎನ್. ಕರುಣಾಕರ ರೈ, ನಯನಾ ರೈ, ರೋಹಿಣಿ ಆಚಾರ್ಯ, ಜಾನು ನಾಯ್ಕ, ಸಂಜೀವ ನಾಯಕ್ ಕಲ್ಲೇಗ, ಪ್ರ. ಅರ್ಚಕ ವಸಂತ ಕೆದಿಲಾಯ, ಯು.ಪಿ. ರಾಮಕೃಷ್ಣ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಉಪಸ್ಥಿತರಿದ್ದರು.
ಭಕ್ತ ಸಾಗರ
ಸೀಮೆಯ ಒಡೆಯ ಹಾಗೂ ಪ್ರಧಾನ ಶಿವ ದೇವಸ್ಥಾನವಾಗಿರುವ ಹಿನ್ನೆಲೆಯಲ್ಲಿ ಮಹಾಶಿವರಾತ್ರಿಯಂದು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಭಕ್ತ ಜನಸಾಗರ ಹರಿದುಬಂತು. ಸರತಿಯ ಸಾಲಿನಲ್ಲಿ ಬಂದು ಭಕ್ತರು ದೇವರ ದರ್ಶನ ಪಡೆದರು. ರುದ್ರಾಭಿಷೇಕ ಸೇವೆ ನಡೆಸಿದರು. ಬೆಳಗ್ಗೆ ಮಹಾಶಿವರಾತ್ರಿಯ ಅಂಗವಾಗಿ ದೇವರಿಗೆ ಶತರುದ್ರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಂಜೆ ಶಿವಪುರಾಣ ಕಥಾ ಪ್ರವಚನ ಜರಗಿತು. ರಾತ್ರಿ ದೇವರ ಉತ್ಸವ ಬಲಿ, ಪಲ್ಲಕಿ ಉತ್ಸವ, ದೇವರ ಕೆರೆ ಆಯನ, ನಿತ್ಯ ಪೂಜೆಗಳು ಜರಗಿದವು.
ರುದ್ರಾಭಿಷೇಕ ಸೇವೆ
ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಸಾವಿರಕ್ಕೂ ಮಿಕ್ಕಿ ಮಂದಿ ರುದ್ರಾಭಿಷೇಕ ಸೇವೆ ನೆರವೇರಿಸಿದರು. 10 ಸಾವಿರಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡಿದ್ದು, ಸಾವಿರಾರು ಮಂದಿ ಭಕ್ತರು ಮಧ್ಯಾಹ್ನ ಅನ್ನ ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್