ಎಪಿಎಂಸಿ ಚುನಾವಣೆ: ಪುತ್ತೂರು ಶೇ. 43.96; ಸುಳ್ಯ ಶೇ. 50. 52 ಮತದಾನ


Team Udayavani, Apr 26, 2017, 5:58 PM IST

26-PUT-1.jpg

ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) 12 ಕ್ಷೇತ್ರಗಳಿಗೆ ಮಂಗಳವಾರ ನಡೆದ ಮತದಾನಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು ಮತದಾರರ ಪೈಕಿ ಅರ್ಧಕ್ಕಿಂತ ಅಧಿಕ ಮಂದಿ ಮತದಾನದಲ್ಲಿ ಪಾಲ್ಗೊಂಡಿಲ್ಲ. 12 ಕ್ಷೇತ್ರಗಳ 68 ಮತಗಟ್ಟೆಗಳಲ್ಲಿ ಒಟ್ಟು ಶೇ. 43.96  ಮತ ಚಲಾವಣೆಗೊಂಡಿದೆ. ಕೆಲವು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಧಿಯಿಂದ ಹೆಸರು ಬಿಟ್ಟು ಹೋಗಿ, ಮತದಾನಕ್ಕೆ ಅವಕಾಶ ವಂಚಿತರಾದ ಬಗ್ಗೆ ಆಕ್ರೋಶ ಕೇಳಿ ಬಂದಿತ್ತು. ಉಳಿದಂತೆ ಮತದಾನ ಶಾಂತಿಯುತವಾಗಿ ಸಾಗಿದೆ. ಎಲ್ಲ ಮತಧಿಗಟ್ಟೆಗಳಲ್ಲೂ ಮತದಾನ ಪ್ರಮಾಣ ತೀವ್ರ ಕುಸಿತ ಕಂಡಿದೆ.

ನೀರಸ ಪ್ರತಿಕ್ರಿಯೆ
ಇಪ್ಪತ್ತಾರು ಅಭ್ಯರ್ಥಿಗಳು ಕಣದಲ್ಲಿರುವ ತಾಲೂಕಿನ 12 ಕ್ಷೇತ್ರಗಳಲ್ಲಿ 68 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಬೆಳಗ್ಗಿಧಿನಿಂದಲೇ ನೀರಸವಾಗಿ ಸಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಗೆ ಶೇ. 26.4ರಷ್ಟು ಮತ ಚಲಾವಣೆಯಾಗಿತ್ತು. ಅನಂತರ 2 ಗಂಟೆಯ ಹೊತ್ತಿಗೆ ಶೇ. 35.4 ರಷ್ಟು ಮತ ಚಲಾವಣೆ ಆಗಿತ್ತು. ಮತದಾನ ಮುಕ್ತಾಯದ ಸಂದರ್ಭ ಶೇ. 43.96 ಮತ ದಾನ ದಾಖಲಾಗಿತ್ತು.

ಗರಿಷ್ಠ -ಕನಿಷ್ಠ ಮತದಾನ
ಆಲಂಕಾರು ಕ್ಷೇತ್ರದಲ್ಲಿ ಕೊಲ ಗ್ರಾಮ ಕ್ಕೊಳಪಟ್ಟ 31ನೇ ಮತಗಟ್ಟೆ ಕೊಲ ಹಿ.ಪ್ರಾ.ಶಾಲೆ (ಉತ್ತರ ಭಾಗ) ಮತದಾನ ಕೇಂದ್ರದಲ್ಲಿ ಶೇ. 15.67ರಷ್ಟು ಕನಿಷ್ಠ ಮತದಾನ ದಾಖ ಲಾಗಿದೆ. ಇಲ್ಲಿ 600 ಮತದಾರರ ಪೈಕಿ 70 ಪುರುಷ ಮತ್ತು 24 ಮಹಿಳೆಯರು ಸೇರಿ 94 ಮಂದಿ ಮತ ಚಲಾಯಿಸಿದ್ದಾರೆ. ಬಿಳಿನೆಲೆ ಗ್ರಾಮಕ್ಕೊಳಪಟ್ಟ 18ನೇ ಮತಗಟ್ಟೆ ಬಿಳಿನೆಲೆಬೈಲು ಹಿ.ಪ್ರಾ.ಶಾಲೆ ಮತದಾನ ಕೇಂದ್ರದಲ್ಲಿ ಗರಿಷ್ಠ  ಮತದಾನವಾಗಿದೆ. ಇಲ್ಲಿ ಶೇ. 77.92 ಮತ ಚಲಾವಣೆಯಾಗಿದೆ. 557 ಮತದಾರರ ಪೈಕಿ 434 ಮತದಾರರು ಹಕ್ಕು ಚಲಾಯಿಸಿದ್ದಾರೆ. ಒಟ್ಟು 13 ಕ್ಷೇತ್ರಗಳ ಪೈಕಿ 53,739 ಮತದಾರರು ಹಕ್ಕು ಚಲಾವಣೆಗೆ ಅರ್ಹತೆ ಪಡೆದಿದ್ದರು. ಇಲ್ಲಿ 35,973 ಪುರುಷ ಮತದಾರರು, 17,766 ಮಹಿಳಾ ಮತದಾರ ರಿದ್ದರು. ಇದರಲ್ಲಿ 17,743 ಪುರುಷ ಮತ್ತು 5,879 ಮಹಿಳೆಯರು ಸೇರಿ ಒಟ್ಟು 23,622 ಮತದಾರರು ಮತ ಚಲಾಯಿಸಿದ್ದಾರೆ.

ಮತದಾನ ಪ್ರಕ್ರಿಯೆ
ಎ. 25ರಂದು ಬೆಳಗ್ಗೆ 8ರಿಂದ 4ರ ತನಕ ಮತದಾನ ನಡೆದಿದೆ. ಮತದಾರರು ಮತ ಪತ್ರದಲ್ಲಿ (ಮ್ಯಾನುವೆಲ್‌ ಸಿಸ್ಟಮ್‌) ಮತ ಚಲಾಯಿಸಿದ್ದಾರೆ. 68 ಮತಗಟ್ಟೆಗಳಲ್ಲಿ ಅಧ್ಯಕ್ಷ ಅಧಿಕಾರಿ-68, ಒಂದನೇ ಮತಗಟ್ಟೆ ಅಧಿಕಾರಿ-68, ಎರಡು ಮತ್ತು ಮೂರನೇ ಮತಗಟ್ಟೆ ಅಧಿಕಾರಿ-136, ಡಿ ಗ್ರೂಪ್‌ಸಿಬಂದಿ-68, ಆಯಾ ಮತಗಟ್ಟೆಗಳಲ್ಲಿ ಪೊಲೀಸ್‌, ಇತರೆ ರಕ್ಷಣಾ ಸಿಬಂದಿ ಸೇರಿ ಒಟ್ಟು 408 ಮಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಅನಂತರ ಮತಪೆಟ್ಟಿಗೆಯನ್ನು ತೆಂಕಿಲ ವಿವೇಕಾನಂದ ಆಂ.ಮಾ.ಶಾಲಾ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಅಲ್ಲಿ ಎ. 27ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.

ಸುಳ್ಯ: ಇಲ್ಲಿಯ ಕೃಷಿ ಉತ್ಪನ್ನ ಸಮಿತಿ (ಎಪಿಎಂಸಿ)ಯ 11 ಕ್ಷೇತ್ರಗಳಿಗೆ ಮಂಗಳವಾರ ಅತ್ಯಂತ ಶಾಂತಿಯುತ ಮತದಾನ ಜರಗಿದ್ದು, ಒಟ್ಟು ಶೇಕಡಾ 50.52 ಹಕ್ಕು ಚಲಾವಣೆ ನಡೆದಿದೆ. 

ಅತೀ ಕಡಿಮೆ ಮತದಾನ
ಒಟ್ಟು 11,607 ಪುರುಷರು, 3940 ಮಹಿಳೆಯರ ಸಹಿತ ಒಟ್ಟು 15,557 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹಿರಿಯ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದುದು ಕಂಡು ಬಂದಿತು. ಕಳೆದ ಬಾರಿ ಶೇ.60 ಮತದಾನವಾಗಿದ್ದು ಈ ಬಾರಿ ಅತೀ ಕಡಿಮೆ ಮತದಾನವಾಗಿದೆ. 

ಗರಿಷ್ಠ -ಕನಿಷ್ಠ ಮತದಾನ
ಸಹಕಾರ ಕ್ಷೇತ್ರದಲ್ಲಿ ಶೇ. 90.34 ಗರಿಷ್ಠ ಮತದಾನವಾಗಿದ್ದರೆ, ಕೃಷಿಕರ ಕ್ಷೇತ್ರ ಪೈಕಿ ಐವರ್ನಾಡು ಗರಿಷ್ಠ ಶೇ. 72.76 ಹಾಗೂ ಮಂಡೆಕೋಲು ಕ್ಷೇತ್ರದಲ್ಲಿ ಕನಿಷ್ಠ ಶೇ. 32.75 ಮತ ದಾನವಾಗಿದೆ.
ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸಹಿತ ಒಟ್ಟು 5 ಮಂದಿ ಸಿಬಂದಿ ಹಾಗೂ ಭದ್ರತೆಗಾಗಿ ತಲಾ 2 ಮಂದಿ 

ಪೊಲೀಸರು ಕಾರ್ಯ
ನಿರ್ವಹಿಸಿದ್ದರು. ಸುಳ್ಯ ಪೊಲೀಸ್‌ ವೃತ್ತನಿರೀಕ್ಷಕರ ನೇತೃತ್ವ ದಲ್ಲಿ ನಾಲ್ವರು ಎಸ್‌ಐ, 10 ಮಂದಿ ಎಎಸ್‌ಐ, 60 ಕಾನ್‌ಸ್ಟೆಬಲ್‌ಗ‌ಳು, 40 ಮಂದಿ ಗೃಹರಕ್ಷಕ ಸಿಬಂದಿ ಹಾಗೂ 12 ಪೊಲೀಸ್‌ ವಾಹನಗಳ ಗಸ್ತಿನೊಂದಿಗೆ ಮತದಾನ ಪ್ರಕ್ರಿಯೆಗೆ ಭದ್ರತೆ ನೀಡಲಾಯಿತು.
ಮತದಾರರು ಬ್ಯಾಲೆಟ್‌ ಪೇಪರ್‌ನಲ್ಲಿನ ಅಭ್ಯರ್ಥಿಗಳ ಗುರುತಿನ ಎದುರು ಗುರುತು ಮಾಡುವ ಮೂಲಕ ಹಕ್ಕು ಚಲಾಯಿಸಿದರೆ, ಮತಗಟ್ಟೆ ಸಿಬಂದಿ ಮತದಾರರ ಎಡಗೈ ಬೆರಳಿಗೆ ಶಾಯಿ ಗುರುತು ಹಚ್ಚಿ ಮತದಾನ ವನ್ನು ಖಚಿತಪಡಿಸುತ್ತಿದ್ದರು.

ಗಣ್ಯರಿಂದ ಹಕ್ಕು ಚಲಾವಣೆ
ಸುಳ್ಯ ತಾಲೂಕು ಶಾಸಕ ಎಸ್‌. ಅಂಗಾರ ಅವರು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ ಅವರು ಅಜ್ಜಾವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸುಳ್ಯ ಕ್ಷೇತ್ರ ಬಿಜೆಪಿ ಅಧ್ಯಕ್ಷ ವೆಂಕಟ್‌ ವಳಲಂಬೆ ಅವರು ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸುಳ್ಯ ಬ್ಲಾಕ್‌  ಕಾಂಗ್ರೆಸ್‌ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಅವರು ಸುಳ್ಯ ತಾಲೂಕು ಪಂಚಾಯತ್‌ ಕಚೇರಿ ಆವರಣದಲ್ಲಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಈ ಪೈಕಿ ಈಗಾಗಲೇ ವರ್ತಕರ ಮತ್ತು ಅಮರಪಟ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ಕಾಂಗ್ರೆಸ್‌ ತಲಾ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆ ಯಾಗಿದ್ದಾರೆ.

ನಾಳೆ ಮತ ಎಣಿಕೆ
ಮತಪೆಟ್ಟಿಗೆಗಳನ್ನು ಎಪಿಎಂಸಿ ಯಾರ್ಡ್‌ನಲ್ಲಿ ಇರಿಸಿದ್ದು, ಎ. 27 ರಂದು ಬೆಳಗ್ಗೆ ಮತ ಎಣಿಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೆಲುವಿನ ಲೆಕ್ಕಾಚಾರ
ಮತದಾನ ನಡೆಯುತ್ತಿದ್ದಂತೆ ಎರಡು ಪಕ್ಷಗಳ ಪ್ರಮುಖರು ತಮ್ಮ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದ ಬಗ್ಗೆ ಆಂತರಿಕ ಸಮೀಕ್ಷೆಯನ್ನು ಕಂಡುಕೊಂಡಿದ್ದಾರೆ. ಮತದಾನ ನಡೆದ ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ 9-10 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿರಿಸಿಕೊಂಡಿದ್ದರೆ, ಕಾಂಗ್ರೆಸ್‌ 2ರಿಂದ ಗರಿಷ್ಠ  3 ಸ್ಥಾನಗಳನ್ನು ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.