ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸಿಡಿಲಬ್ಬರ ದೇಗುಲ ಗೋಪುರ ಹಾನಿ
Team Udayavani, May 22, 2017, 3:52 PM IST
ಸುಬ್ರಹ್ಮಣ್ಯ: ರವಿವಾರ ಬೆಳಗ್ಗಿನ ಜಾವ ಅಪ್ಪಳಿಸಿದ ಸಿಡಿಲಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಅಲ್ಪಪ್ರಮಾಣದ ಹಾನಿಯಾಗಿದೆ ಮತ್ತು ಎರಡು ಮನೆಗಳು ಸಂಪೂರ್ಣ ಹಾನಿಗೀಡಾಗಿವೆ.
ಸಿಡಿಲಿನ ತೀವ್ರತೆಗೆ ದೇವಸ್ಥಾನದ ಗೋಪುರದ ತುದಿಯ ಸಿಮೆಂಟ್ ತುಂಡು ಕಿತ್ತು ಹೋಗಿದೆ. ಬೆಳಗ್ಗೆ 5.30ರ ಸುಮಾರಿಗೆ ಸಿಡಿಲು ಬಡಿದಿತ್ತು. ದೇವಸ್ಥಾನದಲ್ಲಿ ಮಿಂಚು ನಿರೋಧಕವನ್ನು ಇದೇ ಗೋಪುರಕ್ಕೆ ಅಳವಡಿಸಲಾಗಿದ್ದು, ಅದರ ಮೂಲಕ ಅರ್ತಿಂಗ್ ಆಗುವಾಗ ಸಿಮೆಂಟ್ ತುಂಡು ಕಿತ್ತು ಹೋಗಿರಬೇಕೆಂದು ಅಭಿಪ್ರಾಯಿಸಲಾಗಿದೆ.
ನಾಲ್ಕೂರು ಗ್ರಾಮದ ಮರಕತ ನಿವಾಸಿ ವಾರಿಜಾ ಅವರ ಮನೆಯ ಹೆಂಚುಗಳು ಚೂರಾಗಿವೆ. ಕಿಟಕಿ ಬಾಗಿಲುಗಳು ಕಿತ್ತುಹೋಗಿದ್ದಲ್ಲದೆ ವಿದ್ಯುತ್ ವಯರಿಂಗ್ಗಳಿಗೂ ಹಾನಿಯಾಗಿದೆ. ಮನೆಯೊಳಗೆ ನಿದ್ರಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುತ್ತಿಗಾರಿನ ಮುತ್ತಪ್ಪನಗರದ ನೀಲಪ್ಪಅವರ ಮನೆಗೂ ಸಿಡಿಲು ಅಪ್ಪಳಿಸಿ ಹಾನಿ ಸಂಭವಿಸಿದೆ. ಸುಬ್ರಹ್ಮಣ್ಯ ದೂರವಾಣಿ ಕೇಂದ್ರದ ಮೊಬೈಲ್ ಗೋಪುರಕ್ಕೂ ಸಿಡಿಲು ಬಡಿದ ಪರಿಣಾಮ ರವಿವಾರ ಮಧ್ಯಾಹ್ನ ತನಕ ಮೊಬೈಲ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.
ಮಳೆಯಿಂದಾಗಿ ದೇವಸ್ಥಾನದತ್ತ ತೆರಳುವ ರಸ್ತೆಗಳು ಕೆಸರಿನಿಂದ ಆವೃತಗೊಂಡು ಜನ – ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ