ಪತ್ತನಾಜೆಯ ಎಫೆಕ್ಟ್: ನಾಟಿ ಕೋಳಿ ಕೆ.ಜಿ.ಗೆ 360 ರೂ.


Team Udayavani, May 24, 2017, 11:45 PM IST

Naati-Koli-Original-600.jpg

ನಗರ: ತುಳುನಾಡಿನಲ್ಲಿ ಪತ್ತನಾಜೆ (ಹತ್ತನಾವಧಿ) ಆಚರಣೆಯಲ್ಲಿ ದೈವಗಳಿಗೆ ಕೋಳಿ ಬಲಿ ನೀಡುವ ಸಂಪ್ರದಾಯ ಪ್ರಮುಖವಾಗಿರುವುದರಿಂದ ನಾಟಿ ಕೋಳಿಗೆ ವ್ಯಾಪಕ ಬೇಡಿಕೆ ಉಂಟಾಗಿದೆ ಮತ್ತು ಬೆಲೆಯೂ ವಿಪರೀತ ಏರಿಕೆ ಕಂಡಿದೆ. ತುಳುನಾಡಿನ ನಂಬಿಕೆ, ಆಚರಣೆಗೆ ಪೂರಕವಾಗಿ ಪತ್ತನಾಜೆ ಆಚರಣೆಯ ಅಗೇಲು, ತಂಬಿಲಾದಿಗಳು ಮೇ 24ರಂದು ನಡೆಯಲಿವೆ. ಹತ್ತನಾವಧಿಯಂದು ತುಳುನಾಡಿನಲ್ಲಿ ದೈವಾರಾಧನೆಗೆ ಪೂರಕವಾಗಿ ಬನಗಳಲ್ಲಿ ದೈವಗಳಿಗೆ ಕೋಳಿ ಬಲಿಕೊಡುವುದು, ಎಳನೀರು ಹಾಗೂ ಇತರ ಪರಿಕರಗಳನ್ನು ಇಟ್ಟು ದೈವಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಆಚರಣೆ ರೂಢಿಯಲ್ಲಿದೆ.

ಹತ್ತನಾವಧಿಯವರೆಗೆ ಬೇಡಿಕೆ
ಈ ದಿನ ಗುಳಿಗ, ಭೈರವ ದೈವ ಮೊದಲಾದ ದೈವಗಳಿಗೆ ಭಕ್ತರು ವಿವಿಧ ನಿವೇದನೆಗಳನ್ನು ಮಾಡಿ ಪ್ರಾರ್ಥಿಸುತ್ತಾರೆ, ಹರಕೆಗಳನ್ನು ಒಪ್ಪಿಸುತ್ತಾರೆ. ಹತ್ತನಾವಧಿಯವರೆಗೆ ಭೂತ ಕೋಲಗಳು ನಡೆದು ಅನಂತರದಲ್ಲಿ ಗೆಜ್ಜೆ ಬಿಚ್ಚುವ ನಂಬಿಕೆ ಇರುವುದರಿಂದ ಹತ್ತನಾವಧಿಯವರೆಗೆ ಊರಿನ ಕೋಳಿಗಳಿಗೆ ವಿಪರೀತ ಬೇಡಿಕೆ ಇದೆ.

ಬೇಡಿಕೆ ಇದ್ದರೂ ಸಾಕುವವರಿಲ್ಲ
ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರವೆಂದು ಪರಿಗಣಿಸಲ್ಪಟ್ಟಿರುವುದರಿಂದ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ವಿರಳವಾಗಿರುವ ನಾಟಿ ಕೋಳಿ ಸಾಕುವವರಲ್ಲಿ ನಾಟಿ ಕೋಳಿ ಖರೀದಿಸಲು ಎಲ್ಲ ಸಮಯದಲ್ಲೂ ಬೇಡಿಕೆ ಇದ್ದರೂ ಹತ್ತನಾವಧಿ ಸಮಯದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಹತ್ತನಾವಧಿಯ ಸಂದರ್ಭದಲ್ಲಿ ನಾಟಿ ಕೋಳಿ ಸಾಕಣೆದಾರರು ಹೇಳಿದ ಬೆಲೆ ಲಭಿಸುತ್ತದೆ. ಆದರೆ ಅಂಕದ ಕೋಳಿಗಳಿಗೆ ಕೆ.ಜಿ. ಲೆಕ್ಕದ ದರ ಲಗಾವಾಗುವುದಿಲ್ಲ, ಬದಲಾಗಿ ಕೋಳಿಯೊಂದರ ಅದರ ಜಾತಿಯನ್ನು ಅವಲಂಬಿಸಿ 1,000ರಿಂದ 10 ಸಾವಿರ ರೂ. ತನಕವೂ ಬೆಲೆ ಬಾಳುತ್ತದೆ.

ನಾಟಿ ಕೋಳಿಯ ಬೇಡಿಕೆಯನ್ನು ಆಧರಿಸಿ ಬ್ರಾಯ್ಲರ್‌, ಟೈಸನ್‌ ಕೋಳಿ ಫಾರ್ಮ್ಗಳು ಇರುವಂತೆ ನಾಟಿ ಕೋಳಿ ಮಾರಾಟದ ಫಾರ್ಮ್ಗಳೂ ಹುಟ್ಟಿಕೊಂಡಿವೆ. ಪುತ್ತೂರು ತಾಲೂಕಿನ ಪಡೀಲ್‌ ಸೇರಿದಂತೆ 5-6 ಕಡೆಗಳಲ್ಲಿ ಸೀಸನ್‌ ಅವಧಿಗೆ ನಾಟಿ ಕೋಳಿ ಫಾರ್ಮ್ನಲ್ಲಿ ಕ್ಯೂ ಆರಂಭಗೊಳ್ಳುತ್ತದೆ. ಇನ್ನು ನಾಟಿ ಕೋಳಿಗೆ ಪರ್ಯಾಯವಾಗಿ ಗಿರಿರಾಜ ಕೋಳಿಗಳೂ ಲಭ್ಯವಾಗುತ್ತಿದ್ದರೂ ಈಗ ಹೈಬ್ರೀಡ್‌ ಊರಿನ ಕೋಳಿಗಳಾದ ಮೈಸೂರು, ಮಂಡ್ಯಗಳಿಂದ ಆಮ ದಾಗುವ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆ ಇದೆ. ತಮಿಳುನಾಡಿನಿಂದ ಆಮದಾಗುವ ಹೈಬ್ರೀಡ್‌ ಕೋಳಿಗಳು ತೂಕದಲ್ಲಿ ಹೆಚ್ಚು ತೂಗುತ್ತವೆ.

ಒಂಜಿ ಕೋರಿ ಆವೊಡು
ಹತ್ತನಾವಧಿಗೆ 4-5 ತಿಂಗಳಿಗೆ ಮೊದಲೇ ಕೋಳಿ ಮರಿ ಸಂಪಾದಿಸಿ ಹತ್ತನಾವಧಿಗೆ ಸಿದ್ಧಗೊಳ್ಳುವಂತೆ ಸಾಕುವವರೂ ಇದ್ದಾರೆ. ಹತ್ತನಾವಧಿ ಸಮೀಪಿಸಿದಾಗ ಎಚ್ಚೆತ್ತುಕೊಳ್ಳುವವರು ಎಂಕ್‌ ಒಂಜಿ ಕೋರಿ ಆವೊಡು (ನನಗೆ ಒಂದು ಕೋಳಿ ಆಗಬೇಕು)ಎಂದು ಮನೆ ಮನೆಗೆ ಸಂದರ್ಶಿಸುತ್ತಾರೆ. ಕೊನೆಗೆ ನಾಟಿ ಕೋಳಿ ಸಾಕಾಣೆದಾರರು ಕೇಳಿದಷ್ಟು ಹಣವನ್ನು ಕೊಟ್ಟು ಖರೀದಿಸುತ್ತಾರೆ.

ಸೀಸನ್‌ ಬೇಡಿಕೆ
ಪತ್ತನಾಜೆಯ ಸೀಸನ್‌ ಅವಧಿಯಲ್ಲಿ ದಿನವೊಂದರ 1 ಕ್ವಿಂಟಾಲ್‌ಗ‌ೂ ಮಿಕ್ಕಿ ನಾಟಿ ಕೋಳಿಗಳಿಗೆ ಬೇಡಿಕೆ ಇದೆ. ಮಂಗಳೂರು ಸಹಿತ ಜಿಲ್ಲೆಯ ವಿವಿಧ ಕಡೆಗಳಿಂದ ನಾಟಿ ಕೋಳಿಗಾಗಿ ಬರುತ್ತಾರೆ. ಪತ್ತನಾಜೆಯ ಬಳಿಕ ಆರಾಧನೆಗಳು ಇರದಿರು ವುದರಿಂದ ಬೇಡಿಕೆ ಕಡಿಮೆಯಾಗುತ್ತದೆ. ಸೀಸನ್‌ ಅವಧಿಯಲ್ಲಿ ಯಾವ ಗಾತ್ರದ ಕೋಳಿ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂಬುದು ಪಡೀಲು ನಾಟಿ ಕೋಳಿ ವ್ಯಾಪಾರಿ ಮೋಹನ್‌ ಶೆಟ್ಟಿ ಅವರ ಅಭಿಪ್ರಾಯ.

ಕೆ.ಜಿ.ಗೆ 360 ರೂ.
ಪ್ರಸ್ತುತ ಸಾದಾ ಊರಿನ ಕೋಳಿಗೆ ಕೆ.ಜಿ.ಯೊಂದರ 360 ರೂ.ಗೆ ಮಾರಾಟವಾಗುತ್ತಿದೆ. ಉಳಿದಂತೆ ಮಂಡ್ಯ, ಮೈಸೂರು ಭಾಗದ ಹಾಗೂ ತಮಿಳುನಾಡಿನಿಂದ ಆಮದಾಗುವ ಹೈಬ್ರೀಡ್‌ ನಾಟಿ ಕೋಳಿಗಳಿಗೆ ಕೆ.ಜಿ.ಯೊಂದರ 200ರಿಂದ 250 ರೂ. ತನಕ ಮಾರಾಟವಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಮೇ 23, 24ರಂದು ಈ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಬಿಳಿ ಗರಿ ಕೋಳಿ ಬೇಡ
ದೈವಗಳಿಗೆ ಬಲಿ ಕೊಡುವ ಸಂದರ್ಭದಲ್ಲಿ ಹುಂಜವನ್ನೇ ಬಲಿ ಕೊಡಬೇಕು, ಸಂಪೂರ್ಣ ಬಿಳಿ ಗರಿಗಳನ್ನು ಹೊಂದಿರುವ ಕೋಳಿಯನ್ನು ಬಲಿ ಕೊಡಬಾರದು ಎಂಬ ನಂಬಿಕೆ ತುಳು ನಾಡಿನಲ್ಲಿದೆ. ಈ ಕಾರಣದಿಂದ ಒಂದು ಗರಿಯಾದರೂ ಬೇರೆ ಬಣ್ಣವನ್ನು ಹೊಂದಿರುವ ಕೋಳಿಯನ್ನೇ ಆಯ್ದುಕೊಳ್ಳುತ್ತಾರೆ.

– ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.