ಪೇಟೆ ಬೀದಿಗಳಲ್ಲಿ ಕುಣಿಯುವ ಹುಲಿಗಳ ಅಬ್ಬರ!


Team Udayavani, Sep 23, 2017, 5:53 PM IST

23Udi-4.jpg

ಆಲಂಕಾರು : ತಾಸೆದ ಪೆಟ್ಟಿಗೆ ಢೋಲಿನ ಸಾಥ್‌ನೊಂದಿಗೆ ನಾಡಿನ ಹುಲಿಗಳು ಪೇಟೆಗೆ ಧಾವಿಸುತ್ತಿವೆ.ಹುಲಿ, ಕರಡಿ, ಸಿಂಹ ಸಹಿತ ಹಲವು ವೇಷಗಳು ನವರಾತ್ರಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿವೆ. ಈ ಮೂಲಕ ಪರಂಪರೆಯನ್ನು ಜೀವಂತವಾಗಿ ಇರಿಸಿಕೊಳ್ಳುವ ಪ್ರಯತ್ನವೂ ನಡೆದಿದೆ.

ವಿನಾಶದ ಅಂಚಿನಲ್ಲಿರುವ ಕಾಡು ಪ್ರಾಣಿಗಳ ವೇಷವನ್ನು ಧರಿಸಿ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ, ಯಕ್ಷಗಾನ, ಯಮ, ನಾರದ, ಋಷಿ, ನಪ್ಪು ಬಾಲೆ ಮುಂತಾದ ವೇಷಗಳನ್ನೂ ಧರಿಸಿ ಒತ್ತಡದಲ್ಲಿರುವವರಿಗೆ ಒಂದಿಷ್ಟು ಖುಷಿ ನೀಡುವುದು ಈ ಕಲಾವಿದರ ಉದ್ದೇಶ.

ಗ್ರಾಮೀಣ ಕಲಾವಿದರು
ಗ್ರಾಮೀಣ ಪ್ರತಿಭೆಗಳಿಗೆ ಇದೊಂದು ಸೂಕ್ತ ವೇದಿಕೆಯಾಗಿ ಮಾರ್ಪಟ್ಟಿದೆ. ಕೆಲವರು ಇದನ್ನು ಧಾರ್ಮಿಕ ಕಟ್ಟು ಪಾಡಿನ ಆಚರಣೆಯಾಗಿ ಬಳಸಿದರೆ, ಮತ್ತೆ ಕೆಲವರು ಹರಕೆಯ ರೂಪದಲ್ಲಿ ತಮ್ಮ ಸೇವೆ ಮಾಡುತ್ತಾರೆ. 

ವಿವಿಧ ವೇಷಗಳು
ಹುಲಿ, ಕರಡಿ, ಸಿಂಹ ಪ್ರಮುಖ ಗುಂಪು ವೇಷಗಳಾದರೆ, ಬೇಟೆಗಾರ, ಪೈಂಟರ್‌, ಬೇಲಿ ಹಾಕುವವರು, ಗಾರೆ ಕೆಲಸಗಾರರಾಗಿ, ನಪ್ಪುಬಾಲೆ, ಯಕ್ಷಗಾನ, ಯಮ, ನಾರದ, ಋಷಿ- ಹೀಗೆ ಹತ್ತು ಹಲವು ಒಂಟಿ ವೇಷ ಧರಿಸಿ ದುರ್ಗೆಯ ಆರಾಧನೆ ಮಾಡುವ ವಾಡಿಕೆಯಿದೆ. 

ಹೆಚ್ಚಿನ ತಂಡಗಳು ಈಗಿಲ್ಲ
ಹಲವು ವರ್ಷದ ಹಿಂದೆ ನವರಾತ್ರಿ ವೇಷಗಳಿಗೆ ವಿಶೇಷವಾದ ಗೌರವವಿತ್ತು. ಆದರೆ ಇಂದು ಮಹತ್ವ ಕಡಿಮೆಯಾಗಿದೆ. ಟಿ.ವಿ, ಮೊಬೈಲ್‌ಗ‌ಳ ಪ್ರಭಾವದಿಂದಾಗಿ ಜನರೂ ಒಲವು ಕಳೆದುಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ವೇಷಧಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಇಂದು ವೇಷಧಾರಿಗಳು ದಿನಕ್ಕೆ 2000 ರೂ.ಗಳಿಗೂ ಹೆಚ್ಚು ಸಂಬಳದ ಬೇಡಿಕೆ ಯಿಡುತ್ತಿದ್ದಾರೆ. 

ಒಂದು ಹುಲಿ ಅಥವಾ ಕರಡಿ ವೇಷದ ತಂಡದಲ್ಲಿ 7ಮಂದಿ ಅಗತ್ಯವಿದ್ದು, ದಿನಕ್ಕೆ 14 ಸಾವಿರ ರೂ. ಸಂಬಳ ಭರಿಸಬೇಕು. ಊಟ-ತಿಂಡಿ ಖರ್ಚು, ಪ್ರಯಾಣ ವೆಚ್ಚ ಸೇರಿಸಿದರೆ 20 ಸಾವಿರ ರೂ.ಗಳಿಗೂ ಅಧಿಕ ಖರ್ಚು ಇದೆ. ಇಷ್ಟು ಖರ್ಚು ಭರಿಸುವ ಸಾಮರ್ಥ್ಯವಿಲ್ಲದೆ ಹಾಗೂ ದೇಣಿಗೆಯೂ ಸಂಗ್ರಹವಾಗದೆ ತಂಡಗಳು ಕಡಿಮೆಯಾಗುತ್ತಿವೆ ಎಂಬ ಅಭಿಪ್ರಾಯವಿದೆ.

ಹರಕೆ ಸಂದಾಯ
ತಮ್ಮ ಕೃಷಿಗೆ ಕಾಡು ಪ್ರಾಣಿಗಳ ವಿಪರೀತ ಉಪಟಳ, ಆರೋಗ್ಯ ಸಹಿತ ಹಲವು ದೈನಂದಿನ ಹಾಗೂ ವ್ಯಾವಹಾರಿಕ ಸಮಸ್ಯೆಗಳ ಪರಿಹಾರಕ್ಕೆ ಜನರು ದೇವರ ಮೊರೆ ಹೋಗುತ್ತಾರೆ. ನವರಾತ್ರಿಯ ಸಮಯದಲ್ಲಿ ವಿಶೇಷ ವೇಷ ಧರಿಸಿ ತಮ್ಮ ಸಮಸ್ಯೆ ಬಗೆಹರಿಸಿದ ದುರ್ಗೆಗೆ ಹರಕೆ ಸಂದಾಯ ಮಾಡುತ್ತಾರೆ. ವೇಷಧಾರಿಗಳು ಮೊದಲ ದಿವಸ ಬಣ್ಣ ಬಳಿದ ಬಳಿಕ ಕೊನೆಯ ದಿನ ದೇವಸ್ಥಾನದಲ್ಲಿ ಸೇವೆ ನಡೆಸಿಯೇ ಬಣ್ಣ ತೆಗೆಯುತ್ತಾರೆ. ರಾತ್ರಿ ತೆಂಗಿನ ಗರಿಯ ಚಾಪೆ ಮೇಲೆ ಮಲಗಿ, ಮಾಂಸಾಹಾರ-ಮದ್ಯಪಾನವನ್ನೂ ತ್ಯಜಿಸಿ ವ್ರತಾಚರಣೆ ಮಾಡುತ್ತಾರೆ.

ಸದಾನಂದ ಆಲಂಕಾರು

ಟಾಪ್ ನ್ಯೂಸ್

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.