ನಾಗರಹಾವನ್ನು ಬೆನ್ನಟ್ಟಿ ನುಂಗಿದ ಕಾಳಿಂಗ!
Team Udayavani, Feb 14, 2017, 5:19 PM IST
ಹೊಸನಗರ: ನಾಗರಹಾವನ್ನು ಬೆನ್ನಟ್ಟಿ ಬಂದ ಕಾಳಿಂಗ ಬೆದರಿ ಹುತ್ತ ಸೇರುತ್ತಿದ್ದರೂ ಬಿಡದೇ ನಾಗರಹಾವನ್ನು ಹೊರಗೆಳೆದು ಸಂಪೂರ್ಣ ನುಂಗಿದ ಅಪರೂಪದ ದೃಶ್ಯಕ್ಕೆ ಮುಂಡಳ್ಳಿ ಗ್ರಾಮ ಸಾಕ್ಷಿಯಾಯಿತು. ಹೌದು, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮುಂಡಳ್ಳಿ ಗ್ರಾಮದಲ್ಲಿ ರವಿವಾರ ಸಂಜೆ ಈ ಅಪರೂಪದ ಘಟನೆ ನಡೆದಿದೆ. ಬೆನ್ನಟ್ಟಿ ಬಂದ ಕಾಳಿಂಗ ಸರ್ಪಕ್ಕೆ ಬೆದರಿ ಹುತ್ತ ಸೇರಿಕೊಂಡಿತ್ತು ನಾಗರಹಾವು.
ಆದರೂ ಬಿಡದ ಕಾಳಿಂಗ ಹುತ್ತದೊಳಕ್ಕೆ ಹೊಕ್ಕು ನಾಗರಹಾವನ್ನು ಹೊರಗೆಳೆದು ನುಂಗಲು ಆರಂಭಿಸಿತು. ಸುತ್ತಮುತ್ತಲು ಜನ ಸೇರಿದ್ದರೂ ಕೂಡ ಅದ್ಯಾವುದನ್ನು ಲೆಕ್ಕಿಸದ ಕಾಳಿಂಗ ಕೇವಲ 10 ನಿಮಿಷದಲ್ಲಿ ನಾಗರಹಾವು ನುಂಗಿ ಹಾಕಿತ್ತು. ಹಾವೆಂದರೇ ಭಯ ಬೀಳುವ ಮಂದಿ ಈ ಅಪರೂಪದ ದೃಶ್ಯವನ್ನು ಕುತೂಹಲದಿಂದ ವೀಕ್ಷಿಸಿದರು.
ಸುದ್ದಿ ಮುಟ್ಟಿಸಿದರು: ಮುಂಡಳ್ಳಿ ಗ್ರಾಮದ ಮನೆಗಳ ಪಕ್ಕದಲ್ಲಿ ನಾಗರಹಾವನ್ನು ಕಾಳಿಂಗ ಸರ್ಪವೊಂದು ಬೆನ್ನಟ್ಟಿ ಬೇಟೆಯಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಗುಂಬೆಯ ಮಳೆಕಾಡು ಉರಗ ತಜ್ಞ ಅಜಯಗಿರಿಗೆ ಸುದ್ದಿ ಮುಟ್ಟಿಸಿದರು. ಆದರೆ ಅವರು ಸ್ಥಳಕ್ಕೆ ಬರುವ ಹೊತ್ತಿಗೆ ಕಾಳಿಂಗ ಅರ್ಧದಷ್ಟು ಹಾವನ್ನು ನುಂಗಿ ಆಗಿತ್ತು. ಕಾಳಿಂಗ ಸರ್ಪ ಹಾವನ್ನು ಸಂಪೂರ್ಣ ನುಂಗಿದ ಮೇಲೆ ಕಾಳಿಂಗನನ್ನು ಸೆರೆ ಹಿಡಿದು ಸಮೀಪದ ಕಾಡಿಗೆ ಬಿಟ್ಟರು.
ಅಪರೂಪದ ದೃಶ್ಯ: ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಆದರೆ ಕಾಳಿಂಗ ಸರ್ಪ ನಾಗರಹಾವನ್ನು ನುಂಗುವ ದೃಶ್ಯ ಕಂಡು ಬಂದಿದ್ದು ಮಾತ್ರ ಅಪರೂಪ. ಮುಂಡಳ್ಳಿಯ ಬಯಲು ಪ್ರದೇಶದಲ್ಲೇ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ನಾಗರಹಾವು ನುಂಗುವ ವೇದಿಕೆ ಮಾಡಿಕೊಂಡಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರ ಕಣ್ಣಲ್ಲಿ ಆ ಅಪರೂಪದ ದೃಶ್ಯ ಸೆರೆಯಾಯಿತು.
ಆತಂಕ ಮತ್ತು ಜಾಗೃತಿ: ನಾಗರಹಾವು ನುಂಗುವ ದೃಶ್ಯ ನೋಡಿದ ಸ್ಥಳೀಯರು ಆತಂಕಕ್ಕೋಲಗಾದರು. ನಾಗರಹಾವಿನ ದೋಷ, ಸಂಸ್ಕಾರ ಹೀಗೆ ಗ್ರಾಮಸ್ಥರ ತಲೆಯೊಳಗೆ ಆತಂಕಕ್ಕೂ ಕಾರಣವಾಗಿತ್ತು. ಆದರೆ ಕಾಳಿಂಗ ಸರ್ಪದ ಬಗ್ಗೆ ಮಾಹಿತಿ ನೀಡಿದ ಅಜಯಗಿರಿ, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ದೊಡ್ಡ ಹಾವು ಸಣ್ಣ ಹಾವನ್ನು ನುಂಗುವುದು ಪ್ರಕೃತಿ ನಿಯಮ. ಅಲ್ಲದೆ ನಾಗರಹಾವೇ ಕಾಳಿಂಗ ಸರ್ಪದ ಆಹಾರ ಎಂದು ಭಯ ಹೋಗಲಾಡಿಸುವ ಪ್ರಯತ್ನ ಮಾಡಿದರು.
ಅಲ್ಲದೆ ಕಾಳಿಂಗ ಸರ್ಪ ಕಾಣಿಸಿಕೊಂಡ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಾಗಿ ಹೇಗೆ ನಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಪಾಪ ಪುಣ್ಯವೋ.. ಕಾಳಿಂಗ ಸರ್ಪವೊಂದು ನಾಗರಹಾವು ಸಂಪೂರ್ಣ ಭಕ್ಷಿಸುವ ಕುತೂಹಲಕಾರಿ ಅಪರೂಪದ ದೃಶ್ಯ ಕ್ಯಾಮೆರಾ ಕಣ್ಣು ಮಾತ್ರವಲ್ಲದೆ, ಸ್ಥಳೀಯ ಗ್ರಾಮಸ್ಥರ ಕಣ್ಣಲ್ಲೂ ಸೆರೆಯಾಗಿದ್ದು ಮಾತ್ರ ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!