ಮದುವೆಗಾಗಿ ಮರವೇರಿದ ಭೂಪ!
Team Udayavani, Oct 9, 2017, 7:35 AM IST
ಬಳ್ಳಾರಿ: ಮದುವೆ ಮಾಡಬೇಕೆಂದು ಒತ್ತಾಯಿಸಿ ಯುವಕನೋರ್ವ ಮರವೇರಿ ಕುಳಿತು ಎರಡು ರಾತ್ರಿಯನ್ನು ಅಲ್ಲೇ ಕಳೆದ ಪ್ರಸಂಗ ವೊಂದು ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳವಡ್ಡರಹಟ್ಟಿ ಗ್ರಾಮದ ಬಸವರಾಜ (32) ಮದುವೆಗಾಗಿ ಮರವೇರಿದ ಭೂಪ. ಕಾನಾಹೊಸಳ್ಳಿ ಪಿಎಸ್ಐ ಕೃಷ್ಣಾ ನಾಯ್ಕ ಹಾಗೂ ಪೊಲೀಸರು ಭಾನುವಾರ ಈತನ ಮನವೊಲಿಸಿ ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಮರ ಏರಿದ ಬಸವರಾಜ ಅಂದು ಹಾಗೂ ಶನಿವಾರ ರಾತ್ರಿ ಆಹಾರವಿಲ್ಲದೇ ಕಳೆದಿದ್ದಾನೆ. ಪೋಷಕರು ತನಗೆ ಮದುವೆ ಮಾಡುತ್ತೇವೆಂದು ಹೇಳುವವರೆಗೂ ನಾನು ಮರದಿಂದ ಕೆಳಗಿಳಿಯಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದ ಎಂದು ಅವನ ಸ್ನೇಹಿತರು ಹೇಳಿದ್ದಾರೆ.
ಬಸವರಾಜನ ಪೋಷಕರು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ತನ್ನ ಬೇಡಿಕೆ ಪೂರೈಸಿಕೊಳ್ಳಲು ಸುಮಾರು 60 ಅಡಿ ಎತ್ತರದ ಮರವೇರಿದ ಬಸವರಾಜ ಕೆಳಗೆ ಬಿದ್ದರೆ ಅಪಾಯವಾಗಬಾರದು ಎಂದು ಕೆಳಗೆ ಪ್ಲಾಸ್ಟಿಕ್ ಚೀಲಗಳ ದೊಡ್ಡ ಬಲೆಯನ್ನು ಕಟ್ಟಿದ್ದನು. ಬಸವರಾಜ ಕಳೆದ ಎರಡು ವರ್ಷಗಳಿಂದ ಮನೆಯವರನ್ನು ಮದುವೆ ಮಾಡಿ ಎಂದು ಪೀಡಿಸುತ್ತಿದ್ದ. ಆದರೆ, ಯಾವುದೇ ದುಡಿಮೆ ಮಾಡದ ನಿನಗೆ ಯಾರು ಹೆಣ್ಣು ಕೊಡ್ತಾರೆ? ಅವಳನ್ನು ಹೇಗೆ ಸಾಕುತ್ತೀಯ? ಎಂದು ಅವನ ಪೋಷಕರು ಈತನಿಗೆ ಮದುವೆ ಮಾಡಿರಲಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
MUST WATCH
ಹೊಸ ಸೇರ್ಪಡೆ
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ