ಮದುವೆಗಾಗಿ ಮರವೇರಿದ ಭೂಪ!
Team Udayavani, Oct 9, 2017, 7:35 AM IST
ಬಳ್ಳಾರಿ: ಮದುವೆ ಮಾಡಬೇಕೆಂದು ಒತ್ತಾಯಿಸಿ ಯುವಕನೋರ್ವ ಮರವೇರಿ ಕುಳಿತು ಎರಡು ರಾತ್ರಿಯನ್ನು ಅಲ್ಲೇ ಕಳೆದ ಪ್ರಸಂಗ ವೊಂದು ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳವಡ್ಡರಹಟ್ಟಿ ಗ್ರಾಮದ ಬಸವರಾಜ (32) ಮದುವೆಗಾಗಿ ಮರವೇರಿದ ಭೂಪ. ಕಾನಾಹೊಸಳ್ಳಿ ಪಿಎಸ್ಐ ಕೃಷ್ಣಾ ನಾಯ್ಕ ಹಾಗೂ ಪೊಲೀಸರು ಭಾನುವಾರ ಈತನ ಮನವೊಲಿಸಿ ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಮರ ಏರಿದ ಬಸವರಾಜ ಅಂದು ಹಾಗೂ ಶನಿವಾರ ರಾತ್ರಿ ಆಹಾರವಿಲ್ಲದೇ ಕಳೆದಿದ್ದಾನೆ. ಪೋಷಕರು ತನಗೆ ಮದುವೆ ಮಾಡುತ್ತೇವೆಂದು ಹೇಳುವವರೆಗೂ ನಾನು ಮರದಿಂದ ಕೆಳಗಿಳಿಯಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದ ಎಂದು ಅವನ ಸ್ನೇಹಿತರು ಹೇಳಿದ್ದಾರೆ.
ಬಸವರಾಜನ ಪೋಷಕರು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ತನ್ನ ಬೇಡಿಕೆ ಪೂರೈಸಿಕೊಳ್ಳಲು ಸುಮಾರು 60 ಅಡಿ ಎತ್ತರದ ಮರವೇರಿದ ಬಸವರಾಜ ಕೆಳಗೆ ಬಿದ್ದರೆ ಅಪಾಯವಾಗಬಾರದು ಎಂದು ಕೆಳಗೆ ಪ್ಲಾಸ್ಟಿಕ್ ಚೀಲಗಳ ದೊಡ್ಡ ಬಲೆಯನ್ನು ಕಟ್ಟಿದ್ದನು. ಬಸವರಾಜ ಕಳೆದ ಎರಡು ವರ್ಷಗಳಿಂದ ಮನೆಯವರನ್ನು ಮದುವೆ ಮಾಡಿ ಎಂದು ಪೀಡಿಸುತ್ತಿದ್ದ. ಆದರೆ, ಯಾವುದೇ ದುಡಿಮೆ ಮಾಡದ ನಿನಗೆ ಯಾರು ಹೆಣ್ಣು ಕೊಡ್ತಾರೆ? ಅವಳನ್ನು ಹೇಗೆ ಸಾಕುತ್ತೀಯ? ಎಂದು ಅವನ ಪೋಷಕರು ಈತನಿಗೆ ಮದುವೆ ಮಾಡಿರಲಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ