ಪಾಕಿಸ್ಥಾನ ತಿರುಗೇಟು; ಆಸ್ಟ್ರೇಲಿಯಕ್ಕೆ ಸೋಲು


Team Udayavani, Jan 16, 2017, 3:45 AM IST

15-SP-1.jpg

ಮೆಲ್ಬರ್ನ್: ಕಾಂಗರೂ ನೆಲದಲ್ಲಿ ಸತತ 9 ಏಕದಿನ ಪಂದ್ಯಗಳನ್ನು ಸೋತ ಬಳಿಕ ಪಾಕಿಸ್ಥಾನ ವಿಜಯೋತ್ಸವವೊಂದನ್ನು ಆಚರಿಸಿದೆ. ರವಿವಾರ ಎಂಸಿಜಿಯಲ್ಲಿ ನಡೆದ 2ನೇ ಮುಖಾಮುಖೀಯಲ್ಲಿ ಅದು ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ 6 ವಿಕೆಟ್‌ ಸೋಲುಣಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯ 48.2 ಓವರ್‌ಗಳಲ್ಲಿ 220 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದರೆ, ಪಾಕ್‌ 47.4 ಓವರ್‌ಗಳಲ್ಲಿ 4 ವಿಕೆಟಿಗೆ 221 ರನ್‌ ಬಾರಿಸಿ ಗೆಲುವು ಸಾರಿತು.

ಆರಂಭಿಕನಾಗಿ ಬಂದ ಉಸ್ತುವಾರಿ ನಾಯಕ ಮೊಹ ಮ್ಮದ್‌ ಹಫೀಜ್‌ 72 ರನ್‌ (104 ಎಸೆತ, 8 ಬೌಂಡರಿ) ಬಾರಿಸಿ ಪಾಕ್‌ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಶೋಯಿಬ್‌ ಮಲಿಕ್‌ 42 ರನ್‌ ಮಾಡಿ ಅಜೇಯರಾಗಿ ಉಳಿದರು. ಚೇಸಿಂಗ್‌ ವೇಳೆ ಪಾಕ್‌ ಎಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಮೊದಲೆರಡು ವಿಕೆಟ್‌ಗಳಿಗೆ ಕ್ರಮವಾಗಿ 68 ಹಾಗೂ 72 ರನ್‌ ಪೇರಿಸಿ ನಿಧಾನವಾಗಿ ದಡ ಮುಟ್ಟಿತು.

ಆಸೀಸ್‌ಗೆ ಸ್ಮಿತ್‌ ರಕ್ಷಣೆ
ಮೊದಲ ಪಂದ್ಯದಲ್ಲಿ ಖಾತೆಯನ್ನೇ ತೆರೆಯದಿದ್ದ ನಾಯಕ ಸ್ಟೀವನ್‌ ಸ್ಮಿತ್‌ ಇಲ್ಲಿ ಸರ್ವಾಧಿಕ 60 ರನ್‌ ಬಾರಿಸಿ ತಂಡದ ರಕ್ಷಣೆಗೆ ನಿಂತರು. ಇದು ಆಸೀಸ್‌ ಸರದಿಯಲ್ಲಿ ದಾಖಲಾದ ಏಕೈಕ ಅರ್ಧ ಶತಕ. ಬ್ರಿಸ್ಬೇನ್‌ನ ಶತಕ ವೀರ ಮ್ಯಾಥ್ಯೂ ವೇಡ್‌ ಅವರದು ಅನಂತರದ ಹೆಚ್ಚಿನ ಗಳಿಕೆ (35).

ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ ಆತಿಥೇಯರಿಗೆ ಪಾಕಿಸ್ಥಾನದ ಎಡಗೈ ಬೌಲರ್‌ಗಳ ಘಾತಕ ಬೌಲಿಂಗ್‌ ಸವಾಲಾಗುತ್ತಲೇ ಹೋಯಿತು. ರನ್‌ ಗತಿಯೂ ನಿಧಾನಗೊಂಡಿತು, ವಿಕೆಟ್‌ಗಳೂ ಉರುಳುತ್ತ ಹೋದವು. ಸ್ಕೋರ್‌ 86ಕ್ಕೆ ತಲುಪುವಷ್ಟರಲ್ಲಿ 4 ವಿಕೆಟ್‌ ಹಾರಿಸಿದ ಪಾಕ್‌ ಸ್ಪಷ್ಟ ಮೇಲುಗೈ ಸೂಚನೆಯಿತ್ತಿತು.

ನಡುವೆ ಸ್ಮಿತ್‌, ಮ್ಯಾಕ್ಸ್‌ವೆಲ್‌, ವೇಡ್‌ ನೆರವಿಗೆ ನಿಂತರೂ ಕಾಂಗರೂ ಮೊತ್ತದಲ್ಲಿ ಭಾರೀ ಪ್ರಗತಿಯೇನೂ ಕಂಡು ಬರಲಿಲ್ಲ. ಕೊನೆಯ 5 ವಿಕೆಟ್‌ಗಳು ಕೇವಲ 27 ರನ್‌ ಅಂತರದಲ್ಲಿ ಉರುಳಿದ್ದೇ ಇದಕ್ಕೆ ಸಾಕ್ಷಿ.

ಖ್ವಾಜಾ (17)-ವಾರ್ನರ್‌ (16) ಮೊದಲ ವಿಕೆಟಿಗೆ 31 ರನ್‌ ಪೇರಿಸಿದ ಬಳಿಕ ಬೇರ್ಪಟ್ಟರು. ಮಿಚೆಲ್‌ ಮಾರ್ಷ್‌ ಅವರದು ಶೂನ್ಯ ಸಂಪಾದನೆ. ಈ 3 ವಿಕೆಟ್‌ ಉರುಳುವಾಗ ಆಸೀಸ್‌ ಸ್ಕೋರ್‌ಬೋರ್ಡ್‌ ಕೇವಲ 41 ರನ್‌ ತೋರಿಸು ತ್ತಿತ್ತು. ಹೆಡ್‌ (29), ಮ್ಯಾಕ್ಸ್‌ವೆಲ್‌ (23) ಕೂಡ ಬ್ಯಾಟಿಂಗ್‌ ವಿಸ್ತರಿಸಲು ವಿಫ‌ಲರಾದರು. ಸ್ಮಿತ್‌-ವೇಡ್‌ 6ನೇ ವಿಕೆಟಿಗೆ 65 ರನ್‌ ಪೇರಿಸಿದ್ದೇ ಆಸೀಸ್‌ ಸರದಿಯ ದೊಡ್ಡ ಜತೆಯಾಟ. 

ಸ್ಮಿತ್‌ 60 ರನ್ನಿಗೆ 101 ಎಸೆತ ತೆಗೆದುಕೊಂಡರು. ಹೊಡೆ ದದ್ದು ಎರಡೇ ಫೋರ್‌. ವೇಡ್‌ 56 ಎಸೆತ ಎದುರಿಸಿ 35 ರನ್‌ ಮಾಡಿದರು. ಇದರಲ್ಲಿ 3 ಬೌಂಡರಿ ಸೇರಿತ್ತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-48.2 ಓವರ್‌ಗಳಲ್ಲಿ 220 (ಸ್ಮಿತ್‌ 60, ವೇಡ್‌ 35, ಹೆಡ್‌ 29, ಆಮಿರ್‌ 47ಕ್ಕೆ 3, ಇಮಾದ್‌ 37ಕ್ಕೆ 2, ಜುನೇದ್‌ 40ಕ್ಕೆ 2). ಪಾಕಿಸ್ಥಾನ-47.4 ಓವರ್‌ಗಳಲ್ಲಿ 4 ವಿಕೆಟಿಗೆ 221 (ಹಫೀಜ್‌ 72, ಮಲಿಕ್‌ ಔಟಾಗದೆ 42, ಆಜಂ 34, ಶಾರ್ಜೀಲ್‌ 29, ಸ್ಟಾರ್ಕ್‌ 45ಕ್ಕೆ 2, ಫಾಕ್ನರ್‌ 35ಕ್ಕೆ 2). ಪಂದ್ಯಶ್ರೇಷ್ಠ: ಹಫೀಜ್‌.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.