ಟಿ-20 ರ್ಯಾಂಕಿಂಗ್ಇಮಾದ್ ವಾಸಿಮ್ ನಂ.1 ಬೌಲರ್
Team Udayavani, Jun 28, 2017, 3:35 AM IST
ದುಬಾೖ: ಪಾಕಿಸ್ಥಾನದ ಎಡಗೈ ಸ್ಪಿನ್ನರ್ ಇಮಾದ್ ವಾಸಿಮ್ ಟಿ-20 ಕ್ರಿಕೆಟಿನ ನೂತನ ನಂಬರ್ ಬೌಲರ್ ಆಗಿ ಮೂಡಿಬಂದಿದ್ದಾರೆ. ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಮೂರಕ್ಕೆ ಇಳಿದಿದ್ದಾರೆ. ಇದರಿಂದ ಭಾರತದ ಜಸ್ಪ್ರೀತ್ ಬುಮ್ರಾ ದ್ವಿತೀಯ ಸ್ಥಾನಕ್ಕೆ ಏರುವಂತಾಯಿತು.
ಇಮ್ರಾನ್ ತಾಹಿರ್ ಕಳೆದ ಜನವರಿಯಿಂದಲೂ ನಂಬರ್ ವನ್ ಟಿ-20 ಬೌಲರ್ ಆಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಫಲ್ಯ ಅನುಭವಿಸುವುದರೊಂದಿಗೆ ಅಗ್ರಸ್ಥಾನದಿಂದ ಜಾರಬೇಕಾಯಿತು. ಈ ಸರಣಿಯ ವೇಳೆ ಎಸೆಯಲಾದ ಕೊನೆಯ 7 ಓವರ್ಗಳಲ್ಲಿ ತಾಹಿರ್ 75 ರನ್ ಬಿಟ್ಟುಕೊಟ್ಟು ಬಹಳ ದುಬಾರಿಯಾಗಿದ್ದರು. ಉರುಳಿಸಿದ್ದು ಒಂದೇ ವಿಕೆಟ್.
ಇಮಾದ್ ವಾಸಿಮ್ ಟಿ-20 ಕ್ರಿಕೆಟಿನ ಟಾಪ್ ಬೌಲರ್ ಎನಿಸಿಕೊಳ್ಳುತ್ತಿರುವುದು ಇದೇ ಮೊದಲು. ಬುಮ್ರಾ ಹೊರತುಪಡಿಸಿ ಟಾಪ್-10 ಯಾದಿಯಲ್ಲಿರುವ ಭಾರತದ ಮತ್ತೂಬ್ಬ ಬೌಲರ್ ಆರ್. ಅಶ್ವಿನ್. ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ 32 ಸ್ಥಾನಗಳ ಭರ್ಜರಿ ನೆಗೆತ ಕಂಡಿದ್ದು, 29ನೇ ಸ್ಥಾನಕ್ಕೆ ಬಂದಿದ್ದಾರೆ. ಇಂಗ್ಲೆಂಡಿನ ಲಿಯಮ್ ಪ್ಲಂಕೆಟ್ ಕೂಡ ಭಾರೀ ಪ್ರಗತಿ ಸಾಧಿಸಿದ್ದು, 26 ಸ್ಥಾನಗಳ ಏರಿಕೆಯೊಂದಿಗೆ 38ನೇ ಸ್ಥಾನ ತಲುಪಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ನಂಬರ್ ವನ್ ಸ್ಥಾನದಲ್ಲಿ ಮುಂದುವರಿದಿದ್ದು, ಆರನ್ ಫಿಂಚ್ ಹಾಗೂ ಕೇನ್ ವಿಲಿಯಮ್ಸನ್ ಅನಂತರದ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್ ಟೀಮ್ ರ್ಯಾಂಕಿಂಗ್ ಯಾದಿಯ ದ್ವಿತೀಯ ಸ್ಥಾನದಲ್ಲಿ ಒಂಟಿಯಾಗಿ ಕಾಣಿಸಿಕೊಂಡಿತು. 3 ಪಂದ್ಯಗಳ ಈ ಸರಣಿಗೂ ಮುನ್ನ ಇಂಗ್ಲೆಂಡ್ ಪಾಕಿಸ್ಥಾನದೊಂದಿಗೆ ಜಂಟಿ ದ್ವಿತೀಯ ಸ್ಥಾನದಲ್ಲಿತ್ತು. ನ್ಯೂಜಿಲ್ಯಾಂಡ್ ಅಗ್ರಸ್ಥಾನ ಉಳಿಸಿಕೊಂಡಿದೆ.
ಟಾಪ್-10 ಟಿ-20 ಬೌಲರ್: 1. ಇಮಾದ್ ವಾಸಿಮ್ (780), 2. ಜಸ್ಪ್ರೀತ್ ಬುಮ್ರಾ (764), 3. ಇಮ್ರಾನ್ ತಾಹಿರ್ (744), 4. ರಶೀದ್ ಖಾನ್ (717), 4. ಸಾಮ್ಯುಯೆಲ್ ಬದ್ರಿ (717), 6. ಮುಸ್ತಫಿಜುರ್ ರೆಹಮಾನ್ (695), 7. ಜೇಮ್ಸ್ ಫಾಕ್ನರ್ (688), 8. ಸುನೀಲ್ ನಾರಾಯಣ್ (652), 9. ಶಕಿಬ್ ಅಲ್ ಹಸನ್ (648), 10. ಆರ್. ಅಶ್ವಿನ್ (644).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ