ಪ್ರೊ ಕಬಡ್ಡಿ: ಸೂಪರ್‌ ಪ್ಲೇ ಆಫ್ ಗೆ ನಿಕಟ ಸ್ಪರ್ಧೆ


Team Udayavani, Oct 3, 2017, 6:10 AM IST

PRo-2017-02.jpg

ಚೆನ್ನೈ: ಪ್ರೊ ಕಬಡ್ಡಿ ಲೀಗ್‌ ಆರಂಭವಾಗಿ ಈಗಾಗಲೇ 2 ತಿಂಗಳು ಮುಗಿದಿದ್ದು, ಇನ್ನೆರಡು ವಾರಗಗಳಲ್ಲಿ ಸೂಪರ್‌ ಪ್ಲೇ ಆಫ್ ಗೆ ತೇರ್ಗಡೆಯಾಗುವ ಅಗ್ರ 6 ತಂಡಗಳು ಯಾವುದೆಂದು ನಿರ್ಧಾರವಾಗಲಿದೆ.

ಈಗ ಚೆನ್ನೈ ಚರಣದಲ್ಲಿ ಪಂದ್ಯಗಳು ಸಾಗುತ್ತಿದ್ದು, ಇನ್ನು ಜೈಪುರ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ಅನಂತರ ಎರಡೂ ವಲಯಗಳ ತಲಾ 3 ಅಗ್ರ ತಂಡಗಳ ನಡುವೆ ಸೂಪರ್‌ ಪ್ಲೇ ಆಫ್ ಹೋರಾಟ ನಡೆಯಲಿದ್ದು ಅ. 28 ರಂದು ಫೈನಲ್‌ ನಡೆಯಲಿದೆ.

ಸದ್ಯದ ತಂಡಗಳ ಬಲಾಬಲವನ್ನು ಗಮನಿಸಿದಾಗ ಎ ವಲಯದಲ್ಲಿ ಅಗ್ರ ಐದು ತಂಡಗಳಿಗೆ ಸೂಪರ್‌ ಪ್ಲೇ ಆಫ್ ಗೆ ತೇರ್ಗಡೆಯಾಗುವ ಅವಕಾಶವಿದೆ. ತವರಿನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಸೋತಿರುವ ದಬಾಂಗ್‌ ಡೆಲ್ಲಿ ಹೊರಬಿದ್ದಿದೆ.
ಆದರೆ “ಬಿ’ ವಲಯದಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ಮತ್ತು ಬೆಂಗಾಲ್‌ ವಾರಿಯರ್ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವುದನ್ನು ಖಚಿತಪಡಿಸಿವೆ. ಆದರೆ 3 ನೇ ಸ್ಥಾನಕ್ಕಾಗಿ ಯುಪಿ ಯೋಧಾ, ತೆಲುಗು ಟೈಟಾನ್ಸ್‌, ತಮಿಳ್‌ ಮತ್ತು ಬೆಂಗಳೂರು ನಡುವೆ ಸ್ಪರ್ಧೆಯಿದೆ. ಇದರಲ್ಲಿ ಸದ್ಯ 3ನೇ ಸ್ಥಾನದಲ್ಲಿರುವ ಯುಪಿ ಯೋಧಾಗೆ ಮುನ್ನಡೆಯುವ ಅವಕಾಶ ಹೆಚ್ಚು.

ಯುಪಿ ಯೋಧರಿಗೆ ಹೆಚ್ಚು ಅವಕಾಶ
ರವಿವಾರದ ಪಂದ್ಯದಲ್ಲಿ ಜೈಪುರ ವಿರುದ್ಧ ಬೋನಸ್‌ ಅಂಕದ ಆಧಾರದಲ್ಲಿ ಗೆಲುವು ಪಡೆದ ಬೆಂಗಾಲ್‌ ಸದ್ಯ ತಾನಾಡಿದ 19 ಪಂದ್ಯಗಳಲ್ಲಿ 64 ಅಂಕಗಳೊಂದಿಗೆ “ಬಿ’ ವಲಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಪಾಟ್ನಾ  66 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು ಈ ಎರಡು ತಂಡಗಳು ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವುದು ಖಚಿತವಾಗಿದೆ.

ಯುಪಿ ತಾನಾಡಿದ 18 ಪಂದ್ಯಗಳಿಂದ 49 ಅಂಕ ಗಳಿಸಿ 3ನೇ ಸ್ಥಾನದಲ್ಲಿದ್ದರೆ, ತೆಲುಗು 43 ಅಂಕಗಳಿಂದ 4ನೇ ಸ್ಥಾನದಲ್ಲಿದೆ. ತಲಾ 34 ಅಂಕ ಹೊಂದಿರುವ ತಮಿಳ್‌ ಮತ್ತು ಬೆಂಗಳೂರು ತಂಡಗಳು ಕೊನೆಯ 2 ಸ್ಥಾನದಲಿವೆ.

ತವರಿನ ಚರಣದ ಆರಂಭದ ಮೂರು ಪಂದ್ಯಗಳಲ್ಲಿ ಸೋತಿರುವ ತಮಿಳ್‌ ತಲೈವಾಸ್‌ಗೆ ಸೂಪರ್‌ ಪ್ಲೇ ಆಫ್ ಹಾದಿ ದುರ್ಗಮವೆಂದೇ ಹೇಳಬಹುದು. ತವರಿನಲ್ಲಿ ತಮಿಳ್‌ ಇನ್ನು 3 ಪಂದ್ಯಗಳನ್ನಾಡಲಿದೆ. “ಬಿ’ ವಲಯದಲ್ಲಿರುವ ತೆಲುಗು, ಯುಪಿ ಮತ್ತು ಬೆಂಗಳೂರು ವಿರುದ್ಧವೇ ತಮಿಳ್‌ ಹೋರಾಡಬೇಕಾಗಿದ್ದು, ಈ ಮೂರರಲ್ಲೂ ಜಯ ಒಲಿಸಿಕೊಳ್ಳಬೇಕಾಗಿದೆ.

ಇನ್ನುಳಿದ 5 ಪಂದ್ಯಗಳಲ್ಲಿ ಗೆದ್ದರೆ ಬೆಂಗಳೂರು ಬುಲ್ಸ್‌ಗೂ ಮುನ್ನಡೆಯುವ ಅವಕಾಶವಿದೆ. ಆದರೆ ಇನ್ನುಳಿದ 4 ಪಂದ್ಯಗಳಲ್ಲಿ ಎರಡರಲ್ಲಿ ಜಯ ಪಡೆದರೆ ಯುಪಿ ಸುಲಭವಾಗಿ 3ನೇ ತಂಡವಾಗಿ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗಲಿದೆ.

“ಎ’ ವಲಯ ಕಠಿನ
ಚೆನ್ನೈ ಚರಣದಲ್ಲಿ ಆಡಿದ 2 ಪಂದ್ಯಗಳಲ್ಲಿ ಗೆದ್ದಿರುವ ಪುನೇರಿ ಪಲ್ಟಾನ್ಸ್‌ “ಎ’ ವಲಯದ ಬಲಿಷ್ಠ ತಂಡವಾಗಿ ಮೂಡಿಬಂದಿದೆ. ಸದ್ಯ 3ನೇ ಸ್ಥಾನದಲ್ಲಿದ್ದರೂ ಪುನೇರಿ ಈವರೆಗೆ ಕೇವಲ 14 ಪಂದ್ಯಗಳನ್ನಾಡಿದ್ದು, 11 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಏಕೈಕ ತಂಡವಾಗಿದೆ. ಕೇವಲ ಮೂರರಲ್ಲಷ್ಟೇ ಸೋತಿದೆ. ಅಗ್ರಸ್ಥಾನದಲ್ಲಿರುವ ಗುಜರಾತ್‌ಗಿಂತ ಕೇವಲ ಐದಂಕದ ಹಿನ್ನೆಡೆಯಲ್ಲಿದೆ. ಇನ್ನು ತವರಿನಲ್ಲಿ ಆಡಬೇಕಾಗಿರುವ ಪುನೇರಿ ಗರಿಷ್ಠ ಗೆಲುವು ಸಾಧಿಸಿ ಅಗ್ರಸ್ಥಾನಕ್ಕೇರುವ ಸಾಧ್ಯತೆ ಹೆಚ್ಚು.

10 ಪಂದ್ಯಗಳಲ್ಲಿ ಗೆದ್ದಿರುವ ಗುಜರಾತ್‌ 62 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಹರಿಯಾಣ ಸ್ಟೀಲರ್  (59 ಅಂಕ) ದ್ವಿತೀಯ ಸ್ಥಾನದಲ್ಲಿದೆ. 4 ಮತ್ತು 5ನೇ ಸ್ಥಾನದಲ್ಲಿರುವ ಯು ಮುಂಬಾ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಗೂ ಮುನ್ನಡೆಯುವ ಅವಕಾಶವಿದೆ. 15 ಪಂದ್ಯಗಳಿಂದ 44 ಅಂಕ ಗಳಿಸಿರುವ ಜೈಪುರ ಕೂಡ ತವರಿನಲ್ಲಿ ಆಡಬೇಕಾಗಿದೆ. ತವರಿನಲ್ಲಿ 6 ಪಂದ್ಯ ಆಡಲಿರುವ ಜೈಪುರ ಗರಿಷ್ಠ ಗೆಲುವು ಪಡೆದು ಮುನ್ನಡೆಯಲು ಪ್ರಯತ್ನಿಸಬಹುದು. ಕೇವಲ 4 ಪಂದ್ಯ ಗೆದ್ದಿರುವ ಡೆಲ್ಲಿ ಹೊರಬಿದ್ದಿದೆ.

ಗೆಲುವು ಖುಷಿ ನೀಡಿದೆ
ಜೈಪುರ ವಿರುದ್ಧದ ರೋಚಕ ಗೆಲುವು ಖುಷಿ ನೀಡಿದೆ. ಮಣಿಂದರ್‌ ಸಿಂಗ್‌ ಅದ್ಭುತ ರೀತಿಯಲ್ಲಿ ಆಡವಾಡಿದರು. ಅವರು ತಂಡದ ಪವರ್‌ಫ‌ುಲ್‌ ರೈಡರ್‌ ಎಂದು ಬೆಂಗಾಲ್‌ ಕೋಚ್‌ ಜಗದೀಶ್‌ ಕುಂಬ್ಳೆ ಹೇಳಿದ್ದಾರೆ. ತವರಿನಲ್ಲಿ  ತಮಿಳ್‌ ಸತತ 3 ಪಂದ್ಯ ಸೋತಿರಬಹುದು. ಆದರೆ ಮುಂದಿನ ಆರು ಪಂದ್ಯಗಳಲ್ಲಿ ಗೆದ್ದರೆ ತಮಿಳ್‌ಗೆ ಮತ್ತೆ ಯುಪಿ ಯೋಧಾಗೆ ಅವಕಾಶವಿದೆ ಎಂದೂ ಕುಂಬ್ಳೆ ಅಭಿಪ್ರಾಯಪಟ್ಟರು.

ಇನ್ನೂ ಅವಕಾಶವಿದೆ: ರಿಷಾಂಕ್‌
ಪುನೇರಿ ಪಲ್ಟಾನ್ಸ್‌ಗೆ ನಾವು ಒಂದು ಅಂಕದಿಂದ ಸೋತಿರಬಹುದು. ಆದರೆ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶ ಇನ್ನೂ ಇದೆ ಎಂದು ಕನ್ನಡಿಗ ಯುಪಿ ಯೋಧಾ ತಂಡದ ಖ್ಯಾತ ರೈಡರ್‌ ರಿಷಾಂಕ್‌ ದೇವಾಡಿಗ ಹೇಳಿದ್ದಾರೆ.

– ಶಂಕರನಾರಾಯಣ ಪಿ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.