ವನಿತಾ ಐಪಿಎಲ್ಗೆ ಸಕಾಲ: ಮಿಥಾಲಿ
Team Udayavani, Jul 24, 2017, 9:48 AM IST
ಲಂಡನ್: ವನಿತಾ ಐಪಿಎಲ್ ಪಂದ್ಯಾವಳಿಗೆ ಇದು ಸಕಾಲ ಎಂಬುದಾಗಿ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ. ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಭಾರೀ ಯಶಸ್ಸು ಇದಕ್ಕೆ ಪ್ರೇರಣೆಯಾಗಲಿದೆ ಎಂದರು.
“ಈ ವಿಶ್ವಕಪ್ ವೇಳೆ ಇಡೀ ದೇಶವೇ ನಮ್ಮ ಬೆಂಬಲಕ್ಕೆ ನಿಂತಿದೆ. ಅಮೋಘ ಪ್ರೋತ್ಸಾಹವನ್ನೂ ನೀಡುತ್ತಿದೆ. ಭಾರತದಲ್ಲೀಗ ವನಿತಾ ಕ್ರಿಕೆಟಿನ ಅದೃಷ್ಟ ಪೂರ್ಣ ಬದಲಾಗುವ ಹಂತದಲ್ಲಿದೆ. ಈ ಹಂತದಲ್ಲಿ ಬಿಸಿಸಿಐ ವನಿತಾ ಐಪಿಎಲ್ ಆರಂಭಿಸಲು ದೃಢ ಹೆಜ್ಜೆಗಳನ್ನಿಡಬಹುದು…’ ಎಂದು ಮಿಥಾಲಿ ರವಿವಾರದ ಫೈನಲ್ ಪಂದ್ಯಕ್ಕೂ ಮುನ್ನ ಹೇಳಿದರು.
ಇದಕ್ಕೆ ಇಂಗ್ಲೆಂಡ್ ನಾಯಕಿ ಹೀತರ್ ನೈಟ್ ಕೂಡ ದನಿಗೂಡಿಸಿದರು. “ಕ್ರಿಕೆಟಿನ ಆರ್ಥಿಕ ದೃಷ್ಟಿಯಲ್ಲಿ ಭಾರತ ನಿಜಕ್ಕೂ ಶಕ್ತಿ ಕೇಂದ್ರ. ಭಾರತ ಫೈನಲ್ ಪ್ರವೇಶಿಸಿದ್ದರಿಂದ ವನಿತಾ ಕ್ರಿಕೆಟಿಗೆ ಲಾಭ ಆಗುವುದರಲ್ಲಿ ಅನುಮಾನವಿಲ್ಲ. ವನಿತಾ ಐಪಿಎಲ್ ಒಂದು ಅದ್ಭುತ ಯೋಜನೆ. ಬಿಸಿಸಿಐ ಈ ನಿಟ್ಟಿನಲ್ಲಿ ಮುಂದಡಿ ಇಟ್ಟರೆ ಯಶಸ್ಸು ಖಂಡಿತ…’ ಎಂದು ನೈಟ್ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ