ಅನುಭವದ ಕೊರತೆಯಿಂದ ಸೋಲು: ಗಾವಸ್ಕರ್
Team Udayavani, Jul 26, 2017, 7:40 AM IST
ಮುಂಬಯಿ: ವನಿತಾ ವಿಶ್ವಕಪ್ ಫೈನಲ್ನಲ್ಲಿ ಭಾರತದ ಸೋಲಿಗೆ ಅನುಭವದ ಕೊರತೆಯೇ ಮುಖ್ಯ ಕಾರಣ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.
“ಭಾರತ ಈ ಪಂದ್ಯಾವಳಿ ಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿತು. ಆದರೆ ದೊಡ್ಡ ಪಂದ್ಯ ಗಳಲ್ಲಿ, ಅದರಲ್ಲೂ ವಿಶ್ವಕಪ್ ಫೈನಲ್ನಲ್ಲಿ ಆಡುವಾಗ ಅನುಭವ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರ ಕೊರತೆ ವನಿತೆಯರನ್ನು ಕಾಡಿತು…’ ಎಂಬುದಾಗಿ ಗಾವಸ್ಕರ್ ಅಭಿಪ್ರಾಯಪಟ್ಟರು.
“ಇದೊಂದು ಕ್ಲೋಸ್ ಮ್ಯಾಚ್ ಆಗಿತ್ತು. ನಮ್ಮವರು ಗರಿಷ್ಠ ಪ್ರಯತ್ನ ವನ್ನೇ ಮಾಡಿದ್ದರು. ಹೀಗಾಗಿ ಅವರಿಗೆ ಪೂರ್ಣಾಂಕ ನೀಡಬೇಕಾಗುತ್ತದೆ. ಈ ಪಂದ್ಯಾವಳಿಯಲ್ಲಿ ಮಿಥಾಲಿ ಟೀಮ್ ಆಡಿದ ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ…’ ಎಂದು ಗಾವಸ್ಕರ್ ಹೇಳಿದರು.
“ಹೌದು, ಭಾರತ ಕೊನೆಯ 7 ವಿಕೆಟ್ಗಳನ್ನು ಪಟಪಟನೆ ಕಳೆದು ಕೊಂಡಿತು. 20-30 ರನ್ನುಗಳ ಒಂದು ಜತೆಯಾಟ ನಡೆದರೂ ಭಾರತ ಮೇಲುಗೈ ಸಾಧಿಸುತ್ತಿತ್ತು. ಇದಕ್ಕೆ ಮುಖ್ಯವಾಗಿ ಬೇಕಿದ್ದುದು ಅನುಭವ…’ ಎಂದು ಸುನೀಲ್ ಗಾವಸ್ಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ