ಯು ಮುಂಬಾ ತಂಡದಿಂದ ಫ‌ುಟ್‌ಬಾಲ್‌ ಪ್ರತಿಭಾಶೋಧ


Team Udayavani, Sep 26, 2017, 9:19 AM IST

26-STATE-17.jpg

ನವದೆಹಲಿ: ಪ್ರೊ ಕಬಡ್ಡಿಗಾಗಿ ಹುಟ್ಟಿಕೊಂಡ ತಂಡವೊಂದು ಕಬಡ್ಡಿ ಜತೆಗೆ ಈಗ ದೇಶದ ಫ‌ುಟ್‌ಬಾಲ್‌ ಏಳಿಗೆಗಾಗಿಯೂ ಶ್ರಮಿಸುತ್ತಿದೆ. ದೇಶದ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳನ್ನು ಒಂದೆಡೆ ಕಲೆ ಹಾಕಿ, ಅವರಲ್ಲಿರುವ ಕಲಿಕಾ ಆಸಕ್ತಿ, ಪ್ರತಿಭೆ ಗುರುತಿಸಿ ಜರ್ಮನಿಯಲ್ಲಿ ಸದ್ದಿಲ್ಲದೆ ಉಚಿತ ತರಬೇತಿಯನ್ನೂ ನೀಡುತ್ತಿದೆ. ಹೌದು, ಕಳೆದ 2 ವರ್ಷದಿಂದ ಇಂತಹದೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರೊ ಕಬಡ್ಡಿಯ ಪ್ರಮುಖ ತಂಡವಾಗಿರುವ ಯು ಮುಂಬಾ ತಂಡ ಕಾರ್ಯಗತಗೊಳಿಸಿದೆ. ಫ‌ುಟ್‌ಬಾಲ್‌
ಜೊತೆಗೆ ವಿದೇಶದಲ್ಲಿ ಉಚಿತ ಶಿಕ್ಷಣ ನೀಡುತ್ತಾ, ಜರ್ಮನಿಯ ಬಿಟ್‌ಬರ್ಗ್‌ನಲ್ಲಿ ಮಕ್ಕಳಿಗೆ ಭವಿಷ್ಯ ಕಟ್ಟಿಕೊಳ್ಳುವ ಸುವರ್ಣಾವಕಾಶವನ್ನು ಯು ಮುಂಬಾ ನೀಡಿದೆ.  ಇದರೊಂದಿಗೆ ಇತರೆ ಫ್ರಾಂಚೈಸಿಗಳಿಗೆ ಮಾದರಿಯಾಗಿದೆ.

ಕನಸುಗಳ ಸಾಕಾರಕ್ಕಾಗಿ ಯು ಡ್ರೀಮ್‌: ಯು ಮುಂಬಾ ಫ್ರಾಂಚೈಸಿ ರೋನಿ ಸ್ಕಿವ್‌ವಾಲಾ ಯು ಡ್ರೀಮ್‌ ಸಂಸ್ಥೆ ಹುಟ್ಟು ಹಾಕಿದ್ದು ವೃತ್ತಿಪರ ಫ‌ುಟ್‌ಬಾಲ್‌ ಆಟಗಾರರನ್ನು ಹೊರ ತರುವ ಭಾರೀ ಸಂಕಲ್ಪ ಮಾಡಿದ್ದಾರೆ, ಇದಕ್ಕೆ ಟಾಟಾ ಟ್ರಸ್ಟ್‌ ಸಂಸ್ಥೆ ಸಾಥ್‌ ನೀಡುತ್ತಿದೆ.

ವಿದೇಶಿ ಕ್ಲಬ್‌ಗಳ ಜತೆಗೆ ಕಲಿಕೆಗೆ ಅವಕಾಶ: ಬಿವಿಬಿ
ಡಾರ್ಟ್‌ಮಂಡ್‌ ಜರ್ಮನಿಯ ಖ್ಯಾತ ಫ‌ುಟ್‌ಬಾಲ್‌ ಕ್ಲಬ್‌ ತಂಡ. ಇಲ್ಲಿನ ಆಟಗಾರರೊಂದಿಗೆ ಕಲಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಮ್ಮ ದೇಶದ ಪ್ರತಿಭಾನ್ವಿತರಿಗೆ ಇಂತಹದೊಂದು ಅವಕಾಶವನ್ನು ಯು ಡ್ರೀಮ್ಸ್‌ ಮಾಡಿಕೊಟ್ಟಿದೆ.

2015ರಲ್ಲಿ 45 ನಗರದಲ್ಲಿ ಪ್ರತಿಭಾನ್ವೇಷಣೆ: 15 ವರ್ಷ ವಯೋಮಿತಿಯೊಳಗಿನ ಭಾರತ ಫ‌ುಟ್‌ಬಾಲ್‌ ಪ್ರತಿಭೆಗಳನ್ನು ಯು ಡ್ರೀಮ್‌ ಮೊದಲ ಬಾರಿಗೆ ಹುಡುಕಲು ಆರಂಭಿಸಿದ್ದು 2015ರಲ್ಲಿ. ಮೊದಲ ಪ್ರಯತ್ನವಾಗಿ ದೇಶದ 46 ನಗರದ ಶಾಲೆಗಳಲ್ಲಿ ಫ‌ುಟ್ಬಾಲಿಗರನ್ನು ಅನ್ವೇಷಿಸಲಾಯಿತು. ಜರ್ಮನಿಯ ಖ್ಯಾತ ಕ್ಲಬ್‌ ತಂಡದ ಕೋಚ್‌ಗಳು ಹುಡುಕಾಟದಲ್ಲಿ ಪಾಲ್ಗೊಂಡರು. ಮೊದಲ ಸಲ 20ಕ್ಕೂ ಹೆಚ್ಚು ಯುವ ಆಟಗಾರರನ್ನು ಆಯ್ಕೆ ಮಾಡಲಾಯಿತು. ಇವರೆಲ್ಲರೂ ದೇಶದ ಸಿಬಿಎಸ್‌ಸಿ ಪಠ್ಯಕ್ರಮದ ವಿದ್ಯಾರ್ಥಿಗಳಾಗಿದ್ದಾರೆ.

ಇತರೆ ವಿದೇಶಿ ತಂಡಗಳ ಜತೆಗೂ ಅಭ್ಯಾಸ:
ಜರ್ಮನಿಯಲ್ಲಿರುವ ಭಾರತೀಯ ಆಟಗಾರರಿಗೆ ಲಕ್ಸೆಂಬರ್ಗ್‌, ಬೆಲ್ಜಿಯಂ, ಫ್ರಾನ್ಸ್‌, ಹಾಲೆಂಡ್‌ ಹಾಗೂ ಯುಕೆ ಕ್ಲಬ್‌ ತಂಡಗಳ ಜತೆಗೆ ಆಡುವ ಅವಕಾಶ ಸಿಗುತ್ತಿದೆ. ಜತೆಗೆ ಅಲ್ಲಿನ ಒಲಿಂಪಿಕ್ಸ್‌ ಕೋಚ್‌ಗಳಿಂದಲೂ ಸಲಹೆಗಳು ದೊರೆಯುತ್ತಿವೆ. 2016ರಲ್ಲಿ 
40ಕ್ಕೂ ಹೆಚ್ಚಿನ ಮಕ್ಕಳನ್ನು ಯೋಜನೆ ಮೂಲಕ ಯು ಡ್ರೀಮ್‌ ಜರ್ಮನಿಗೆ ಕಳುಹಿಸಿಕೊಟ್ಟಿದೆ. 

ದೇಶದಲ್ಲಿ ಫ‌ುಟ್‌ಬಾಲ್‌ ಕೇಂದ್ರ ಸ್ಥಾಪಿಸುವ ಕನಸು:
ಯು ಡ್ರೀಮ್‌ಗೆ ಸದ್ಯ ದೇಶದಲ್ಲಿ ಮಿಜೋರಾಮ್‌, ಹರ್ಯಾಣ, ಮಣಿಪುರದಲ್ಲಿ ಯು ಡ್ರೀಮ್‌ ಫ‌ುಟ್‌ಬಾಲ್‌ ಅಕಾಡೆಮಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಒಟ್ಟಾರೆ 2017-18ರಲ್ಲಿ 7 ಕೇಂದ್ರವನ್ನು ಸ್ಥಾಪಿಸುವ ಗುರಿ ನೀಡಲಾಗಿದೆ. ಇದು 3 ವರ್ಷದ 
ಯೋಜನೆಯಾಗಿದೆ. ಒಟ್ಟು 600 ಕ್ರೀಡಾಪಟುಗಳು ಡ್ರೀಮ್‌ ಸೌಲಭ್ಯ ಪಡೆಯಲಿದ್ದಾರೆ. ಸುಮಾರು 70-100 ಮಂದಿ ಕೋಚ್‌ಗಳು ಇಲ್ಲಿ ತರಬೇತಿ ನೀಡಲಿದ್ದಾರೆ. ಯುವ ಆಟಗಾರರನ್ನು ಒಂದು ಹಂತದಲ್ಲಿ ತಯಾರಿ ಮಾಡಿ ಹೆಚ್ಚಿನ ಕೋಚಿಂಗ್‌ಗಾಗಿ ಇಲ್ಲಿಂದ ಜರ್ಮನಿಗೆ ಕಳುಹಿಸಲಾಗುತ್ತದೆ.

ಕಬಡ್ಡಿ ಮಾತ್ರವಲ್ಲ ಫ‌ುಟ್‌ಬಾಲ್‌ನತ್ತಲೂ ಯು ಮುಂಬಾ ಗಮನ ಹರಿಸುತ್ತಿರುವುದು ಕ್ರೀಡೆಯ ಹಿತ ದೃಷ್ಟಿಯಿಂದ ಒಳ್ಳೆಯದು.
ಯು ಮುಂಬಾ ತಂಡದ ಫ್ರಾಂಚೈಸಿ ಇಂತಹದೊಂದು ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ರವಿ ಶೆಟ್ಟಿ, ಯು ಮುಂಬಾ ಕೋಚ್‌ 

ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.