ಏಷ್ಯಾಕಪ್‌ ಹಾಕಿ ಅಜೇಯ ಭಾರತಕ್ಕೆ 3ನೇ ಬಾರಿ ಕಿರೀಟ 


Team Udayavani, Oct 23, 2017, 6:30 AM IST

PTI10_22_2017_000167B.jpg

ಢಾಕಾ(ಬಾಂಗ್ಲಾದೇಶ): ಶನಿವಾರವಷ್ಟೇ ಪಾಕಿಸ್ತಾನವನ್ನು ಸತತ 2ನೇ ಬಾರಿ ಸೋಲಿಸಿದ್ದ ಉತ್ಸಾಹದಲ್ಲಿದ್ದ ಭಾರತ ಹಾಕಿ ತಂಡಕ್ಕೆ ಭಾನುವಾರ ಮತ್ತೂಂದು ಸಂಭ್ರಮದ ದಿನ. 

ಈ ಬಾರಿಯ ಇಡೀ ಏಷ್ಯಾಕಪ್‌ ಹಾಕಿಯಲ್ಲಿ ವಿಶ್ವದರ್ಜೆಯ ಆಟವನ್ನು ಪ್ರದರ್ಶಿಸಿದ ಭಾರತೀಯರು ಫೈನಲ್‌ನಲ್ಲೂ ಅದೇ ಗುಣಮಟ್ಟವನ್ನು ಪ್ರದರ್ಶಿಸಿದರು. ಸೂಪರ್‌ 4ರ ಹಂತದಲ್ಲಿ ಹೀನಾಯವಾಗಿ ಮಲೇಷ್ಯಾವನ್ನು ಹೊಸಕಿ ಹಾಕಿದ್ದ ಭಾರತದ ಹುಲಿಗಳು ಅಂತಿಮ ಪಂದ್ಯದಲ್ಲಿ ಮತ್ತೂಮ್ಮೆ ಆ ತಂಡದ ವಿರುದ್ಧ ಅಧಿಪತ್ಯ ಸ್ಥಾಪಿಸಿದರು. ಇದರೊಂದಿಗೆ 13 ವರ್ಷದ ನಂತರ ಏಷ್ಯಾಕಪ್‌ ಹಾಕಿ ಕಿರೀಟವನ್ನು ಭಾರತೀಯರು ಎತ್ತಿ ಹಿಡಿದರು. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಭಾರತ 2-1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತು. 

ತಂಡದ ಪರ ರಣದೀಪ್‌ ಸಿಂಗ್‌(3ನೇ ನಿಮಿಷ), ಲಲಿತ್‌ ಉಪಾಧ್ಯಾಯ(29ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಮಲೇಷ್ಯಾ ಪರ ಶಹ್ರಿಲ್‌ ಸಾಬಹ (50ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

ಹೊಸ ಕೋಚ್‌ ಆಗಿ ಶೋರ್ಡ್‌ ಮರಿನ್‌ ಆಯ್ಕೆಯಾದ ನಂತರ ಭಾರತಕ್ಕೆ ಸಿಕ್ಕಿದ ಮೊದಲ ಅತ್ಯದ್ಭುತ ಜಯವಿದು. ಈ ಜಯ ಭಾರತ ಮತ್ತೆ ವಿಶ್ವಮಟ್ಟದ ಕೂಟಗಳಲ್ಲಿ ಮಿಂಚು ಸಾಧ್ಯತೆಯನ್ನು ತೆರೆದಿರಿಸಿದೆ. ಅ-17 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರು ಇರುವುದೇ ಈ ಯಶಸ್ಸಿನ ಕಾರಣಗಳಲ್ಲೊಂದಾಗಿದೆ.

ಆರಂಭದಲ್ಲೇ ಗೋಲ್‌ ಸಿಡಿಸಿದ ರಣದೀಪ್‌: ಪಂದ್ಯಕ್ಕೂ ಮುನ್ನವೇ ಭಾರತ ಕೂಟದಲ್ಲಿ ಒಂದೂ ಪಂದ್ಯವನ್ನು ಸೋಲದೇ ಉತ್ಸಾಹದಲ್ಲಿತ್ತು. ಪಂದ್ಯ ಆರಂಭವಾಗಿ 3ನೇ ನಿಮಿಷದಲ್ಲಿಯೇ ರಣದೀಪ್‌ ಸಿಂಗ್‌ ಆಕರ್ಷಕವಾಗಿ ಗೋಲು ಸಿಡಿಸಿದರು. ಹೀಗಾಗಿ ಆರಂಭಿಕ ಹಂತದಲ್ಲಿಯೇ ಭಾರತ 1-0 ಗೋಲುಗಳಿಂದ ಮುನ್ನಡೆ ಪಡೆಯಿತು. 

ಇದೇ ಆತ್ಮವಿಶ್ವಾಸದಲ್ಲಿಯೇ ಆಡುತ್ತಿದ್ದ ಭಾರತ ನಂತರದ ಹಂತದಲ್ಲಿ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಿತು. ಅತ್ತ ಮಲೇಷ್ಯಾ ಕೆಲವು ಬಾರಿ ಗೋಲು ಬಾರಿಸಲು ಮುಂದಾದರೂ ಅದಕ್ಕೆ ಭಾರತೀಯರು ಅವಕಾಶ ನೀಡಲಿಲ್ಲ. ಇನ್ನೇನು ಮೊದಲ ಅವಧಿಯ ಅಂತ್ಯವಾಗುತ್ತೆ ಅನ್ನುವ ಸಮಯದಲ್ಲಿಯೇ ಲಲಿತ್‌ ಉಪಾಧ್ಯಾಯ ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಇದೇ ಹಂತದಲ್ಲಿ ಮೊದಲ ಅವಧಿ ಅಂತ್ಯವಾಯಿತು.

2ನೇ ಅವಧಿಯಲ್ಲಿ ಆತಂಕದ ವಾತಾವರಣ:
ಎರಡನೇ ಅವಧಿಯ ಆರಂಭದಲ್ಲಿ ಯಾವುದೇ ಗೋಲು ದಾಖಲಾಗದೇ ಪಂದ್ಯ ಹಾಗೆಯೇ ಸಾಗುತ್ತಿತ್ತು. ಆದರೆ 50ನೇ ನಿಮಿಷದಲ್ಲಿ ಮಲೇಷ್ಯಾದ ಶಹ್ರಿಲ್‌ ಸಾಬಹ ಗೋಲು ದಾಖಲಿಸಿದರು. ಹೀಗಾಗಿ ಪಂದ್ಯದಲ್ಲಿ ಸ್ವಲ್ಪ ಆತಂಕದ ವಾತಾವರಣವಿತ್ತು. ಆ ನಂತರ ಮಲೇಷ್ಯಾ ಆಟಗಾರರು ಗೋಲು ಬಾರಿಸಲು ಯತ್ನಿಸಿದರೂ ಭಾರತೀಯರು ಅವಕಾಶ ನೀಡಲಿಲ್ಲ. ಇತ್ತ ಭಾರತ ಕೂಡ ಗೋಲು ಬಾರಿಸಿ ಅಂತರಿಸಲು ವಿಸ್ತರಿಸಲು ಯತ್ನಿಸಿ ವಿಫ‌ಲವಾಯಿತು. ಅಂತಿಮವಾಗಿ ಭಾರತ 2-1ರಿಂದ ಗೆದ್ದು ಪ್ರಶಸ್ತಿ ಪಡೆಯಿತು. ಮಲೇಷ್ಯಾ ರನ್ನರ್‌ ಪ್ರಶಸ್ತಿ ಪಡೆದರೆ, ಪಾಕಿಸ್ತಾನ ತೃತೀಯ ಸ್ಥಾನ ಪಡೆದಿದೆ.

ಮಲೇಷ್ಯಾ ವಿರುದ್ಧ 2ನೇ ಜಯ: ಈ ಕೂಟದಲ್ಲಿ ಭಾರತ ಮಲೇಷ್ಯಾವಿರುದ್ಧ 2ನೇ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಸೂಪರ್‌ 4ರ ಹಂತದಲ್ಲಿ ಭಾರತ ತಂಡ 6-2 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಭಾರತದ ಪರ ಆಕಾಶ್‌ದೀಪ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌, ಎಸ್‌.ಕೆ.ಉತ್ತಪ್ಪ, ಗುರ್ಜಂತ್‌, ಎಸ್‌.ವಿ.ಸುನೀಲ್‌, ಸರ್ದಾರ್‌ ಸಿಂಗ್‌ ತಲಾ ಒಂದು ಗೋಲು ಸಿಡಿಸಿದ್ದರು.

ಸೋಲನ್ನೇ ಕಾಣದ ಅಜೇಯ ಭಾರತ
ಪ್ರಸಕ್ತ ಏಷ್ಯಾಕಪ್‌ ಹಾಕಿಯಲ್ಲಿ ಭಾರತ ಸೋಲನ್ನೇ ಕಂಡಿಲ್ಲ. ಸೂಪರ್‌ 4ರ ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸಿದ್ದೊಂದೇ ಭಾರತದ ಕಳಪೆ ಪ್ರದರ್ಶನ. ಉಳಿದಂತೆ ಪಾಕಿಸ್ತಾನವನ್ನು 2 ಬಾರಿ, ಮಲೇಷ್ಯಾವನ್ನು 2 ಬಾರಿ ಸೋಲಿಸಿದೆ. ಜಪಾನ್‌, ಬಾಂಗ್ಲಾದೇಶ ವಿರುದ್ಧ ತಲಾ ಒಂದು ಪಂದ್ಯದಲ್ಲಿ ಗೆಲುವು ಪಡೆದಿದೆ. ಗೆದ್ದ ಅಷ್ಟೂ ಪಂದ್ಯಗಳಲ್ಲಿ ಎದುರಾಳಿಗಳನ್ನು ಧೂಳೀಪಟವೆಬ್ಬಿಸಿದೆ.

ಭಾರತಕ್ಕೆ 3ನೇ ಬಾರಿಗೆ ಏಷ್ಯಾಕಪ್‌ ಪ್ರಶಸ್ತಿ
ಫೈನಲ್‌ನಲ್ಲಿ ಮಲೇಷ್ಯಾ ತಂಡವನ್ನು ಸೋಲಿಸುವ ಮೂಲಕ ಭಾರತ 3ನೇ ಬಾರಿಗೆ ಏಷ್ಯಕಪ್‌ ಹಾಕಿ ಪ್ರಶಸ್ತಿ ಪಡೆದಿದೆ. ಇದಕ್ಕೂ ಮುನ್ನ ಭಾರತ 2003ರಲ್ಲಿ ಮತ್ತು 2007ರಲ್ಲಿ ಪ್ರಶಸ್ತಿ ಪಡೆದಿತ್ತು. 2003ರಲ್ಲಿ 4-2ರಿಂದ ಪಾಕಿಸ್ತಾನವನ್ನು ಸೋಲಿಸಿ  ಪ್ರಶಸ್ತಿ ಗೆದ್ದಿದ್ದರೆ, 2007ರಲ್ಲಿ ಭಾರತ 7-2ರಿಂದ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿ ಪ್ರಶಸ್ತಿ ಮೇಲೆ ಕೈಯಿಟ್ಟಿತ್ತು. ಭಾರತ ಒಟ್ಟು 8 ಬಾರಿ ಫೈನಲ್‌ ಪ್ರವೇಶಿಸಿದೆ. ಅದರಲ್ಲಿ 5 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದೆ. ಒಟ್ಟಾರೆ ದಕ್ಷಣ ಕೊರಿಯಾ ಗರಿಷ್ಠ ಬಾರಿ (4 ) ಪ್ರಶಸ್ತಿ ಪಡೆದಿದೆ. ಉಳಿದಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ತಲಾ 3 ಬಾರಿ ಪ್ರಶಸ್ತಿ ಪಡೆದು 2ನೇ ಸ್ಥಾನದಲ್ಲಿವೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.