ಸಿಎಂ- ಸಚಿವರಿಗೆ 500 ಕೋಟಿ ಕಿಕ್ಬ್ಯಾಕ್: ರವಿ
Team Udayavani, Jan 14, 2017, 3:45 AM IST
ಬಾಗಲಕೋಟೆ: ಸಾವಿರಾರು ಕೋಟಿ ಮೊತ್ತದ ಸ್ಟೀಲ್ ಬ್ರಿಜ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲವು ಸಚಿವರಿಗೆ 500 ಕೋಟಿಯಷ್ಟು ಕಿಕ್ಬ್ಯಾಗ್ ಹೋಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಜ್ ನಿರ್ಮಿಸಲು ಒಟ್ಟು ಯೋಜನಾ ವೆಚ್ಚ 1300 ಕೋಟಿ ಮಾತ್ರ. ಆದರೆ, ಸರ್ಕಾರ 2300 ಕೋಟಿ ಮೊತ್ತಕ್ಕೆ ಟೆಂಡರ್ ಕರೆದಿದೆ. ಇನ್ನೂ 1000 ಕೋಟಿ ಹೆಚ್ಚಿಗೆ ಟೆಂಡರ್ ಕರೆದಿರುವ ಗುಟ್ಟೇನು? ನೋಟು ರದ್ದತಿಯಿಂದ ಕಂಗಾಲಾಗಿರುವ ಕಾಂಗ್ರೆಸಿಗರು, ಈ ಕಾಮಗಾರಿಯಿಂದ 500 ಕೋಟಿ ಮೊತ್ತವನ್ನು ಕಿಕ್ಬ್ಯಾಗ್ ಮೂಲಕ ಪಡೆಯಲು ಮುಂದಾಗಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು